HEALTH TIPS

ಅನಿವಾಸಿ ಭಾರತೀಯರಿಗಾಗಿ ಹೆಚ್ಚುವರಿ ಕ್ವಾರೆಂಟೈನ್ ಸಿದ್ಧತೆ-ಸಚಿವ ಚಂದ್ರಶೇಖರನ್

   

       ಕಾಸರಗೋಡು: ಆನಿವಾಸಿ ಭಾರತೀಯರು ಒಂದೇ ವೇಳೆ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಕ್ವಾರಂಟೈನ್‍ಸಿದ್ಧಪಡಿಸಲಾಗುವುದು ಎಂದು ಜನಪ್ರತಿನಿಧಿಗಳ ಮತ್ತು ನೋಡೆಲ್ ಅಧಿಕಾರಿಗಳ ಸಭೆ ತಿಳಿಸಿದೆ. ಜಿಲ್ಲಾದಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಂದಾಯ ಸಚಿನ ಇ.ಚಂದ್ರಶೇಖರನ್ ಅಧ್ಯಕ್ಷೆ ವಹಿಸಿದ್ದರು.
        ಪ್ರಸಕ್ತ ಶೌಚಾಲಯ ಒಳಗೊಂಡ 1851 ಕೊಠಡಿಗಳು, 20303 ಹಾಸುಗೆಗಗಳು ಸಿದ್ಧಪಡಿಸಲಾಗಿದೆ. ಕೋವಿಡ್-19 ಪಾಸಿಟಿವ್ ರೋಗಿಗಳಿಗಾಗಿ 903 ಹಾಸುಗೆಗಳನ್ನು ಜಿಲ್ಲೆಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು. ವಿದೇಶಗಳಿಂದ ಹೊರಡುವ ವೇಳೆ ಆ್ಯಂಟಿ ಬಾಡಿ ತಪಾಸಣೆ ನಡೆಸಿದವರನ್ನು 7 ದಿನಗಳ ಕಾಲ ಕ್ವಾರೆಂಟೈನ್‍ನಲ್ಲಿ ಇರಿಸಲಾಗುವುದು. ನಂತರ ಸ್ಯಾಂಪಲ್ ತಪಾಸಣೆಯ ಫಲಿತಾಂಶ ನೆಗೆಟಿವ್ ಇದ್ದರೆ ಮನೆಗಳಲ್ಲಿ ನಿಗಾದಲ್ಲಿದ್ದರೆ ಸಾಕು. ತಪಾಸಣೆ ಇಲ್ಲದೇ ಇರುವ ದೇಶಗಳಿಂದ ಆಗಮಿಸಿದವರನ್ನು 14 ದಿನಗಳ ಕಾಲ ಕ್ವಾರೆಂಟೈನ್‍ನಲ್ಲಿ ಇರಿಸಲಾಗುವುದು. ವಯೋವೃಧ್ಧರು, ಗರ್ಭಿಣಿಯರು, ಮಕ್ಕಳನ್ನು ಇದರಿಂದ ಹೊರತುಪಡಿಸಲಾಗುವುದು. ಪ್ರತಿರೋಧ ಚಟುವಟಿಕೆಗಳ ವಿವಿಧವಲಯಗಳ ಬಗ್ಗೆ ಚರ್ಚಿಲಾಯಿತು.ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎಂ.ರಾಜಗೋಪಾಲನ್, ಕೆ.ಕುಂuಟಿಜeಜಿiಟಿeಜರಾಮನ್,ಎನ್.ಎ.ನೆಲ್ಲಿಕುನ್ನು, ಎಂ.ಸಿ.ಕಮರುದ್ದೀನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು,ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಧಿಕಾರಿ ಅರುಣ್‍ಕೆ.ವಿಜಯನ್, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಜಿಲ್ಲಾ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು.
              ಟಾಟಾ ಆಸ್ಪತ್ರೆ ಕಾಮಗಾರಿ ಚುರುಕು:
      ರಾಜ್ಯ ಸರ್ಕಾರದ ಸಹಕಾರದೊಂದಿಗೆ ಚೆಮ್ನಾಡ್ ಗ್ರಾಮಪಂಚಾಯಿತಿಯ ತೆಕ್ಕಿಲ್ ಗ್ರಾಮದಲ್ಲಿ ನಿರ್ಮಾಣ ನಡೆಯುತ್ತಿರುವ ಟಾಟಾ ಸಮೂಹ ಸಂಸ್ಥೆಗಳ ಕೋವಿಡ್ ಆಸ್ಪತ್ರೆಯ ಕಾಮಗಾರಿ ಚುರುಕುಪಡೆದುಕೊಂಡಿದೆ. ಆಸ್ಪತ್ರೆ ಕಟ್ಟಡ ಕಾಮಗಾರಿ ಪ್ರಗತಿಪರಿಶೀಲನೆಗಾಗಿ ಕಟ್ಟಡ ನಿರ್ಮಾಣ ಪ್ರದೇಶಕ್ಕೆ ಕಂದಾಯ ಸಚಿವ ಇ.ಚಂದ್ರಶೇಖರನ್ ಭೇಟಿ ನೀಡಿದರು. ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಈ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದೆ. ಶಾಸಕ ಕೆ.ಕುಞÂರಾಮನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಕಾಸರಗೋಡು ತಹಸೀಲ್ದಾರ್ ಎ.ವಿ.ರಾಜನ್ ಜೊತೆಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries