ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ ಮತ್ತೆ 14 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಮೂರು ವರ್ಷದ ಹೆಣ್ಣು ಮಗು ಸಹಿತ 13 ಮಂದಿ ಪುರುಷರಿಗೆ ರೋಗ ದೃಢೀಕರಿಸಲಾಗಿದೆ. ಇವರಲ್ಲಿ ಇಬ್ಬರು ವಿದೇಶದಿಂದ ಬಂದಿದ್ದು, 12 ಮಂದಿ ಮಹಾರಾಷ್ಟ್ರದಿಂದ ಬಂದವರೆಂದು ಜಿಲ್ಲಾ ಮೆಡಿಕಲ್ ಆಫೀಸರ್ ಡಾ.ಎ.ವಿ.ರಾಂದಾಸ್ ತಿಳಿಸಿದ್ದಾರೆ. ಮಧೂರು ಪಂಚಾಯತ್ ನಿವಾಸಿ(36), ಕುಂಬಳೆಯ ನಿವಾಸಿ ಮಹಿಳೆಯ ಮೂರು ವರ್ಷದ ಬಾಲಕಿ, ಕಾಸರಗೋಡು ನಗರಸಭಾ ನಿವಾಸಿ(38), ಕುಂಬಳೆ ಪಂಚಾಯತ್ ನಿವಾಸಿಗಳಾದ 44, 45, ಬದಿಯಡ್ಕದ 36 ವರ್ಷದ ವ್ಯಕ್ತಿ, ಚೆಮ್ನಾಡ್ನ ನಿವಾಸಿ 29 ವರ್ಷದ ವ್ಯಕ್ತಿ, 39 ವರ್ಷದ ಚೆರ್ವತ್ತೂರು ನಿವಾಸಿ, 54 ಮತ್ತು 39 ವರ್ಷದ ಮಂಗಲ್ಪಾಡಿ ನಿವಾಸಿ, 49, 46 ಮತ್ತು 56 ವರ್ಷದ ಮೀಂಜ ನಿವಾಸಿ, 39 ವರ್ಷ ಪ್ರಾಯದ ಪೈವಳಿಕೆ ನಿವಾಸಿಗೆ ರೋಗ ಬಾಧಿಸಿದೆ.
ಕೇರಳದಲ್ಲಿ 578 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಸೋಮವಾರ 57 ಮಂದಿಗೆ ಕೊರೊನಾ ಸೋಂಕು ಬಾಧಿಸಿದೆ. ಇದೇ ವೇಳೆ ರಾಜ್ಯದಲ್ಲಿ 18 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಕಾಸರಗೋಡು-14, ತಿರುವನಂತಪುರ-3, ಕೊಲ್ಲಂ-5, ಪತ್ತನಂತಿಟ್ಟ-4, ಆಲಪ್ಪುಳ-2, ಇಡುಕ್ಕಿ-1, ಎರ್ನಾಕುಳಂ-3, ತೃಶ್ಶೂರು-9, ಮಲಪ್ಪುರಂ-14, ಪಾಲ್ಘಾಟ್-2 ಎಂಬಂತೆ ಸೋಮವಾರ ರೋಗ ಬಾ„ಸಿದೆ. ಕಲ್ಲಿಕೋಟೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಲೇಖಾ ಸಾವಿಗೀಡಾಗುವುದರೊಂದಿಗೆ ಕೇರಳದಲ್ಲಿ ಕೊರೊನಾ ವೈರಸ್ನಿಂದ ಸಾವಿಗೀಡಾದವರ ಸಂಖ್ಯೆ 10 ಕ್ಕೇರಿತು. ಇವರು ಕೊಲ್ಲಿಯಿಂದ ಬಂದಿದ್ದರು. ರಾಜ್ಯದಲ್ಲಿ ಈ ವರೆಗೆ 1326 ಮಂದಿಗೆ ರೋಗ ಬಾಧಿಸಿದ್ದು, ಪ್ರಸ್ತುತ 708 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಶಂಕಿತ 174 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ವಿದೇಶಗಳಲ್ಲಿ ಸೋಮವಾರ 9 ಮಂದಿ ಕೇರಳೀಯರು ಸಾವಿಗೀಡಾಗಿದ್ದು, ಇದರೊಂದಿಗೆ ವಿದೇಶದಲ್ಲಿ ಸಾವಿಗೀಡಾದ ಕೇರಳೀಯರ ಸಂಖ್ಯೆ 210 ಕ್ಕೇರಿತು.
ಸೋಮವಾರ ರೋಗ ಬಾಧಿಸಿದ 57 ಮಂದಿಯ ಪೈಕಿ 27 ಮಂದಿ ವಿದೇಶದಿಂದ ಬಂದವರು ಹಾಗು 28 ಮಂದಿ ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. ಒಬ್ಬರು ಏರ್ ಇಂಡಿಯಾ ಸಿಬ್ಬಂದಿ ಹಾಗು ಇನ್ನೊಬ್ಬರು ಆರೋಗ್ಯ ಕಾರ್ಯಕರ್ತೆಗೆ ರೋಗ ಬಾಧಿಸಿದೆ.
ರಾಜ್ಯದಲ್ಲಿ ಒಟ್ಟು 1,39,661 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 1,38,397 ಮಂದಿ ಮನೆಗಳಲ್ಲೂ, 1246 ಮಂದಿ ಆಸ್ಪತ್ರೆಗಳಲ್ಲೂ ನಿಗಾವಣೆಯಲ್ಲಿದ್ದಾರೆ. ಸೋಮವಾರ 174 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಲಪ್ಪುರಂ-7, ತಿರುವನಂತಪುರ-3, ಕೋಟ್ಟಯಂ-3, ಪತ್ತನಂತಿಟ್ಟ-1, ಪಾಲ್ಘಾಟ್-1, ಕಲ್ಲಿಕೋಟೆ-1, ವಯನಾಡು-1, ಕಣ್ಣೂರು-1 ಎಂಬಂತೆ ಗುಣಮುಖರಾಗಿದ್ದಾರೆ. ಈ ವರೆಗೆ 68979 ಮಂದಿಯ ಸ್ಯಾಂಪಲ್ ಪರೀಕ್ಷೆ ಕಳುಹಿಸಿದ್ದು ಲಭ್ಯ 65773 ನೆಗೆಟಿವ್ ಆಗಿದೆ. ರಾಜ್ಯದಲ್ಲಿ ಒಟ್ಟು 121 ಹಾಟ್ಸ್ಪಾಟ್ಗಳಿವೆ.
ಮಾಸ್ಕ್ ಧರಿಸದ 86 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 86 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 3422 ಮಂದಿ ವಿರುದ್ಧ ಕೇಸು ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ.
ನಿಷೇಧಾಜ್ಞೆ ಉಲ್ಲಂಘನೆ : 8 ಮಂದಿ ವಿರುದ್ಧ ಕೇಸು :
ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 9 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. 9 ಮಂದಿಯನ್ನು ಬಂಧಿಸಲಾಗಿದ್ದು, 4 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1 ಕೇಸು, ಕಾಸರಗೋಡು 4, ಆದೂರು 1, ಮೇಲ್ಪರಂಬ 1, ಹೊಸದುರ್ಗ 1, ಚಂದೇರ 1 ಕೇಸುಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2561 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. 3217 ಮಂದಿಯನ್ನು ಬಂಧಿಸಲಾಗಿದ್ದು, 1095 ವಾಹನಗಳನ್ನು ವಶಪಡಿಸಲಾಗಿದೆ.