ಪತ್ತನಂತಿಟ್ಟು: ಜಗದ್ವಿಖ್ಯಾತ ದೇವಾಲಯವಾದ ಶಬರಿಮಲೆ ಶ್ರೀಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಶನಿವಾರ ಒಂದು ವರ್ಷದ ಅವಧಿಗೆ ಪ್ರಧಾನ ಅರ್ಚಕರನ್ನು ನೇಮಿಸಲಾಯಿತು. ಶನಿವಾರ ಬೆಳಿಗ್ಗೆ 7.45 ರ ಮುಹೂರ್ತದಲ್ಲಿ ನೂತನ ಮೇಲ್ಶಾಂತಿಯ ಆಯ್ಕೆ ನಡೆಯಿತು. ವಿ.ಕೆ.ಜಯರಾಜ್ ಪೋತ್ತಿ ಶಬರಿಮಲೆ ಸನ್ನಿಧಿಯ ಮೇಲ್ಶಾಂತಿಯಾಗಿಯೂ ಎಂ.ಎನ್.ರಾಜಿಕುಮಾರ್ ಮಾಳಿಗಪ್ಪುರ ಕ್ಷೇತ್ರದ ಮೇಲ್ಶಾಂತಿಯಾಗಿ ಆಯ್ಕೆಯಾದರು.
ವಿ.ಕೆ.ಜಯರಾಜ್ ಪೋತ್ತಿ ಅವರು ತ್ರಿಶೂರ್ ನ ಕೊಡಂಗಲ್ಲೂರ್ ಮೂಲದವರು. ಅವರು 2005-2006ರಲ್ಲಿ ಮಾಳಿಗಪುರಂ ದೇವಾಲಯದ ಮುಖ್ಯ ಅರ್ಚಕರಾಗಿ ಕಾರ್ಯನಿರ್ವಹಿಸಿದ್ದರು. ಮನಕ್ಕಲ್ ರಜಿಕುಮಾರ್ ಎಂ.ಎನ್ ಅವರು ಎರ್ನಾಕುಳಂನ ಅಂಗಮಾಲಿ ಮೂಲದವರು. ಶಬರಿಮಲೆ ಮೇಲ್ಜಾಂತಿ ಆಯ್ಕೆಯ ಅಂತಿಮ ಪಟ್ಟಿಯಲ್ಲಿ ಒಂಬತ್ತು ಜನರು ಮತ್ತು ಮಾಳಿಗಪ್ಪುರಂ ಮೇಲ್ಜಾಂತಿಯವರ ಅಂತಿಮ ಪಟ್ಟಿಯಲ್ಲಿ 10 ಜನರಿದ್ದರು.
ಕಳೆದ ಏಳು ತಿಂಗಳಿನಿಂದ ತುಲಾಮಾಸ ಪೂಜೆಗಳಿಗಾಗಿ ಶನಿವಾರ ಶಬರಿಮಲೆ ಸನ್ನಿಧಿ ಮತ್ತೆ ಭಕ್ತರ ಮುಕ್ತ ಪ್ರವೇಶಕ್ಕೆ ತೆರೆಯಲ್ಪಟ್ಟಿತು. ಕೋವಿಡ್ ಮಾನದಂಡಗಳ ಸಂಪೂರ್ಣ ಅನುಸರಣೆಯೊಂದಿಗೆ ಪ್ರವೇಶವನ್ನು ಅನುಮತಿಸಲಾಗಿದೆ. ಪ್ರವೇಶವು ದಿನಕ್ಕೆ 250 ಜನರಿಗೆ ಸೀಮಿತವಾಗಿರುತ್ತದೆ.