ಮಂಜೇಶ್ವರ: ಮಜಿಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೋತ್ಸವ ಸಂಭ್ರಮದಿಂದ ಜರಗಿತು. ಮಕ್ಕಳ ಹಿರಿಮೆ ಹಾಗೂ ಕಲಿಕಾ ಸಾಧನೆಗಳನ್ನು ಪ್ರದರ್ಶಿಸುವ ಈ ಕಲಿಕೋತ್ಸವವನ್ನು ಮಜಿಬೈಲು ಗ್ರಾಮ ಪಂಚಾಯತಿ ಸದಸ್ಯ ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ ಮಜಿಬೈಲು ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಉಪಜಿಲ್ಲಾ ನಿವೃತ್ತ ಶಿಕ್ಷಣಾಧಿಕಾರಿ ಎಂ ಜಿ ನಾರಾಯಣ ರಾವ್ , ಮಂಜೇಶ್ವರ ಬಿ ಆರ್ ಸಿ ಯ ಸಿ.ಆರ್.ಸಿ. ಸಂಯೋಜಕ ದಿವ್ಯ ಹಾಗೂ ಮೋಹಿನಿ ಕುಮಾರಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಜೊತೆ ಕಾರ್ಯದರ್ಶಿ ಫೆÇ್ಲೀರಿನ್ ಮೊಂತೇರೋ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಸುರೇಶ್ ಬಂಗೇರ ಸ್ವಾಗತಿಸಿ, ಹಿರಿಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ವಂದಿಸಿದರು.
ಮಜಿಬೈಲು ಶಾಲೆಯಲ್ಲಿ ಸಂಭ್ರಮದ ಕಲಿಕೋತ್ಸವ
0
ಮಾರ್ಚ್ 15, 2020
ಮಂಜೇಶ್ವರ: ಮಜಿಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೋತ್ಸವ ಸಂಭ್ರಮದಿಂದ ಜರಗಿತು. ಮಕ್ಕಳ ಹಿರಿಮೆ ಹಾಗೂ ಕಲಿಕಾ ಸಾಧನೆಗಳನ್ನು ಪ್ರದರ್ಶಿಸುವ ಈ ಕಲಿಕೋತ್ಸವವನ್ನು ಮಜಿಬೈಲು ಗ್ರಾಮ ಪಂಚಾಯತಿ ಸದಸ್ಯ ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ ಮಜಿಬೈಲು ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಉಪಜಿಲ್ಲಾ ನಿವೃತ್ತ ಶಿಕ್ಷಣಾಧಿಕಾರಿ ಎಂ ಜಿ ನಾರಾಯಣ ರಾವ್ , ಮಂಜೇಶ್ವರ ಬಿ ಆರ್ ಸಿ ಯ ಸಿ.ಆರ್.ಸಿ. ಸಂಯೋಜಕ ದಿವ್ಯ ಹಾಗೂ ಮೋಹಿನಿ ಕುಮಾರಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಜೊತೆ ಕಾರ್ಯದರ್ಶಿ ಫೆÇ್ಲೀರಿನ್ ಮೊಂತೇರೋ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಸುರೇಶ್ ಬಂಗೇರ ಸ್ವಾಗತಿಸಿ, ಹಿರಿಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ವಂದಿಸಿದರು.


