HEALTH TIPS

ಸಮರಸ ಟ್ರಸ್ಟ್ ಮುಳ್ಳೇರಿಯಾದ ಸಮರಸ ಭೂಮಿಯಲ್ಲಿ ಭೂಶುಧ್ಯಾದಿ ಕಾರ್ಯಕ್ರಮ ಸಂಪನ್ನ


       ಮುಳ್ಳೇರಿಯ: ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದಶನದಲ್ಲಿ ಮುನ್ನಡೆಯುತ್ತಿರುವ ಶ್ರೀ ರಾಮಚಂದ್ರಾಪುರಮಠದ ಅಂಗಸಂಸ್ಥೆಯಾದ ಸಮರಸ ಟ್ರಸ್ಟ್ ಮುಳ್ಳೇರಿಯಾದ ಸಮರಸ ಭೂಮಿಯಲ್ಲಿ ಶ್ರೀ ಗುರುಗಳ ನಿರ್ದೇಶನ-ಮಾರ್ಗದರ್ಶನದಂತೆ ಭೂಶುದ್ಧಿ, 1008 ಸಂಖ್ಯೆಯಲ್ಲಿ ಬಾಲಗಣಪತಿ ಹವನ, 12 ನಾಳಿಕೇರ ಗಣಪತಿ ಹವನ, ಕಲಶ ಪ್ರತಿಷ್ಠಾಪಿಸಿ ಹತ್ತು ಸಾವಿರ ಸಂಖ್ಯೆಯಿಂದ ವನದುರ್ಗಾ ಜಪ ಸಂಪನ್ನವಾಯಿತು.
        ಮುಳ್ಳೇರಿಯಾ ಮಂಡಲದ ವೈದಿಕ ಪ್ರಮುಖ ವೇದಮೂರ್ತಿ ವೆಂಕಟೇಶ್ವರ ಭಟ್  ಉಪಸ್ಥಿತರಿದ್ದು, ಸಮಷ್ಠಿಯ ಸಮಾಜದ ಅಗತ್ಯತೆಯ ಹಾಗೂ ಈ ದಿಶೆಯಲ್ಲಿ ನಡೆಸಿದ ಧಾರ್ಮೀಕ ಕರ್ಮಗಳು ನಮಗೆಲ್ಲರಿಗೂ ಅಭಿವೃದ್ಧಿಪ್ರದವಾದ ಮಾರ್ಗವನ್ನನುಗ್ರಹಿಸಲಿ ಎಂದೂ, ಈ ಸಮರಸವು ಅನ್ವರ್ಥವಾಗಿ ಸಮಾಜಕ್ಕೆ ಪ್ರಯೋಜನಪ್ರದವಾಗಲಿ ಎಂದೂ ಹಾರೈಸಿದರು. ರಾತ್ರಿ ವನದುರ್ಗಾ ಪೂಜೆ-ಹವನವು ಮಠದ ಧರ್ಮಖಂಡದ ಸಂಯೋಜಕರಾದ ಕೂಟೇಲು ಕೇಶವ ಪ್ರಸಾದ ಭಟ್ ಅವರ ನೇತೃತ್ವದಲ್ಲಿ ಮುಳ್ಳೇರಿಯಾ ಮಂಡಲದ ವೈದಿಕ-ಭಕ್ತವೃಂದದ ಸಹಯೋಗದಲ್ಲಿ ಮಂಡಲ,  ವಲಯ ಶಾಸನತಂತ್ರದ ಪದಾಧಿಕಾರಿಗಳ  ಉಪಸ್ಥಿತಿಯಲ್ಲಿ ಸಂಪನ್ನವಾಯಿತು.
    ದೇವಿ ಸ್ತೋತ್ರ-ಮಂತ್ರ ಜಪ ಪುರಸ್ಸರ ತರ್ಪಣ ನಡೆಯಿತು. ಮಾತೆಯರು ಕುಂಕುಮಾರ್ಚನೆ, ಶ್ರೀ ಲಕ್ಷ್ಮೀನರಸಿಂಹಕರಾವಲಂಬನ ಸ್ತೋತ್ರ ಪಠನ, ವನದುರ್ಗಾ ಸ್ತೋತ್ರ ಪಠನ ನಡೆಸಿದರು. ಪೂಜಿತ ಕಲಶ ಪೆÇ್ರೀಕ್ಷಣೆ, ಹವನ ಸಂಪಾತ ಸ್ಥಳ ಸ್ಪರ್ಶ ಮಾಡಲಾಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries