HEALTH TIPS

ಸ್ವಪ್ನಾಳ ಆಡಿಯೊ ರೆಕಾರ್ಡಿಂಗ್ ತನಿಖೆ ಹಳ್ಳ ಹಿಡಿಯುವ ಸೂಚನೆ-ಸಾಕ್ಷ್ಯ ಹೇಳಲು ಅನುಮತಿ ನಿರಾಕರಣೆ- ಕಸ್ಟಮ್ಸ್ ಹೇಳಿಕೆ

                 

            ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾಳ ಆಡಿಯೊ ರೆಕಾರ್ಡಿಂಗ್ ಬಿಡುಗಡೆ ಕುರಿತು ತನಿಖೆ ನೆನೆಗುದಿಗೆ ಬೀಳುವುದು ಖಾತ್ರಿಯಾಗಿದೆ.  ಸ್ವಪ್ನಾ ಅವರು ಈಗ ಬಂಧನದಲ್ಲಿರುವ ಕಾರಣದಿಂದ ಸಾಕ್ಷ್ಯ ಹೇಳಲು ಅನುಮತಿ ನೀಡುತ್ತಿಲ್ಲ ಎಂದು ಕಸ್ಟಮ್ಸ್ ಜೈಲು ಇಲಾಖೆಗೆ ಉತ್ತರಿಸಿದೆ. ಕಸ್ಟಡಿ ಅವಧಿಯ ಬಳಿಕ ಅಪರಾಧ ವಿಭಾಗವು ನೇರವಾಗಿ ನ್ಯಾಯಾಲಯದಿಂದ ಅನುಮತಿ ಪಡೆಯಬೇಕು ಎಂಬುದು ಕಸ್ಟಮ್ಸ್ ನ ಅಭಿಪ್ರಾಯ.

        ಆಡಿಯೋ ರೆಕಾರ್ಡಿಂಗ್ ನ ಸತ್ಯಾಸತ್ಯತೆಯನ್ನು ವೈಜ್ಞಾನಿಕವಾಗಿ ಪರಿಶೀಲಿಸಲು ಹಾಗೂ ಸ್ವಪ್ನಾಳ ಹೇಳಿಕೆಯನ್ನು ದಾಖಲಿಸಲು ಅಪರಾಧ ಶಾಖೆ ನಿರ್ಧರಿಸಿತ್ತು. ಆದರೆ ಸ್ವಪ್ನಾ ಪ್ರಸ್ತುತ ಕಸ್ಟಮ್ಸ್ ವಶದಲಿದ್ದು ಅಪರಾಧ ವಿಭಾಗದ ಪರವಾಗಿ ಸಾಕ್ಷ್ಯ ಹೇಳಲು ಜೈಲು ಇಲಾಖೆ ಅನುಮತಿಗಾಗಿ ಕಸ್ಟಮ್ಸ್ ಅನ್ನು ಸಂಪರ್ಕಿಸಿದೆ. ಕಸ್ಟಡಿಯಲ್ಲಿರುವುದರಿಂದ  ಸ್ವಪ್ನಾಳಿಗೆ  ಸಾಕ್ಷ್ಯ ಹೇಳಲು ಅನುಮತಿಸಲಾಗಿಲ್ಲ ಎಂದು ಕಸ್ಟಮ್ಸ್ ಉತ್ತರಿಸಿದೆ. ಕಸ್ಟಮ್ಸ್ ಪ್ರಕಾರ, ತನಿಖಾ ತಂಡವು ಎರ್ನಾಕುಳಂನಲ್ಲಿನ ಆರ್ಥಿಕ ಅಪರಾಧಗಳ ಬಗ್ಗೆ ನ್ಯಾಯಾಲಯವನ್ನು ಸಂಪರ್ಕಿಸಬೇಕು.

       ಇದಕ್ಕೂ ಮುನ್ನ ತನಿಖಾ ತಂಡ ಸಾಕ್ಷ್ಯ ಹೇಳಲು ಎನ್‍ಐಎ ನ್ಯಾಯಾಲಯದಿಂದ ಅನುಮತಿ ಪಡೆದಿತ್ತು. ಹೇಳಿಕೆಗೆ ಸಂಬಂಧಿಸಿದಂತೆ ಸ್ವಪ್ನಾಳ ನಿಲುವು ನಿರ್ಣಾಯಕವಾಗಿದ್ದರಿಂದ ಅನುಮತಿ ನಿರಾಕರಿಸುವುದು ತನಿಖೆಗೆ ಹಿನ್ನಡೆಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries