HEALTH TIPS

ಎಡನೀರಿನ ನೂತನ ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತಿಗಳಿಗೆ ಇಂದು ಕಾಂಚಿ ಜಗದ್ಗುರು ಪೀಠದಲ್ಲಿ ದೀಕ್ಷೆ

 

           ಕಾಂಚಿ: ಕಾಸರಗೋಡು ಜಿಲ್ಲೆಯ ಎಡನೀರು ಮಠದ ನೂತನ ಮಠಾಧೀಶರಾಗಿ ನಿಯುಕ್ತಿಗೊಂಡಿರುವ ಶ್ರೀಸಚ್ಚಿದಾನಂದ ಭಾರತಿಗಳಿಗೆ ಇಂದು ಕಾಂಚಿಯ ಜಗದ್ಗುರು ಪೀಠದಲ್ಲಿ ಅಧಿಕೃತ ಸನ್ಯಾಸ ದೀಕ್ಷೆ ನೆರವೇರಲಿದೆ.

          ಭಾನುವಾರದಿಂದಲೇ ಕಾಂಚಿ ಕಾಮಕೋಟಿ ಮಹಾಸಂಸ್ಥಾನದಲ್ಲಿ ವಿವಿಧ ವಿಧಿ ವಿಧಾನಗಳು ಆರಂಭಗೊಂಡಿದ್ದು ಇಂದು ಕಾಂಚಿಯ ಜಗದ್ಗುರು ಶ್ರೀಶ್ರೀ ಶಂಕರ ವಿಜಯೇಂದ್ರ ಸರಸ್ವತೀ ಅವರಿಂದ ಶಾಸ್ರ್ತೋಕ್ತವಾಗಿ ದೀಕ್ಷೆ ಸ್ವೀಕರಿಸುವರು.

        ನಾಳೆ(ಮಂಗಳವಾರ) ಬೆಳಿಗ್ಗೆ 11 ರಿಂದ 12ರ ಮಧ್ಯೆ ಸಚ್ಚಿದಾನಂದ ಶ್ರೀಗಳು ಎಡನೀರು ಪುರಪ್ರವೇಶಗೈಯ್ಯಲಿದ್ದು ಬುಧವಾರ ಎಡನೀರು ಮಠಾಧೀಶರಾಗಿ ಪೀಠಾರೋಹಣಗೈಯ್ಯಲಿರುವರು.

       ಕೋವಿಡ್ ಮಾನದಂಡಗಳ ಅನುಸಾರ ಭಕ್ತರಿಗೆ ಸೀಮಿತ ಸಂಖ್ಯೆಯಲ್ಲಿ ಪೀಠಾರೋಹಣ ಕಾರ್ಯಕ್ರಮಗಳಿಗೆ ಪ್ರವೇಶ ನೀಡಲಾಗಿದೆ. ವಿವಿಧ ಪ್ರದೇಶಗಳ ಮಠಾಧಿಪತಿಗಳು, ಸಾಧು-ಸಂತರು, ಗಣ್ಯರು ಭಾಗವಹಿಸುವರೆಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries