HEALTH TIPS

ಎಂ ಶಿವಶಂಕರ್ ಅವರ ಬಂಧನವನ್ನು ಅ. 23 ರ ವರೆಗೆ ತಡೆಹಿಡಿದ ಹೈಕೋರ್ಟ್- ಕಸ್ಟಮ್ಸ್ ಗೆ ಅನಿರೀಕ್ಷಿತ ಹಿನ್ನಡೆ

  

        ಕೊಚ್ಚಿ: ತಿರುವನಂತಪುರದ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿತ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರ ಬಂಧನವನ್ನು ಹೈಕೋರ್ಟ್ ಶುಕ್ರವಾರ ತಡೆಹಿಡಿದಿದೆ. ಕಸ್ಟಮ್ಸ್ ಪ್ರಕರಣದಲ್ಲಿ ಬಂಧನವನ್ನು ಅಕ್ಟೋಬರ್ 23 ರವರೆಗೆ ತಡೆಹಿಡಿಯಲಾಗಿದೆ.

         ಈ ಪ್ರಕರಣ ಮತ್ತೆ 23 ರಂದು ವಿಚಾರಣೆಗೆ ಬರಲಿದೆ. ಶುಕ್ರವಾರ ಸಂಜೆ ಶಿವಶಂಕರ್ ಅವರನ್ನು ಕಸ್ಟಮ್ಸ್ ಬಂಧಿಸಲು ಪ್ರಯತ್ನಿಸಿತ್ತು ಎಂದು ಶಿವಶಂಕರ್ ಈ ಹಿಂದೆ ಹೈಕೋರ್ಟ್‍ನಲ್ಲಿ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದರು. ಹೊಸದಾಗಿ ದಾಖಲಾದ ಪ್ರಕರಣವನ್ನು ಪ್ರಶ್ನಿಸಲು ಕಸ್ಟಮ್ಸ್ ಅಧಿಕಾರಿಗಳು ಆಗಮಿಸಿದ್ದರು. ನಿವಾಸದಿಂದ ಕರೆದೊಯ್ಯುವಾಗ ಅವರು ಅಸ್ವಸ್ಥರಾದರೆಂದು ಅವರು ಹೇಳಿದರು.

          ಪ್ರಕರಣದಲ್ಲಿ ವಿವರವಾದ ವಾದಗಳನ್ನು ಆಲಿಸಲಾಗುವುದು ಎಂದು ತಿಳಿಸಿ ನ್ಯಾಯಾಲಯವು ವಿವರವಾದ ಸೂಚನೆಯನ್ನು ನೀಡಿತು. ಕಸ್ಟಮ್ಸ್ ಪರ ವಾದಮಂಡಿಸಲು ಹಾಜರಾದ ವಕೀಲ ಕೆ.ರಾಮ್‍ಕುಮಾರ್ ಅವರು ತಮಗೆ ಇನ್ನಷ್ಟು ಸಾಕ್ಷ್ಯ ಸಂಗ್ರಹಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದು ನ್ಯಾಯಾಲಯ ಸಮ್ಮತಿಸಿತು. 23 ರ ಮೊದಲು ಉತ್ತರ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

      ಶಿವಶಂಕರ್ ಅವರು ರಾಜಕೀಯ ಆಟದ ಬಲಿಪಶು ಮತ್ತು ಅಗತ್ಯವಿದ್ದಾಗ  ತನಿಖಾಧಿಕಾರಿಯ ಮುಂದೆ ಹಾಜರಾಗುವುದಾಗಿ ಹೈಕೋರ್ಟ್‍ಗೆ ತಿಳಿಸಿದರು. ಆರೋಗ್ಯ ಸ್ಥಿತಿ ಕಳವಳಕಾರಿಯಾಗಿದೆ. ನಿರಂತರ ಪ್ರಶ್ನೆ ಮತ್ತು ಪ್ರಯಾಣ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಯಾವ ಸಂದರ್ಭದಲ್ಲಿ ಪ್ರಶ್ನೆ ಕೇಳಲಾಗುತ್ತಿದೆ ಎಂದು ನೋಟಿಸ್ ನಲ್ಲಿ ನಿರ್ದಿಷ್ಟಪಡಿಸಿಲ್ಲ. ಇಂತಹ ಕ್ರಮ ಏಕೆ ಕೈಗೊಂಡಿದ್ದಾರೆಂದು ತಿಳಿದಿಲ್ಲ ಎಂದು ಶಿವಶಂಕರ್ ಹೈಕೋರ್ಟ್‍ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. ಕೇವಲ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಶಿವಶಂಕರ್ ಅವರನ್ನು  34 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ವಿನಂತಿಸಿದಾಗಲೆಲ್ಲಾ ತನಿಖಾಧಿಕಾರಿಗಳ ಮುಂದೆ ಹಾಜರಾಗುವೆನು ಎಂದು ಶಿವಶಂಕರ್ ನ್ಯಾಯಾಲಯಕ್ಕೆ ತಿಳಿಸಿರುವರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries