HEALTH TIPS

ಬೆಂಗಳೂರಲ್ಲಿ ಬಿನೇಶ್ ಕೊಡಿಯೇರಿಯನ್ನು ಬಂಧಿಸಿದ ಇ.ಡಿ

      ಬೆಂಗಳೂರು: ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೇಶ್ ಕೊಡಿಯೇರಿಯನ್ನು ಜಾರಿ ನಿರ್ದೇಶನಾಲಯ ಇಂದು ಬೆಂಗಳೂರಲ್ಲಿ ವಶಕ್ಕೆ ತೆಗೆದುಕೊಂಡಿದೆ. ಬೆಂಗಳೂರು ಡ್ರಗ್ ಪ್ರಕರಣ ಸಂಬಂಧ ಈ ಬಂಧನ ನಡೆದಿದ್ದದು,  ವಶಕ್ಕೆ ತೆಗೆದುಕೊಂಡು ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು.
          ಎರಡನೇ ಬಾರಿಗೆ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿ ಬಿನೀಶ್ ಅವರನ್ನು ಇಂದು ಬಂಧಿಸಿತು. ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರಿನ ಜಾರಿ ನಿರ್ದೇಶನಾಲಯದ ವಲಯ ಕಚೇರಿಯಲ್ಲಿ ಬಿನೀಶ್ ಅವರನ್ನು ಪ್ರಶ್ನಿಸಲಾಯಿತು.
        ಮೊದಲನೆಯದಾಗಿ, ಅಕ್ಟೋಬರ್ 6 ರಂದು, ಬಿನೀಶ್ ಕೊಡಿಯೇರಿ ಅವರನ್ನು ಮಾದಕವಸ್ತು ಪ್ರಕರಣದಲ್ಲಿ ಇಡಿ  ಪ್ರಕರಣ ದಾಖಲಿಸಿ ಸಮಗ್ರ ತನಿಖೆಗಾಗಿ ಪ್ರಶ್ನಿಸಲಾಗಿತ್ತು. ಪ್ರಕರಣದಲ್ಲಿ ಬಂಧಿಸಿ ರಿಮಾಂಡ್ ಆಗಿರುವ ಅನೂಪ್ ಮೊಹಮ್ಮದ್ ನನ್ನು ಐದು ದಿನಗಳ ಕಾಲ ವಶಕ್ಕೆ ತೆಗೆದುಕೊಂಡು ಇಡಿ ಈಗಾಗಲೆ ಪ್ರಶ್ನಿಸಿದೆ. ಇಬ್ಬರ ಹೇಳಿಕೆಯಲ್ಲಿನ ವ್ಯೆರುಧ್ಯದ ಹಿನ್ನೆಲೆಯಲ್ಲಿ  ಇಡಿ  ಮತ್ತೆ ಬಿನೀಶ್‌ನನ್ನು ವಿಚಾರಣೆಗೆ ಕರೆದಿದೆ ಎಂದು ವರದಿಯಾಗಿದೆ.
     ಅನೂಪ್ ಅವರೊಂದಿಗೆ ವಿಚಾರಣೆಗಾಗಿ ಬಿನೀಶ್ ಅವರನ್ನು ಕಳೆದ ವಾರ ಕರೆಸಲಾಗಿತ್ತು. ಆದರೆ ಕೆಲವು ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಗ್ಯೆರಾಗಿದ್ದರು.
       ಬೆಂಗಳೂರು ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಅನೂಪ್ ಮತ್ತು ಬಿನೀಶ್ ನಡುವಿನ ಹಣಕಾಸಿನ ವ್ಯವಹಾರದ ಮೂಲವನ್ನು ಇಡಿ ಗುರುತಿಸಿದೆ. ಅನೂಪ್ ಕೋರಿದಂತೆ ಹಣ ನೀಡುವ ಮೂಲಕ ಬಿನೀಶ್ ಅವರಿಗೆ ಸಹಾಯ ಮಾಡಿದ್ದರು. ವಿವಿಧ ಖಾತೆಗಳಿಂದ ಅನೂಪ್ ಅವರ ಖಾತೆಗೆ 50 ಲಕ್ಷ ರೂ.ಗಳು ವ್ಯವಹಾರವಾಗಿರುವ ಬಗ್ಗೆ ದಾಖಲೆಗಳು ಲಭ್ಯವಾಗಿವೆ.
      ಈ ಹಣವನ್ನು ಯಾರು ಹೂಡಿಕೆ ಮಾಡಿದ್ದಾರೆಂದು ಅನೂಪ್‌ಗೆ ಹೇಳಲಾಗಲಿಲ್ಲ. ಬಿನೀಶ್ ಅವರ ಸೂಚನೆಯಂತೆ ಸುಮಾರು 20 ಲಕ್ಷ ರೂ.ಖಾತೆಗಳಿಂದ ಯಾರು,ಯಾರಿಗೆ,ಯಾಕಾಗಿ ವಹಿವಾಟು ಮಾಡಲಾಗಿದೆ ಎಂದು ಇಡಿ ತನಿಖೆ ನಡೆಸುತ್ತಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries