ಬದಿಯಡ್ಕ: ಅನ್ವಯಿಕ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ರ್ಯಾಂಕ್ ನೊಂದಿಗೆ 2 ಸ್ವರ್ಣಪದಕ ಪ್ರಶಸ್ತಿಯನ್ನು ಪಡೆದುಕೊಂಡು ಊರಿಗೆ ಆಗಮಿಸಿದ ಶೋಭಿತಾ ಪದ್ಮಾರು ಇವರನ್ನು ಕುಂಬ್ಡಾಜೆ ಗ್ರಾಮಪಂಚಾಯಿತಿ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಊರಿನ ಪ್ರಮುಖರು ಆತ್ಮೀಯವಾಗಿ ಬರಮಾಡಿಕೊಂಡರು. ಗ್ರಾ.ಪಂ. ಸದಸ್ಯ ಶಶಿಧರ ತೆಕ್ಕೆಮೂಲೆ ಅವರು ಶಾಲು ಹೊದಿಸಿ, ಪುಷ್ಪ ಗುಚ್ಛ ನೀಡಿದರು. ಗ್ರಾಮಪಂಚಾಯಿತಿ ಸದಸ್ಯರುಗಳಾದ ರವೀಂದ್ರ ರೈ ಗೋಸಾಡ, ಶಾಂತಾ ಎಸ್. ಭಟ್ ಹಾಗೂ ಸ್ಥಳೀಯರಾದ ಸದಾಶಿವ ರೈ ಗೋಸಾಡ, ಗೋಪಾಲಕೃಷ್ಣ ಸಿ. ಎಚ್., ರಮೇಶ್ ಕೃಷ್ಣ ಪದ್ಮಾರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರ್ಯಾಂಕ್ ವಿಜೇತೆ ಶೋಭಿತಾಗೆ ಆತ್ಮೀಯ ಸ್ವಾಗತ
0
March 02, 2020
ಬದಿಯಡ್ಕ: ಅನ್ವಯಿಕ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ರ್ಯಾಂಕ್ ನೊಂದಿಗೆ 2 ಸ್ವರ್ಣಪದಕ ಪ್ರಶಸ್ತಿಯನ್ನು ಪಡೆದುಕೊಂಡು ಊರಿಗೆ ಆಗಮಿಸಿದ ಶೋಭಿತಾ ಪದ್ಮಾರು ಇವರನ್ನು ಕುಂಬ್ಡಾಜೆ ಗ್ರಾಮಪಂಚಾಯಿತಿ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಊರಿನ ಪ್ರಮುಖರು ಆತ್ಮೀಯವಾಗಿ ಬರಮಾಡಿಕೊಂಡರು. ಗ್ರಾ.ಪಂ. ಸದಸ್ಯ ಶಶಿಧರ ತೆಕ್ಕೆಮೂಲೆ ಅವರು ಶಾಲು ಹೊದಿಸಿ, ಪುಷ್ಪ ಗುಚ್ಛ ನೀಡಿದರು. ಗ್ರಾಮಪಂಚಾಯಿತಿ ಸದಸ್ಯರುಗಳಾದ ರವೀಂದ್ರ ರೈ ಗೋಸಾಡ, ಶಾಂತಾ ಎಸ್. ಭಟ್ ಹಾಗೂ ಸ್ಥಳೀಯರಾದ ಸದಾಶಿವ ರೈ ಗೋಸಾಡ, ಗೋಪಾಲಕೃಷ್ಣ ಸಿ. ಎಚ್., ರಮೇಶ್ ಕೃಷ್ಣ ಪದ್ಮಾರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.