HEALTH TIPS

ರಾಜ್ಯದಲ್ಲಿ ಇಂದು 3382 ಮಂದಿಗೆ ಕೋವಿಡ್ ಸೋಂಕು-ಸಂಪರ್ಕದ ಮೂಲಕ 2880 ಮಂದಿಗೆ ಸೋಂಕು- 6055 ಮಂದಿ ಗುಣಮುಖ

 
             ತಿರುವನಂತಪುರ: ಕೇರಳದಲ್ಲಿ ಇಂದು 3382 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಮಲಪ್ಪುರಂ 611, ಕೋಝಿಕ್ಕೋಡ್ 481, ಎರ್ನಾಕುಳಂ 317, ಆಲಪ್ಪುಳ  275, ತ್ರಿಶೂರ್ 250, ಕೊಟ್ಟಾಯಂ 243, ಪಾಲಕ್ಕಾಡ್ 242, ಕೊಲ್ಲಂ 238, ತಿರುವನಂತಪುರ 234, ಕಣ್ಣೂರು 175, ಪತ್ತನಂತಿಟ್ಟು 91, ವಯನಾಡ್ 90, ಕಾಸರಗೋಡು 86 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
          ಕಳೆದ 24 ಗಂಟೆಗಳಲ್ಲಿ 34,689 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ 9.75. ಆಗಿದ್ದು ನಿಯಮಿತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್‍ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 62,62,476 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.
            ಇಂದು, 21 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ತಿರುವನಂತಪುರ ಪಪ್ಪನಂಕೋಡಿನ ಜಗದಮ್ಮ (75), ತಂಪನೂರಿನ ಜಯರಾಜ್ (52), ವರ್ಕಲಾದ ಅಲಿ ಅಕ್ಬರ್ (86), ಕಲ್ಲಾರದ ವಿಜಯನ್ (60), ಅಲಪ್ಪುಳ ಪುನ್ನಾ ದಕ್ಷಿಣದಿಂದ ಏಲಿಕುಟ್ಟಿ ಫೆಲಿಕ್ಸ್ (74), ಚೇರ್ತಲದ ಮುಕುಂದನ್ (83) ಕೋಟ್ಟಯಂ ಅಯಂಕುಳಿಯ ಎಂ.ಸಿ. ಚಾಕೊ (99), ಕೊಟ್ಟಾಯಂ ಮೂಲದ ಪಿ.ಎಂ. ಆಂಡಮ್ಮ (76), ಮೀನಾಚಿಲ್ ನ ತಂಗಪ್ಪನ್ ನಾಯರ್ (75), ಎರ್ನಾಕುಳಂ ಅಲುವಾದ ಗಂಗಾಧರನ್ (69), ಅಂಗಮಾಲಿಯ ತಂಗಮ್ಮ ದೇವಸಿ (80), ತೃಶೂರ್ ಕೊಡುಂಗಲ್ಲೂರಿನ ಪುಷ್ಪಾಕರನ್ (70), ನೆಲ್ಲುವಾಯಿಯ ಅನಂತರಾಮನ್ (75), ಮಣರ್ ಕೋಡಿಯ ಸರಸ್ವತಿ(62), ವಿಯ್ಯೂರ್ ನ ನಾರಾಯಣನ್(71), ಮರತ್ತಾಕರದ ಸುಬ್ರಹ್ಮಣ್ಯನ್(65), ನಡತ್ತರದ ವಿಜಯರಾಘವನ್(91), ಮಲಪ್ಪುರಂ ಅತಿಯೂರ್ ಕುನ್ನಿನ ಮರಿಯುಮ್ಮ(59), ವಡಪ್ಪುರಂ ನ ಮೊಯ್ದೀನ್ ಹಾಜಿ(63), ಕೋಝಿಕ್ಕೋಡ್ ನಲ್ಲೊಣಂ ನ ಭೀಪಾತುಮ್ಮ(75), ಪನಂಗಾಡಿನ ಉಣ್ಣಿ ನಾಯರ್(87), ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 2244 ಕ್ಕೆ ಏರಿಕೆಯಾಗಿದೆ.
           ಇಂದು, ಸೋಂಕು ಪತಯ್ತೆಯಾದವರಲ್ಲಿ  64 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 2880 ಜನರಿಗೆ ಸೋಂಕು ತಗುಲಿತು. 405 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 578, ಕೋಝಿಕ್ಕೋಡ್ 447, ಎರ್ನಾಕುಳಂ 246, ಆಲಪ್ಪುಳ 258, ತ್ರಿಶೂರ್ 244, ಕೊಟ್ಟಾಯಂ 240, ಪಾಲಕ್ಕಾಡ್ 104, ಕೊಲ್ಲಂ 235, ತಿರುವನಂತಪುರ 153, ಕಣ್ಣೂರು 121, ಪತ್ತನಂತಿಟ್ಟು 76, ವಯನಾಡ್ 78, ಕಾಸರಗೋಡು  75, ಇಡುಕ್ಕಿ 25 ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ.
          ಮೂವತ್ತಮೂರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ದೃಢಪಡಿಸಲಾಗಿದೆ. ಕೋಝಿಕ್ಕೋಡ್  11, ತಿರುವನಂತಪುರ 6, ಕಣ್ಣೂರು 4, ಎರ್ನಾಕುಳಂ, ತ್ರಿಶೂರ್, ಮಲಪ್ಪುರಂ, ವಯನಾಡ್ ತಲಾ 2, ಕೊಲ್ಲಂ, ಕೊಟ್ಟಾಯಂ, ಪಾಲಕ್ಕಾಡ್ ಮತ್ತು ಕಾಸರಗೋಡು ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
          ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 6055 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 334, ಕೊಲ್ಲಂ 633, ಪತ್ತನಂತಿಟ್ಟು 143, ಆಲಪ್ಪುಳ 765, ಕೊಟ್ಟಾಯಂ 156, ಇಡುಕಿ 455, ಎರ್ನಾಕುಳಂ 518, ತ್ರಿಶೂರ್ 659, ಪಾಲಕ್ಕಾಡ್ 482, ಮಲಪ್ಪುರಂ 507, ಕೋಝಿಕ್ಕೋಡ್  913, ವಯನಾಡ್ 116,ಕಣ್ಣೂರು 299, ಕಾಸರಗೋಡು 75 ಎಂಬಂತೆ ಪರೀಕ್ಷೆಗಳಲ್ಲಿ ಋಣಾತ್ಮಕವಾಗಿದೆ.    ಇದರೊಂದಿಗೆ 61,894 ಜನರಿಗೆ ಈ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 5,38,713 ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
          ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,11,770 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,96,094 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 15,676 ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1,481 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
          ಇಂದು 6 ಹೊಸ ಹಾಟ್‍ಸ್ಪಾಟ್‍ಗಳಿವೆ. ಹೊಸ ಹಾಟ್‍ಸ್ಪಾಟ್‍ಗಳೆಂದರೆ ಆಲಪ್ಪುಳ ದಕ್ಷಿಣ (ಕಂಟೋನ್ಮೆಂಟ್ ವಲಯ ಉಪ ವಾರ್ಡ್ 9), ಕಾಂಜಿಕುಳಂ (5), ಪಾಂಡನಾಡ್ (6), ತುರಾವೂರ್ (12), ತ್ರಿಶೂರ್ ಜಿಲ್ಲೆಯ ತೋಲೂರ್ (6, 12) ಮತ್ತು ಪಾಲಕ್ಕಾಡ್ ಜಿಲ್ಲೆಯ ತಿರುಮಿಟಿಕೋಡ್ (15).
          26 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಇದರೊಂದಿಗೆ ಒಟ್ಟು 504 ಹಾಟ್‍ಸ್ಪಾಟ್‍ಗಳಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries