HEALTH TIPS

ಗೋಸಾಡ ಬ್ರಹ್ಮಕಲಶೋತ್ಸವ ಪ್ರಚಾರ ಸಮಿತಿಯು ರಂಗಕ್ಕೆ

   
        ಬದಿಯಡ್ಕ: ಗೋಸಾಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಚಾರಣಾರ್ಥ ಪ್ರಚಾರ ಸಮಿತಿಯು ಕಾರ್ಯಪ್ರವೃತ್ತವಾಗಿದ್ದು, ಊರಿನ ವಿವಿಧೆಡೆಗಳಲ್ಲಿ ಬ್ಯಾನರ್‍ಗಳನ್ನು ಸ್ಥಾಪಿಸಲಾಗಿದೆ. ರಾತ್ರಿ ಹಗಲೆನ್ನದೆ ಬೇರೆ ಬೇರೆ ಕಡೆಗಳಲ್ಲಿ ರಚಿಸಲಾದ ವಿವಿಧ ಉಪಸಮಿತಿಯ ಕಾರ್ಯಕರ್ತರು ಸಹಕರಿಸಿದರು. ಪ್ರಚಾರಣಾರ್ಥ ಹೊರತಂದ ಸ್ಟಿಕ್ಕರ್‍ನ್ನು ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುದ್ಕಾಡಿ ನಾರಾಯಣ ರೈ ಬಿಡುಗಡೆಗೊಳಿಸಿದರು. ಫೆ.6ರಿಂದ 12ರ ತನಕ ಬ್ರಹ್ಮಕಲಶ ಮಹೋತ್ಸವವು ಜರಗಲಿರುವುದು.  ಪ್ರಚಾರ ಸಮಿತಿಯ ಸಂಚಾಲಕ ಸುನಿಲ್ ಪಿ.ಆರ್., ವಿವಿಧ ಸಮಿತಿಗಳ ಪದಾಧಿಕಾರಿಗಳಾದ ನಾರಾಯಣ ಗೋಸಾಡ, ಪರಮೇಶ್ವರ ಭಟ್ ಗೋಸಾಡ, ಪ್ರಭಾಕರ ರೈ ಮಠದಮೂಲೆ, ಎಂ.ಸುಧಾಮ ಗೋಸಾಡ, ಶಿವರಾಮ (ದಾಮು), ಪ್ರ.ಅರ್ಚಕ ರಾಘವೇಂದ್ರ ಚಡಗ, ರವೀಂದ್ರ ರೈ ಗೋಸಾಡ, ಸದಾಶಿವ ರೈ ಗೋಸಾಡ, ಸತೀಶ್ ರೈ ಗೋಸಾಡ, ಸುಧಾಕರ ರೈ ತೋಟದಮೂಲೆ ಜೊತೆಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries