ಕಾಸರಗೋಡು: ನೀರ್ಚಾಲು ಪೇಟೆಯನ್ನು ಕಂಟೈ ನ್ಮೆಂಟ್ ಝೋನ್ ಆಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಘೋಷಿಸಿದರು.
ಇಲ್ಲಿ ಅನಿವಾರ್ಯ ಸಾಮಾಗ್ರಿಗಳ ಅಂಗಡಿಗಳು ಮಾತ್ರ ದಿನಬಿಟ್ಟು ದಿನ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ತೆರೆದು ಕಾರ್ಯಾಚರಿಸಬಹುದಾಗಿದೆ. ಬಸ್ ನಿಲ್ಲಿಸಿ ಪ್ರಯಣಿಕರನ್ನು ಇಳಿಸುವ, ಏರಿಸುವ ಪ್ರಕ್ರಿಯೆ ನಡೆಸಕೂಡದು. 7 ದಿನಗಳ ವರೆಗೆ ಈ ಕಟ್ಟುನಿಟ್ಟು ಇರುವುದು ಎಂದು ಅವರು ತಿಳಿಸಿದರು.
ಕಂಟೈನ್ಮೆಂಟ್ ಝೋನ್ ಘೋಷಣೆಯಿಂದ ಬದಿಯಡ್ಕ ಪೇಟೆ ಹೊರತು: ಜಿಲ್ಲಾಧಿಕಾರಿ:
ಬದಿಯಡ್ಕ ಪೇಟೆಯನ್ನು ಕಂಟೈನ್ಮೆಂಟ್ ಝೋನ್ ಘೋಷಣೆಯಿಂದ ಹೊರತುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಕೋವಿಡ್ 19 ಸೋಂಕು ಖಚಿತಗೊಂಡಿರುವ ತಲೆಹೊರೆಕಾರ್ಮಿಕ ಬದಿಯಡ್ಕದಲ್ಲಿ ಸಂಪರ್ಕಕ್ಕೆ ಬಂದಿರಲಿಲ್ಲ ಎಂಬ ವಿಸ್ತೃ ತ ತನಿಖೆಯಿಂದ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬದಿಯಡ್ಕ ಬಳಿಯ ನೀರ್ಚಾಲು ಪೇಟೆಯಲ್ಲಿ ಮಾತ್ರ ಕಂಟೈ ನ್ಮೆಂಟ್ ಝೋನ್ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿರುವರು.


