ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್ ಕೊರಗ ವಿಶೇಷ ಯೋಜನೆಯ ಅಂಗವಾಗಿ ಪೈವಳಿಕೆ ಲಾಲ್ಬಾಗ್ ನಲ್ಲಿ ಜಲಚರ ಸಾಕಣೆ ತರಬೇತಿಯನ್ನು ಆಯೋಜಿಸಿತ್ತು.
ಕೊರಗ ಸಮುದಾಯವನ್ನು ಸಾಂಪ್ರದಾಯಿಕ ಉದ್ಯೋಗಗಳಿಂದ ಮೀನುಗಾರಿಕೆ ಉದ್ಯಮಶೀಲತೆಗೆ ಕರೆತರುವುದು ಮತ್ತು ಹಳ್ಳಿಗಳಲ್ಲಿ ಮೀನು ಲಭ್ಯತೆ ಮತ್ತು ಜೀವನೋಪಾಯವನ್ನು ಸುಧಾರಿಸುವ ಉದ್ದೇಶದಿಂದ ವಿಶೇಷ ಯೋಜನೆಯಡಿ ಜಲಚರ ಸಾಕಣೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಸ್ತುತ ಕುಟುಂಶ್ರೀ ಜಿಲ್ಲಾ ಮಿಷನ್ ಕೊರಗ ಸಮುದಾಯದ ಉನ್ನತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ.
ತರಬೇತಿ ಕಾರ್ಯಕ್ರಮವನ್ನು ಪೈವಳಿಕೆ ಪಂಚಾಯತಿ ಅಧ್ಯಕ್ಷ ಭಾರತಿ ಜೆ ಶೆಟ್ಟಿ ಉದ್ಘಾಟಿಸಿದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಪಂಚಾಯತಿ ಸದಸ್ಯೆ ಸುಜಾತ ಬಿ ರೈ ವಹಿಸಿದ್ದರು. ಸಾಮಾಜಿಕ ಅಭಿವೃದ್ಧಿ ಮತ್ತು ಲಿಂಗ ಎಡಿಎಂಸಿ ಪ್ರಕಾಶನ್ ಪಲೈ ಅಭಿನಂದಿಸಿದರು. ಮೀನುಗಾರಿಕೆ ಯೋಜನನಾಧಿಕಾರಿ ರಮೇಶನ್ ಮತ್ತು ಮೀನು ಉದ್ಯಮಿ ಅಬ್ದುಲ್ ರಝಾಕ್ ತರಗತಿಗಳನ್ನು ನಡೆಸಿದರು. ಪೈವಳಿಕೆ ಪಂಚಾಯತಿ ಸಿಡಿಎಸ್ ಅಧ್ಯಕ್ಷೆ ರೇಖಾ ಸ್ವಾಗತಿಸಿ, ಕೊರಗ ವಿಶೇಷ ಯೋಜನಾ ಸಂಯೋಜಕ ಬಿ.ಜಯಕೃಷ್ಣನ್ ವಂದಿಸಿದರು.