HEALTH TIPS

ಕುಂಜತ್ತೂರು ಪದವು ರಸ್ತೆಯಲ್ಲಿ ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ



     ಮಂಜೇಶ್ವರ: ಕುಂಜತ್ತೂರು ಪದವು ರಸ್ತೆಯಲ್ಲಿ ಯುವಕನೊಬ್ಬ ಶನಿವಾರ ಬೆಳಿಗ್ಗೆ  ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

     ಕರ್ನಾಟಕ ಗದಗ ನಿವಾಸಿ ಹನುಮಂತ (35) ಸಾವನ್ನಪ್ಪಿದ ದುರ್ದೈವಿ. ಕಳೆದ ಕೆಲವು ವರ್ಷಗಳಿಂದ ಮಂಗಳೂರು ಕೊಡಿಯಾಲ್ ಬೈಲ್ ವಿಸಾಲ್ ನರ್ಸಿಂಗ್  ಹೋಮ್ ಕ್ಯಾಂಟೀನೊಂದರಲ್ಲಿ ನೌಕರನಾಗಿ ಸೇವೆ ಸಲ್ಲಿಸುತ್ತಿರುವ ಈತ ಪತ್ನಿ ಭಾಗ್ಯ ಹಾಗೂ ಎರಡು ಮಕ್ಕಳಿನೊಂದಿಗೆ ಕುಟುಂಬ  ಸಮೇತನಾಗಿ ದೇವಿಪುರದ ಸಮೀಪ ವಾಸವಾಗಿದ್ದಾನೆನ್ನಲಾಗಿದೆ .

     ಹೊಸ ರಿಜಿಸ್ಟ್ರೇಶನ್ ನೋಂದಾಯಿತವಲ್ಲದ ಸ್ಕೂಟರ್ ಮಗುಚಿದ ಹಾಗೆ ಕಂಡು ಬಂದಿದ್ದರೂ ಸ್ಕೂಟರಿಗೆ ಅಷ್ಟೊಂದು ಹಾನಿಯಾದ ಬಗ್ಗೆ ಕಾಣುತಿಲ್ಲ. ಸ್ಕೂಟರಿನಿಂದ ಪಲ್ಟಿಯಾಗಿರಬಹುದಾ? ಅಥವಾ ಬೇರೆ ಯಾವುದಾದರು ವಾಹನ ಡಿಕ್ಕಿ ಹೊಡೆದಿರಬಹುದಾ ಅಥವಾ ಕೊಲೆಗೈದು ಬಿಸಾಡಿರಬಹುದಾ, ಈ ಕಡೆ ಬರುವ ಅಗತ್ಯವೇನಿತ್ತು  ಇದೆಲ್ಲಾ ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ . 
        ಶನಿವಾರ ಮುಂಜಾನೆ ೪ ಗಂಟೆಯ ಹೊತ್ತಿಗೆ ಘಟನೆ ನಡೆದಿರಬಹುದಾಗಿ ಶಂಕಿಸಲಾಗಿದೆ.   ಯುವಕನ ಪತ್ತೆಯಾದ ಸ್ಥಳಕ್ಕೆ  ಮಂಜೇಶ್ವರ ಠಾಣಾಧಿಕಾರಿ ರಾಘವನ್ ನೇತೃತ್ವದ ಪೊಲೀಸರು ಸ್ಥಳಕ್ಕಾಗಮಿಸಿ  ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries