ಕಾಸರಗೋಡು: ಜಿಲ್ಲೆಯ 336 ವಿಶೇಷ ಚೇತನರಿಗೆ ಸಹಾಯಕ ಉಪಕರಣಗಳ ವಿತರಣೆ ಪಡನ್ನಕ್ಕಾಡ್ ನೆಹರೂ ಕಲಾ-ವಿಜ್ಞಾನ ಕಾಲೇಜಿನಲ್ಲಿ ಜರುಗಿತು. ಜಿಲ್ಲಾಡಳಿತೆ ವಿಶೇಷ ಚೇತನರಿಗಾಗಿ ಜಾರಿಗೊಳಿಸುವ ವೀ ಡಿಸರ್ವ್ ಯೋಜನೆ ಅಂಗವಾಗಿ ಸಮಾರಂಭ ನಡೆಯಿತು.
ಎನ್.ಎಸ್.ಎಸ್. ಯೂನಿಟ್ಗಳಿಗೆ, ವಿವಿಧ ಇಲಾಖೆಗಳಿಗೆ ಅರ್ಹತಾಪತ್ರ ವಿತರಣೆ ನಡೆಸಲಾಯಿತು. 2016 ರಾಷ್ಟ್ರೀಯ ಅಂಗವಿಕಲತೆ ಕಾಯಿದೆ ಜಾರಿಗೊಳಿಸುವ ಪ್ರಪ್ರಥಮ ಜಿಲ್ಲೆ ಕಾಸರಗೋಡು ಆಗಿದೆ ಎಂದು ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಅರ್ಹರಿಗೆ ಅಗತ್ಯದ ಸಲಕರಣೆಗಳನ್ನು ಸೂಕ್ತ ಅವ„ಯಲ್ಲಿ ಒದಗಿಸುವುದು ವೀ ಡಿಸರ್ವ್ ಯೋಜನೆಯ ಉದ್ದೇಶವಾಗಿದ್ದು, ಇದಕ್ಕೆ ಪೂರಕವಾಗಿ ವೆಬ್ಸೈಟ್ನ್ನು ಸಿದ್ಧ್ದಪಡಿಸಲಾಗಿದ್ದು, ಇದಕ್ಕೆ ಚಾಲನೆ ನೀಡಲಿದೆ.
ಕೇಂದ್ರ ಸರಕಾರದ ಎ.ಡಿ.ಐ.ಪಿ. ಯೋಜನೆಯೊಂದಿಗೆ ಸಹಕರಿಸಿ ವೀ ಡಿಸರ್ವ್ ಯೋಜನೆ ಜಾರಿಗೊಳ್ಳುತ್ತಿದೆ. ಎ.ಡಿ.ಐ.ಪಿ. ಯೋಜನೆ ಪ್ರಕಾರ ಜಿಲ್ಲೆಯಲ್ಲಿ ನಡೆಸಲಾದ ಕ್ಯಾಂಪ್ಗಳಲ್ಲಿ ಆಯ್ಕೆಗೊಂಡ 336 ಮಂದಿಗೆ ಕೇಂದ್ರ ಸರಕಾರದ ಸಂಸ್ಥೆಯಾಗಿರುವ ಆಲಿಂಕೋದ ಸಹಕಾರದೊಂದಿಗೆ ಸಹಾಯ ಉಪಕರಣಗಳನ್ನು ವಿತರಿಸಲಾಗಿದೆ. ಜಿಲ್ಲಾಡಳಿತೆಗಾಗಿ ಕೇರಳ ಸಾಮಾಜಿಕ ಸುರಕ್ಷಾ ಮಿಷನ್ ಯೋಜನೆಯ ಏಕೀಕರಣ ನಡೆಸಿದೆ. ಗಾಲಿಚಕ್ರ, ಎಂ.ಆರ್.ಕಿಟ್, ಬ್ರೈಲ್ಕೈನ್, ಸ್ಮಾರ್ಟ್ ಫೆÇೀನ್, ಶ್ರವಣ ಸಹಾಯ ಯಂತ್ರ, ವಿವಿಧ ರೀತಿಯ ಕ್ರಚಸ್ ಇತ್ಯಾದಿ ಉಪಕರಣಗಳನ್ನು ವಿತರಿಸಲಾಗಿದೆ.
ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಎಂಡೋಸಲಾನ್ ಸಂತ್ರಸ್ತೆ ಮುನೀಸಾ ಅಂಬಲತ್ತರೆ ಅವರಿಗೆ ಬ್ರೈಲ್ಕೈನ್ ಮತ್ತು ಸ್ಮಾರ್ಟ್ ಫೆÇೀನ್ ಹಸ್ತಾಂತರಿಸುವ ಮೂಲಕ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಂಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷೆ ಗಂಗಾ ರಾಧಾಕೃಷ್ಣನ್, ಜಿಲ್ಲಾ ವೈದಾಧಿಕಾರಿ ಡಾ.ಎ.ಪಿ.ದಿನೇಶ್ ಕುಮಾರ್, ಜಿಲ್ಲಾ ಸಾಮಾಜಿಕ ನ್ಯಾಯ ಅ„ಕಾರಿ ಬಿ.ಭಾಸ್ಕರನ್, ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಅ„ಕಾರಿ ಡೀನಾ ಭರತನ್, ಕುಟುಂಬಶ್ರೀ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್, ಕೆ.ಎಸ್.ಎಸ್.ಎಂ. ಜಿಲ್ಲಾ ಸಂಚಾಲಕ ಷಿಜೋ ಜೇಮ್ಸ್, ನೆಹರೂ ಕಾಲೇಜು ಪ್ರಾಂಶುಪಾಲ ಟಿ.ವಿಜಯನ್ ಉಪಸ್ಥಿತರಿದ್ದರು. ಆಲಿಂಕೋ ಅಧಿಕಾರಿ ಲಿಟನ್ ಸರ್ಕಾರ್ ಅವರು ಅತಿಥಿಗಳನ್ನು ಗೌರವಿಸಿದರು.


