HEALTH TIPS

ಮುಖ್ಯಮಂತ್ರಿ ಅವರ ದುರಂತ ನಿವಾರಣೆ ನಿಧಿಗೆ ಕನ್ನಡ ಸಿನಿಮಾ ಬಾಲನಟ 10025 ರೂ. ದೇಣಿಗೆ


     ಕಾಸರಗೋಡು:  ಮುಖ್ಯಮಂತ್ರಿ ಅವರ ದುರಂತ ನಿವಾರಣೆ ನಿಧಿಗೆ 10025 ರೂ. ದೇಣಿಗೆ ನೀಡುವ ಮೂಲಕ ಕನ್ನಡ ಸಿನಿಮಾ ಬಾಲನಟ ಮಾದರಿಯಾಗಿದ್ದಾರೆ. ಕಾಸರಗೋಡು ವಿದ್ಯಾನಗರ ಬಳಿಯ ಪುದುಮಣ್ಣು ನಿವಾಸಿ ಎಂ.ಎಸ್.ಸಾಯಿಕೃಷ್ಣ ಈ ರೀತಿ ಉದಾರತೆ ಮೆರೆದಿದ್ದಾರೆ.
     ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಿಧಿಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಹಸ್ತಾಂತರಿಸಿದ್ದಾರೆ. ವೈದಿಕ ಸಮಾರಂಭಗಳ ಭೋಜನ ವೇಳೆ ಲಭಿಸುವ ದಕ್ಷಿಣೆಯನ್ನು ಸಂಗ್ರಹಿಸಿದ ಮೂಲಕ ಈ ನಿಧಿ ರೂಪುಗೊಂಡಿದೆ ಎಂದು ಇವರು ತಿಳಿಸಿದರು. 7 ನೇ ತರಗತಿ ವಿದ್ಯಾರ್ಥಿಯಾಗಿರುವ ಸಾಯಿಕೃಷ್ಣ ಅವರು ಬಹುಮುಖ ಪ್ರತಿಭೆಯಾಗಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಕೃಷ್ಣ ಕುಮಾರ್-ಶಿಕ್ಷಕಿ ಸ್ವಪ್ನಾ ದಂಪತಿ ಪುತ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries