ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಇಂದು ಹೊಸ ಕೊರೊನಾ ಪ್ರಕರಣ ದಾಖಲಾಗಿಲ್ಲ. ಇದೇ ವೇಳೆ ಒಬ್ಬರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದು ವರೆಗೆ 175 ಮಂದಿಯಲ್ಲಿ ಕೊರೊನಾ ದೃಢವಾಗಿದ್ದು, ಅವರ ಪೈಕಿ 160 ಮಂದಿ ಗುಣಮುಖರಾಗಿದ್ದಾರೆ. 15 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿನಿಂದ ಇವರು ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಗುಣಮುಖರಾದವರು ಶೇ.91.4 ಆಗಿದ್ದಾರೆ.
ಜಿಲ್ಲೆಯಲ್ಲಿ 2197 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 2165 ಮಂದಿ ಮನೆಗಳಲ್ಲಿ, 32 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ನೂತನವಾಗಿ ಇಬ್ಬರನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. 3791 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಲಭ್ಯ 3104 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
ಕೇರಳದಲ್ಲಿ 11 ಮಂದಿಗೆ ಸೋಂಕು ದೃಢ :
ಕೇರಳ ರಾಜ್ಯದಲ್ಲಿ ಇಂದು ಒಟ್ಟು 11 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದ್ದು, ಇದರಲ್ಲಿ ಇಡುಕ್ಕಿ ಜಿಲ್ಲೆ-6 ಮತ್ತು ಕೋಟ್ಟಯಂ ಜಿಲ್ಲೆ-5 ಮಂದಿ ಒಳಗೊಂಡಿದ್ದಾರೆ. ರವಿವಾರ ರಾಜ್ಯದ ಕಾಸರಗೋಡು, ಕಣ್ಣೂರು, ತಿರುವನಂತಪುರ ಮತ್ತು ಮಲಪ್ಪುರ ಜಿಲ್ಲೆಯ ತಲಾ ಒಬ್ಬರು ಗುಣಮುಖರಾಗಿದ್ದಾರೆ.
ಇಡುಕ್ಕಿ ಜಿಲ್ಲೆಯ ಆರು ಮಂದಿಯಲ್ಲಿ ಒಬ್ಬರು ವಿದೇಶದಿಂದ(ಸ್ಪೈನ್) ಬಂದವರು. ಇಬ್ಬರು ತಮಿಳುನಾಡಿನಿಂದ ಬಂದವರು. ಮೂವರಿಗೆ ಸಂಪರ್ಕ ಮೂಲಕ ರೋಗ ಬಾಧಿಸಿದೆ. ಇದರಲ್ಲಿ ಒಬ್ಬರು ಡಾಕ್ಟರ್ ಆಗಿದ್ದಾರೆ. ಕೋಟ್ಟಯಂ ಜಿಲ್ಲೆಯಲ್ಲಿ ಒಬ್ಬರು ಅನ್ಯ ರಾಜ್ಯದಿಂದ ಬಂದವರು. ನಾಲ್ವರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಇವರಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರಾಗಿದ್ದಾರೆ.
ಕೇರಳದಲ್ಲಿ ಇದು ವರೆಗೆ 342 ಮಂದಿ ರೋಗ ಮುಕ್ತರಾಗಿದ್ದು, 123 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ 20127 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 19,665 ಮಂದಿ ಮನೆಗಳಲ್ಲೂ, 462 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ರವಿವಾರ ಶಂಕಿತ 99 ಮಂದಿಯನ್ನು ವಿವಿಧ ಆಸ್ಪತ್ರೆಗೆ ಸೇರಿಸಲಾಗಿದೆ. ರೋಗ ಲಕ್ಷಣಗಳಿರುವ 22954 ಮಂದಿಯ ಸ್ಯಾಂಪಲ್ಗಳನ್ನು ಲ್ಯಾಬ್ಗೆ ಕಳುಹಿಸಿದ್ದು, ಇದರಲ್ಲಿ ಲಭ್ಯ 21997 ಸ್ಯಾಂಪಲ್ ನೆಗೆಟಿವ್ ಆಗಿದೆ. ಹೊಸದಾಗಿ ಮೂರು ಹಾಟ್ಸ್ಪಾಟ್ಗಳನ್ನು ಸೇರ್ಪಡೆಗೊಳಿಸಲಾಗಿದೆ. ಕೊಲ್ಲಂ ಜಿಲ್ಲೆಯ ಚಾತನ್ನೂರು, ಶಾಸ್ತಾಂಗೋಡು, ಕೊಲ್ಲಂ ಜಿಲ್ಲೆಯ ಮನ್ನಾರ್ಕ್ಕಾಡ್ ಪ್ರದೇಶ ಹಾಟ್ಸ್ಪಾಟ್ ಯಾದಿಯಲ್ಲಿ ಸೇರ್ಪಡೆಗೊಂಡಿದೆ. ಇದರೊಂದಿಗೆ ಹಾಟ್ಸ್ಪಾಟ್ಗಳ ಸಂಖ್ಯೆ 87 ಕ್ಕೇರಿತು.
56 ಕೇಸು ದಾಖಲು : ಲಾಕ್ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 56 ಕೇಸುಗಳನ್ನು ದಾಖಲಿಸಲಾಗಿದೆ. 96 ಮಂದಿಯನ್ನು ಬಂ„ಸಲಾಗಿದ್ದು, 26 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1, ಕುಂಬಳೆ 8, ಕಾಸರಗೊಡು 3, ವಿದ್ಯಾನಗರ 7, ಬದಿಯಡ್ಕ 4, ಬೇಡಗಂ 5, ಮೇಲ್ಪರಂಬ 9, ಬೇಕಲ 3, ಅಂಬಲತ್ತರ 2, ನೀಲೇಶ್ವರ 4, ಚಂದೇರ 2, ಚೀಮೇನಿ 1, ವೆಳ್ಳರಿಕುಂಡ್ 3, ಚಿತ್ತಾರಿಕಲ್ 4 ಕೇಸುಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 1809 ಕೇಸುಗಳನ್ನು ದಾಖಲಿಸಲಾಗಿದೆ. 2176 ಮಂದಿಯನ್ನು ಬಂ„ಸಲಾಗಿದೆ. 736 ವಾಹನಗಳನ್ನು ವಶಪಡಿಸಲಾಗಿದೆ.
ಪೆÇಲೀಸ್ ಅಮಾನತು : ಕೊರೊನಾ ಹಿನ್ನೆಲೆಯಲ್ಲಿ ತಿಂಗಳ ವೇತನವನ್ನು ಕೊರೊನಾ ನಿಧಿಗೆ ಹಿಡಿದಿಡುವ ಸರ್ಕಾರದ ತೀರ್ಮಾನದ ವಿರುದ್ಧ ವಾಟ್ಸ್ ಆ್ಯಪ್ ಸ್ಟೇಟಸ್ನಲ್ಲಿ ಸಂದೇಶ ರವಾನಿಸಿದ ವಿದ್ಯಾನಗರ ಠಾಣೆಯ ಪೆÇಲೀಸ್ ಆಫೀಸರ್ ಟಿ.ರಜೀಶ್ ಅವರನ್ನು ಕಾಸರಗೋಡು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು ತನಿಖೆಗೆ ಗುರಿಪಡಿಸಿ ಅಮಾನತುಗೊಳಿಸಿದ್ದಾರೆ.