HEALTH TIPS

ರಾಜ್ಯದಲ್ಲಿ ನಿರ್ಬಂಧಗಳು ಇನ್ನಷ್ಟು ಬಿಗಿ-ಸಾಮೂಹಿಕ ಹರಡುವಿಕೆಗೆ ಕಡಿವಾಣಕ್ಕೆ ತಂತ್ರ


           ತಿರುವನಂತಪುರ: ಕೋವಿಡ್ ಹರಡುವುದನ್ನು ತಡೆಯಲು ನಿಯಮಗಳನ್ನು ಕಠಿಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಮೀರಿ ರಿಯಾಯಿತಿ ನೀಡದಿರಲು ರಾಜ್ಯ ಸಚಿವ ಸಂಪುಟದ ಬುಧವಾರದ ಸಭೆಯಲ್ಲಿ ನಿರ್ಧರಿಸಲಾಗಿದೆ. ಕೋವಿಡ್ ರೋಗಿಗಳ ಸಂಖ್ಯೆ ಪ್ರತಿದಿನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
         ಹೊಸದಾಗಿ ರೋಗಬಾಧಿತರ ಸಂಖ್ಯೆ ಇಳಿಮುಖವಾಗುತ್ತಿರುವುದರಿಂದ ಹೆಚ್ಚಿನ ನಿಬರ್ಂಧಗಳನ್ನು ಹೇರುವಂತಿಲ್ಲ. ಆದರೆ ಇತರ ರಾಜ್ಯಗಳ ಕೋವಿಡ್ ಹಾಟ್‍ಸ್ಪಾಟ್‍ಗಳಿಂದ ಪ್ರತಿದಿನ ಹೆಚ್ಚೆಚ್ಚು ಜನರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ರೋಗ ಹರಡುವುದನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಕೇರಳದ ಹೊರಗಿನಿಂದ ಬರುವವರು ಸಂಪರ್ಕತಡೆಯನ್ನು ಇನ್ನಷ್ಟು ಬಿಗಿಗೊಳಿಸಿ  ಖಚಿತಪಡಿಸಿಕೊಳ್ಳುವುದು ಎಂದು ಕ್ಯಾಬಿನೆಟ್ ಸಭೆ ತೀರ್ಮಾನಿಸಿತು.
     ಪ್ರಸ್ತುತ ರಾಜ್ಯದಲ್ಲಿ 1231 ಕೋವಿಡ್ ಬಾಧಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯ ಪ್ರಕಾರ, ಇದುವರೆಗೆ 848 ಜನರನ್ನು ಗುಣಪಡಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries