HEALTH TIPS

Big Breaking-ಶಾಸಕನ ರಾಜೀನಾಮೆ ಆಗ್ರಹಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ಮೇಲೆ ಜಲಪಿರಂಗಿ ಪ್ರಯೋಗ!

      ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ಪ್ರಮುಖ ಆರೋಪಿಯೆಂದು ದೂರಲಾದ ಬಹುಕೋಟಿ ರೂ.ಗಳ ಜುವೆಲ್ಲರಿ ಹಗರಣ ಸಂಬಂಧ ಶಾಸಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಇಂದು ಬೆಳಿಗ್ಗೆ ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಕಚೇರಿಗೆ ನಡೆಸಿದ ಮಾರ್ಚ್ ಮೇಲೆ ಪೋಲೀಸರು ಜಲ ಪಿರಂಗಿ ಪ್ರಯೋಗಿಸಿದ ಘಟನೆ ನಡೆದಿದೆ.
      ನೂರಾರು ಕಾರ್ಯಕರ್ತರು ಘೋಣನೆಗಳನ್ನು ಕೂಗುತ್ತ ತಾಲೂಕು ಕಚೇರಿಯತ್ತ ಧಾವಿಸುವ ಹಂತದಲ್ಲಿ ಪೋಲೀಸರು ತಡೆದಿದ್ದು, ರೊಚ್ಚಿಗೆದ್ದ ಕಾರ್ಯಕರ್ತರನ್ನು ನಿಯಂತ್ರಿಸಲು ಬಳಿಕ ಜಲಪಿರಂಗಿ ಬಳಸಿ ಚದುರಿಸಿದರು.ವಿವರಗಳಿಗೆ ಕಾಯಲಾಗುತ್ತಿದೆ. ಹಲವು ಕಾರ್ಯಕರ್ತರು ಗಾಯಗೊಂಡಿರುವರೆಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries