HEALTH TIPS

ಸಚಿವ ಕೆ.ಟಿ.ಜಲೀಲ್ ಅವರನ್ನು ಮತ್ತೆ ಪ್ರಶ್ನಿಸಲಿದೆ ಕಸ್ಟಮ್ಸ್; ಸೋಮವಾರ ಹಾಜರಾಗಲು ಸೂಚನೆ


       ಕೊಚ್ಚಿ: ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ಅವರನ್ನು ಪ್ರಶ್ನಿಸಲು ಕಸ್ಟಮ್ಸ್ ಮತ್ತೆ ನೋಟಿಸ್ ನೀಡಿದೆ. ಸೋಮವಾರ ಕೊಚ್ಚಿಯ ಕಸ್ಟಮ್ಸ್ ಪ್ರಿವೆಂಟಿವ್ ಪ್ರಧಾನ ಕಚೇರಿಯಲ್ಲಿ ಹಾಜರಾಗಲು ಸೂಚಿಸಲಾಗಿದೆ.
        ನಿಯಮಗಳನ್ನು ಉಲ್ಲಂಘಿಸಿ ಕುರಾನ್ ವಿತರಣೆಗೆ ಸಂಬಂಧಿಸಿ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ವಿಶೇಷ ಪ್ರಕರಣ ದಾಖಲಾಗಿದ್ದು, ಕಸ್ಟಮ್ಸ್ ತನಿಖೆ ನಡೆಸುತ್ತಿದೆ.
      ಎನ್‌ಐಎ ಮತ್ತು ಜಾರಿ ನಿರ್ದೇಶನಾಲಯ ಸಚಿವರನ್ನು ಎರಡು ಬಾರಿ ಪ್ರಶ್ನಿಸಿತ್ತು. ಮಾಜಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರು ಜಲೀಲ್ ಧರ್ಮಗ್ರಂಥವನ್ನು ಖರೀದಿಸಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ವಿಚಾರಣೆ ಈ ವಿಶಯದ  ಮೇಲೆ ಆಧಾರಿತವಾಗಿದೆ.
        ರಾಜತಾಂತ್ರಿಕ ಪಾರ್ಸೆಲ್‌ಗಳ ಮೂಲಕ ಒಟ್ಟು 4,478 ಕೆಜಿ ಧಾರ್ಮಿಕ ಗ್ರಂಥಗಳನ್ನು ರಾಜ್ಯಕ್ಕೆ ತಲುಪಿಸಲಾಗಿತ್ತು. ಇದನ್ನು ಮಲಪ್ಪುರಂನಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಕಂಡುಬಂದಿದೆ.
      ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಲೀಲ್ ಅವರ ಮೇಲೆ ಹಲವಾರು ಪ್ರಕರಣಗಳು ಈಗಾಗಲೇ ದಾಖಲಾಗಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries