HEALTH TIPS

ಸೆ.8 ರಂದು ಹೊಸಂಗಡಿಯಲ್ಲಿ ಸೋಣದ ಪರ್ಬ, `ಗುರುಶ್ರೀ' ಬಂಗಾರದ ಪದಕ ವಿತರಣೆ

      ಮಂಜೇಶ್ವರ: ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಜಿಲ್ಲಾ ಸಮಿತಿ ಕಾಸರಗೋಡು ಇದರ 11 ನೇ ವಾರ್ಷಿಕೋತ್ಸವದ ಸಲುವಾಗಿ ಸೋಣದ ಪರ್ಬ, ದಶಮ ಸಂಭ್ರಮದ `ದೇಯಿ' ಸ್ಮರಣೆ ಸಂಚಿಕೆ ಬಿಡುಗಡೆ, ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ `ಗುರುಶ್ರೀ' ಬಂಗಾರದ ಪದಕ ವಿತರಣೆ, ಐದು ಮಕ್ಕಳಿಗೆ ಬೆಳ್ಳಿ ಪದಕ ವಿತರಣೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಸೆ.8 ರಂದು ರವಿವಾರ ಬೆಳಗ್ಗೆ 10 ರಿಂದ ಹೊಸಂಗಡಿಯ ಹಿಲ್‍ಸೈಡ್ ಆಡಿಟೋರಿಯಂನಲ್ಲಿ ನಡೆಯಲಿದೆ.
     ವಿ4 ಚಾನೆಲ್ ಖ್ಯಾತಿಯ ಕಾಮಿಡಿ ಎಕ್ಸ್‍ಪ್ರೆಸ್ ತಂಡದಿಂದ ಬಂಜರ ತೆಲಿಪುಲೆ ಎಂಬ ಹಾಸ್ಯಮಯ ಕಾರ್ಯಕ್ರಮ ನಡೆಯುವುದು. ನಂತರ ಸಭಾ ಕಾರ್ಯಕ್ರಮ ನಡೆಯಲಿದ್ದು ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಡಿ.ಡಿ.ಕಟ್ಟೆಮಾರ್ ಮಂಗಳೂರು, ಯುವ ವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಜಯಂತ್ ನಡುಬೈಲ್ ಪುತ್ತೂರು, ಆತ್ಮಶಕ್ತಿ ವಿವಿದ್ಧೋದೇಶ ಸಹಕಾರಿ ಸಂಘ ಮಂಗಳೂರು ಇದರ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್, ಸೀನಿಯರ್ ಬ್ಯಾಂಕ್ ಪ್ರಬಂಧಕ ಅಶ್ವಿನಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಯೋಜನಾಧಿಕಾರಿ ಚೇತನ ಎಂ., ಕಾಪಿಕಾಡ್ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್, ಜ್ಯೋತಿಷಿ ಜಯಶಂಕರ್ ಮಂಜೇಶ್ವರ, ಸುರೇಶ್ ಕೆ.ಪಿ, ಬಾಬು, ಶಾಸ್ತ ಕಿನ್ಯಾ, ಸುರಾಜ್, ಚಂದ್ರಹಾಸ ಸುವರ್ಣ, ನವೀನ್ ಪೂಜಾರಿ, ಕೃಷ್ಣಪ್ಪ ಪೂಜಾರಿ, ಚಂದ್ರಹಾಸ ಪಂಡಿತ್ ಹೌಸ್, ಅಶ್ವತ್ ಪೂಜಾರಿ, ವೇಣುಗೋಪಾಲ, ನಾರಾಯಣ ಪೂಜಾರಿ ಮೊದಲಾದವರು ಉಪಸ್ಥಿತರಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries