HEALTH TIPS

ಅಧಿಕಾರಿಗಳ ಮಧ್ಯೆ ಕಚ್ಚಾಟ-ಕಾಸರಗೋಡು ನ್ಯಾಯಾಲಯ ನೌಕರನ ವಾಹನವನ್ನು ತಡೆದು ನಿಲ್ಲಿಸಿ ದಂಡ ವಿಧಿಸಿದ ಮೋಟಾರು ಇಲಾಖೆ!!

                      

      ಕಾಸರಗೋಡು: ಜಿಲ್ಲಾ ಕೇಂದ್ರ ಕಚೇರಿಯ ಉದ್ಯೋಗಿಗಳು ಪರಸ್ಪರ ಕಚ್ಚಾಟಕ್ಕಿಳಿದ ಘಟನೆ ನಡೆದಿದೆ. ಒಂದೆಡೆ ಕಲೆಕ್ಟರ್ ಮತ್ತು ಮೋಟಾರು ವಾಹನ ಇಲಾಖೆ ಹಾಗೂ ಮತ್ತೊಂದೆಡೆ ನ್ಯಾಯಾಲಯದ ಸಿಬ್ಬಂದಿಗಳ ಮಧ್ಯೆ ಹೀಗೊಂದು ನಾಟಕೀಯ ಸನ್ನಿವೇಶ ಯಾರ ಗಮನಕ್ಕೂ ಬಾರದೆ ನಡೆದು ಅಚ್ಚರಿ ಮೂಡಿಸಿದೆ.  ನ್ಯಾಯಾಲಯದ ಸಿಬ್ಬಂದಿಯನ್ನು ಕರೆದೊಯ್ಯುವ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ನ್ನು ತಡೆದು ನಿಲ್ಲಿಸಿದ ಘಟನೆಯ ಬೆನ್ನಿಗೆ ಇಂತಹದೊಂದು ಸಮಸ್ಯೆ ಉಲ್ಬಣಗೊಂಡಿತು. 

     ಸ್ಕೇಲ್ ಕ್ಯಾರೇಜ್ ಬಸ್‍ಗಳ ರೀತಿಯಲ್ಲಿ ಜನರನ್ನು ನಿಲ್ದಾಣದಿಂದ ಕಚೇರಿಗಳಿಗೆ ಕರೆದೊಯ್ಯಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ವಾಹನವನ್ನು ನ್ಯಾಯಾಲಯ ಉದ್ಯೋಗಿಗಳು ಸಂಚರಿಸುತ್ತಿದ್ದ ವಾಹನವನ್ನು ಮೋಟಾರು ವಾಹನ ಇಲಾಖೆ ನಿಲ್ಲಿಸಿತು. ಬಳಿಕ ಎರಡೂ ಬಸ್‍ಗಳಿಗೆ 7,000 ರೂ.ಗಳ ದಂಡ ವಿಧಿಸಲಾಯಿತು ಮತ್ತು ಒಂದು ಗಂಟೆಯ ನಂತರ ಬಿಡುಗಡೆ ಮಾಡಲಾಯಿತು.


      ಅಧಿಕೃತ ಕರ್ತವ್ಯಕ್ಕೆ ಅರ್ಧ ಘಂಟೆಗಳಷ್ಟು ಕಾಲ  ಅಡ್ಡಿಪಡಿಸಿದ್ದಕ್ಕಾಗಿ ಮೋಟಾರು ವಾಹನ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ 18 ನ್ಯಾಯಾಲಯದ ನೌಕರರ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ. ಮರುದಿನ, ನೌಕರರ ದೂರಿನ ಮೇರೆಗೆ ನಾಲ್ಕು ಮೋಟಾರು ವಾಹನ ಇಲಾಖೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಿಭಾಗದ ಅಡಿಯಲ್ಲಿ ಪ್ರಕರಣ ದಾಖಲಿಸಿತು. ಇದರೊಂದಿಗೆ ಪರಿಸ್ಥಿತಿ ಹದಗೆಟ್ಟಿತು.

              ಲಾಕ್‍ಡೌನ್ ಸಮಯದಲ್ಲಿ ಪ್ರಾರಂಭಿಸಿದ ಸೇವೆ(?):

     ಕೋವಿಡ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಹಾಕಿದ ಕಾರಣ ಸಾರ್ವಜನಿಕ ಸಾರಿಗೆ ನಿಂತುಹೋದ ಸಂದರ್ಭ ನ್ಯಾಯಾಲಯಕ್ಕೆ ತಲುಪಲು ಜಿಲ್ಲಾ ನೌಕರರು ಕೆಎಸ್‍ಆರ್‍ಟಿಸಿಯ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದರು. ಒಟ್ಟು ಆಸನಗಳಲ್ಲಿ ಅರ್ಧದಷ್ಟು ಪ್ರಯಾಣಿಕರು ಆಕ್ರಮಿಸಿಕೊಂಡಿರುತ್ತಿದ್ದರು. ಆದರೆ ಅಧಿಕಾರಿಗಳು ನೌಕರರಿಂದ ಇಬ್ಬರು ವ್ಯಕ್ತಿಗಳಿಗೆ ಶುಲ್ಕ ವಿಧಿಸಿದ್ದರು. ದಿನಕ್ಕೆ 7000 ರೂ. ಪಯ್ಯನ್ನೂರಿನಿಂದ ಕಾಸರಗೋಡು ವರೆಗೆ ನೌಕರರು ಈ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಬಳಿಕ ಸಾರ್ವಜನಿಕ ಸಾರಿಗೆ ಪುನರಾರಂಭಗೊಂಡರೂ  ಕೆ.ಎಸ್.ಆರ್.ಟಿ.ಸಿ ವಿಶೇಷ ಬಸ್ ಸೇವೆ ನಿಲುಗಡೆಗೊಳಿಸಲು ನಿರಾಕರಿಸಿತು. ಇದರೊಂದಿಗೆ ನೌಕರರು ಖಾಸಗಿ ಬಸ್ ನ್ನು ಪೂರ್ಣ ಪ್ರಮಾಣದಲ್ಲಿ ಕೈಬಿಟ್ಟು ವಿಶೇಷ ಸೇವೆಗೇ ಆತುಕೊಂಡರು. ಆದರೆ ಇದು ಜಿಲ್ಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಯಿತು. 


        ಕೊರೋನಾ ನಿಯಂತ್ರಣ ಸಮಿತಿ ಸಭೆ ಸೇವೆಯನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು. ಇದೇ ವೇಳೆ ಯಾವ ಮಾನದಂಡಗಳಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಹೆಚ್ಚಿನ ಚರ್ಚೆಗಳ ನಂತರ, ಕೆಎಸ್ ಆರ್ ಟಿ ಸಿ ಬಸ್ ಅನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಯಿತು. ಆದರೆ ಹಳೆಯ ಬಸ್‍ಗೆ ಅನುಮತಿ ನೀಡಲಾಯಿತು. ಇದರಿಂದ ಕುಪಿತರಾದ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಈ ಬಗ್ಗೆ  ದೂರು ನೀಡಿದರು. ಅಧಿಕಾರಿಗಳು ಬಳಿಕ ನೌಕರರಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡಲು ಪ್ರಾರಂಭಿಸಿದರು. ಸಮಸ್ಯೆ ಉಲ್ಬಣಗೊಳ್ಳುತ್ತಿದ್ದಂತೆ ಸಿಬ್ಬಂದಿಗಳು  ಖಾಸಗಿ ಬಸ್‍ಗೆ ವ್ಯವಸ್ಥೆ ಮಾಡಿದರು.

       ಜನರನ್ನು ನಿಲ್ದಾಣದಿಂದ ಪಿಕ್ ಮಾಡಲಾಗುತ್ತಿದೆ ಎಂದು ದೂರು:

  ಖಾಸಗಿ ಬಸ್‍ನಲ್ಲಿ ಒಂದು ತಿಂಗಳು ಪ್ರಯಾಣಿಸಿದ ಬಳಿಕ ಜಿಲ್ಲಾಧಿಕಾರಿಗಳು ಜಿಲ್ಲಾ ನ್ಯಾಯಾಧೀಶರನ್ನು ಕರೆದು ದೂರು ದಾಖಲಿಸಿದ್ದಾರೆ. ನ್ಯಾಯಾಧೀಶರು ಸಿಬ್ಬಂದಿಯನ್ನು ಸಂಪರ್ಕಿಸಿದಾಗ, ಅವರು ಗಂಭೀರವಾಗಿ ಏನೊಂದೂ ಹೇಳಲು ಮುಂದೆಬಂದಿಲ್ಲ. ನೌಕರರು ಕಾನೂನಿಗೆ ಅನುಸಾರವಾಗಿ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ನ್ಯಾಯಾಧೀಶರು ಸಿಬ್ಬಂದಿಗೆ ಬಸ್ ಗಳ ಊಸಾಬರಿಯೇ ಬೇಡವೆಂದು ಟ್ರಾವೆಲರ್ ನಂತಹ ಸಣ್ಣ ವಾಹನಗಳಲ್ಲಿ ಪ್ರಯಾಣಿಸಲು ಸೂಚನೆ ನೀಡಿದರು. ಆದರೆ ನೌಕರರು ಇದಕ್ಕೆ ಸೊಪ್ಪು ಹಾಕದೆ ಈ ಹಿಂದಿನಂತೆಯೇ ಬಸ್ ಮೂಲಕವೇ ಕಚೇರಿಗೆ ಆಗಮಿಸುತ್ತಿದ್ದರು. ಜಿಲ್ಲಾಧಿಕಾರಿಗಳು ನ್ಯಾಯಾಧೀಶರೊಂದಿಗೆ ಮಾತನಾಡಿಯೂ ನೌಕರರು ತಮ್ಮ ಪ್ರಯಾಣವನ್ನು ನಿಲ್ಲಿಸದ ಕಾರಣ ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ವತಃ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದರು.


         ಶುಕ್ರವಾರ ಕಾಸರಗೋಡು ಸರ್ಕಾರಿ ಕಾಲೇಜಿನ ಮುಂದೆ ನೌಕರರ ವಾಹನವನ್ನು ತಡೆಹಿಡಿಯಲಾಯಿತು.  ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಕಲೆಕ್ಟರ್ ಮತ್ತು ಸಾರಿಗೆ ಆಯುಕ್ತರಿಗೆ ನೀಡಿದ ದೂರಿನ ಆಧಾರದ ಮೇಲೆ ವಾಹನವನ್ನು ನಿಲ್ಲಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ನೌಕರರಿಗೆ ತಿಳಿಸಿದ್ದಾರೆ. ನಂತರ, ಮಹಿಳೆಯರು ಸೇರಿದಂತೆ ನೌಕರರು ಅವಲತ್ತುಕೊಂಡರೂ ಪ್ರಯಾಣವನ್ನು ಮುಂದುವರಿಸಲು ಅವಕಾಶವಿ ನಿರಾಕರಿಸಲಾಯಿತು. ಬಳಿಕ ವಾಹನಗಳಿಗೆ 8,000 ರೂ ಮತ್ತು 3,000 ರೂ ದಂಡ ವಿಧಿಸಲಾಯಿತು ಮತ್ತು ಪ್ರಯಾಣವನ್ನು ಮುಂದುವರಿಸಲು ಅವಕಾಶ ನೀಡಲಾಯಿತು.

                ಅಧಿಕೃತ ಕರ್ತವ್ಯಕ್ಕೆ ಅಡಚಣೆಯ ದೂರು:

    ದಂಡ ವಿಧಿಸಿ ಪ್ರಯಾಣ ಅನುಮತಿ ನೀಡಿದ ಬಳಿಕ  ಪೋಲೀಸರು ಕೂಡ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದರು. ತರುವಾಯ, ಅಧಿಕೃತ ಕರ್ತವ್ಯಕ್ಕೆ ಅಡ್ಡಿಯುಂಟುಮಾಡಿದ 18 ನ್ಯಾಯಾಲಯದ ನೌಕರರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಲಾಯಿತು. ದಂಡದ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿದ್ದರೂ, ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.     ಇದರ ಜೊತೆಗೆ ಅಜಾಗರೂಕ ಮತ್ತು ವೇಗವಾಗಿ ವಾಹನ ಚಲಾಯಿಸುವ ದೂರುಗಳೂ ಬಂದವು.

          ಅಧಿಕಾರಿಗಳ ವಿರುದ್ಧ ಜಾಮೀನು ರಹಿತ ಇಲಾಖೆಯ ಪ್ರಕರಣ:

   ನ್ಯಾಯಾಲಯದ ನೌಕರರನ್ನು ಕರೆದೊಯ್ಯುವ ವಾಹನವನ್ನು ನಿಲ್ಲಿಸಿದ ಘಟನೆಗೆ ಸಂಬಂಧಿಸಿದಂತೆ ಪೋಲೀಸರು ಶನಿವಾರ ಜಾಮೀನು ರಹಿತ ವಿಭಾಗದ ಅಡಿಯಲ್ಲಿ ಮೋಟಾರು ವಾಹನ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದ ನೌಕರರು ಸಲ್ಲಿಸಿದ ದೂರಿನ ಪ್ರಕಾರ, ಜಾತಿ ಹೆಸರನ್ನು ಅವಮಾನಿಸಲಾಗಿದೆ ಮತ್ತು ಮಹಿಳಾ ನೌಕರರನ್ನು ನಿಂದನೀಯ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ. ಕಾಸರಗೋಡು ಆರ್‍ಟಿ ಕಚೇರಿಯ ನಾಲ್ಕು ಅಧಿಕಾರಿಗಳಾದ ಬಿನೀಶ್, ಜಿಜೊ, ವಿಜಯ್ ಮತ್ತು ನಿಸಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

             ಟಿಕೆಟ್ ಅಥವಾ ರಶೀದಿ ಇಲ್ಲದ ಕೆಎಸ್‍ಆರ್‍ಟಿಸಿ:

   ನೌಕರರ ಪ್ರಕಾರ, ಒಂದೂವರೆ ತಿಂಗಳ ಹಿಂದೆ ಅವರು ಎಂಟು ದಿನಗಳಲ್ಲಿ ಕೆಎಸ್‍ಆರ್‍ಟಿಸಿ ಕಚೇರಿಯನ್ನು ತಲುಪಲು ಆ ದಿನಗಳಲ್ಲಿ 7,000 ರೂ. ಪಾವತಿಸಿದ್ದರು. ಕೆಎಸ್‍ಆರ್‍ಟಿಸಿ ನೌಕರರು 56,000 ರೂ.ಗಳಿಗೆ ರಶೀದಿ ಅಥವಾ ಟಿಕೆಟ್ ನೀಡಿಲ್ಲ. ನ್ಯಾಯಾಲಯದ ಸಿಬ್ಬಂದಿಯ ಪ್ರಕಾರ ಇದೀಗ ಸೇವೆಯನ್ನು ಸ್ಥಗಿತಗೊಳಿಸಿ ಗುತ್ತಿಗೆ ವಾಹನ(ಖಾಸಗಿ)ವನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries