HEALTH TIPS

ವನಿತಾ ವಿಂಗ್ ವತಿಯಿಂದ ವ್ಯಾಪಾರಿ ದಿನದ ಅಂಗವಾಗಿ ಕನ್ನೆಪ್ಪಾಡಿ ಆಶ್ರಯಕ್ಕೆ ಸಹಾಯಹಸ್ತ


       ಬದಿಯಡ್ಕ: ಹಿಂದು ಸೇವ ಪ್ರತಿಷ್ಠಾನದ ನೇತೃತ್ವದಲ್ಲಿ ನಡೆಯುತ್ತಿರುವ ಜನಸೇವ ವಿಶ್ವಸ್ಥ ನಿಧಿಯ ಆಶ್ರಯ ಕನ್ನೆಪ್ಪಾಡಿ ಆಶ್ರಮಕ್ಕೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಕಾಸರಗೋಡು ಘಟಕ ವನಿತಾ ವಿಂಗ್‍ನ ಸದಸ್ಯರು ವ್ಯಾಪಾರಿದಿನದ ಪ್ರಯುಕ್ತ ಆಶ್ರಮವಾಸಿಗಳಿಗೆ ಬೆಡ್‍ಶೀಟ್, ಗೋವುಗಳಿಗೆ ಆಹಾರ ಹಾಗೂ 5000 ರೂಪಾಯಿಯ ಚೆಕ್ ಅನ್ನು ನೀಡಿದರು. ಜನಸೇವ ವಿಶ್ವಸ್ಥರಾದ ಪುದುಕೋಳಿ ಶ್ರೀಕೃಷ್ಣ ಭಟ್, ಗಣೇಶಕೃಷ್ಣ ಅಳಕ್ಕೆ ಚೆಕ್ ಪಡೆದುಕೊಂಡರು. ಇದೇ ವೇಳೆ ವನಿತಾ ವಿಂಗ್‍ನ ಸದಸ್ಯರು ಅನ್ನಸಂತರ್ಪಣೆ ಸೇವಾನಿಧಿಯ ಹುಂಡಿಗಳನ್ನು ಪಡೆದುಕೊಂಡು ಸಂಪೂರ್ಣ ಸಹಕಾರವನ್ನು ನೀಡುವ ಭರವಸೆಯನ್ನು ವ್ಯಕ್ತಪಡಿಸಿದರು. ಆಶ್ರಮದ ವ್ಯವಸ್ಥಾಪನಾ ಪ್ರಮುಖ್ ರಮೇಶ್ ಆಶ್ರಮದ ಕಿರುಪರಿಚಯವನ್ನು ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries