HEALTH TIPS

ಪಿಣರಾಯಿ ಮತ್ತು ಎಡಪಕ್ಷ ವಿ.ಎಸ್.ನ್ನು ಅಭಿವೃದ್ಧಿ ವಿರೋಧಿ ಎಂದು ಬ್ರಾಂಡ್ ಮಾಡಿದ್ದರ ಕಾರಣ ಸುಸ್ಪಷ್ಟ: ರಮೇಶ್ ಚೆನ್ನಿತ್ತಲ

                      

        ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ತೀವ್ರವಾಗಿ ಟೀಕಿಸಿದ್ದಾರೆ. ಹಿಂದಿನ ಎಲ್‍ಡಿಎಫ್ ಸರ್ಕಾರದ ಅವಧಿಯಲ್ಲಿ ವಿ.ಎಸ್.ಅಚ್ಚುತಾನಂದನ್ ಅವರನ್ನು ಪಕ್ಷ ಮತ್ತು ಪಿಣರಾಯಿ ಅವರು ಅಭಿವೃದ್ಧಿ ವಿರೋಧಿ ಎಂದು ಬ್ರಾಂಡ್ ಮಾಡಲು ನಿಜವಾದ ಕಾರಣವೆಂದರೆ ವಿ.ಎಸ್. ಪಿಣರಾಯಿ ವಿಜಯನ್ ಅವರ ಲಂಚದ ರಾಜಕೀಯಕ್ಕೆ ಅಡ್ಡಿಪಡಿಸುತ್ತಿದ್ದ ಕಾರಣದಿಂದಲೆ ಎಂದು ಚೆನ್ನಿತ್ತಲ ಆರೋಪಿಸಿರುವರು.

        ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಎಂ ನ್ನು ಫೇಸ್‍ಬುಕ್‍ನಲ್ಲಿ ಟೀಕಿಸಿರುವ ಚೆನ್ನಿತ್ತಲ ಕಳೆದ ವಿಎಸ್ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯುಂಟುಮಾಡಿದ ಕಾರಣಕ್ಕಾಗಿ ಮುಖ್ಯಮಂತ್ರಿ ಅಚ್ಚುತಾನಂದನ್ ಅವರನ್ನು ಪಕ್ಷವು ಹೊಣೆಗಾರರನ್ನಾಗಿ ಮಾಡಿದೆ ಎಂದು ಹೇಳಿದ್ದಾರೆ.

           ಸುಮಾರು ಐದು ಅಭಿವೃದ್ಧಿ ಯೋಜನೆಗಳ ಫೈಲ್‍ಗಳನ್ನು ವಿಎಸ್ ತೆರವುಗೊಳಿಸದಿದ್ದಾಗ, ರಾಜ್ಯ ಕಾರ್ಯದರ್ಶಿಯಾಗಿದ್ದ ಪಿಣರಾಯಿ ವಿಜಯನ್ ನೇತೃತ್ವದ ಪಕ್ಷದ ಕಾರ್ಯದರ್ಶಿ ವಿ.ಎಸ್ ವಿರುದ್ಧ ನಿರ್ಣಯವನ್ನು ಅಂಗೀಕರಿಸಿತ್ತು ಎಂದು ಚೆನ್ನಿತ್ತಲ ಆರೋಪಿಸಿದರು.

        'ಅಭಿವೃದ್ಧಿಯನ್ನು ಗಟ್ಟಿಗೊಳಿಸುತ್ತಿರುವ ಮುಖ್ಯಮಂತ್ರಿ' ಎಂದು ವಿ.ಎಸ್ ಅವರನ್ನು ಆ ದಿನ ತೇಜೋವಧೆ ಮಾಡಲಾಯಿತು. ವಿಎಸ್ ವಾಸ್ತವವಾಗಿ ನೈಜ ಕಮ್ಯುನಿಸ್ಟ್ ನಾಯಕರು ಮತ್ತು ಪಕ್ಷಕ್ಕೆ ನೀಡಿದ ಲಂಚವನ್ನು ತಡೆಹಿಡಿದಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾಗಿತ್ತು.  ಪಿಣರಾಯಿ ಅವರ ಲಂಚಾವತಾರ ಇಂದು ನಿನ್ನೆಯದಲ್ಲ' ಎಂದು ಚೆನ್ನಿತ್ತಲ ಗಂಭೀರ ಆರೋಪ ಮಾಡಿರುವರು. ಪಿಣರಾಯಿ ವಿಜಯನ್ ಅವರು ಅಧಿಕಾರಕ್ಕೆ ಬಂದಾಗ ತಮ್ಮ ಕಚೇರಿಯನ್ನು ಲಂಚದ ಕಚೇರಿಯಾಗಿ ಪರಿವರ್ತಿಸಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಟೀಕಿಸಿದರು.

       ಸಿಎಂ ಕಚೇರಿಯು ಸಿದ್ಧಪಡಿಸುತ್ತಿರುವ ಯೋಜನೆಗಳ ಬಗ್ಗೆ ಎಲ್ಲಾ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಲಾಗಿದ್ದು ಪ್ರಧಾನ ಕಾರ್ಯದರ್ಶಿ ಶಿವಶಂಕರ ಆಗಿರುವರು. ಜೊತೆಗೆ ಎಲ್ಲಾ ಯೋಜನೆಗಳಲ್ಲಿ ಶಿವಶಂಕರನ್ ಮತ್ತು ಸಪ್ನಾ ಅವರ ಜಂಟಿ ಉದ್ಯಮವಾಗಿ ಆಟಗಳು ನಡೆಯುತ್ತಿತ್ತು ಎಂದು ಚೆನ್ನಿತ್ತಲ ಹೇಳಿರುವರು.

        ಹಿಂದೆ, ಕೇರಳದ ಕೆಲವು ದೊಡ್ಡ ಉದ್ಯಮಗಳು ಹಣ ವರ್ಗಾವಣೆಯ ಮಾರ್ಗವಾಗಿದ್ದವು, ಆದರೆ ಇಂದು ಅವರು ಕೇರಳದ ಹೊರಗಿನ ಕಾಪೆರ್Çರೇಟ್ ಸಂಸ್ಥೆಗಳೊಂದಿಗೆ ಸ್ನೇಹಿತರಾಗಿದ್ದಾರೆ. ಅಮೆರಿಕದ ಕಂಪನಿ ಸ್ಪ್ರಿಂಕ್ಲರ್‍ನೊಂದಿಗಿನ ಮೈತ್ರಿಯನ್ನು ಈ ಬಗ್ಗೆ ಉಲ್ಲೇಖಿಸಬಹುದಾದದ್ದು ಎಂದು ಚೆನ್ನಿತ್ತಲ ಟೀಕಿಸಿದರು.

         'ಸಿಪಿಎಂ ಮಧ್ಯವರ್ತಿಗಳ ಮೂಲಕ ಕುಳಗಳನ್ನು ಆಹ್ವಾನಿಸುವ ಮತ್ತು ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡುವ, ಸರ್ಕಾರದ ವೆಚ್ಚದಲ್ಲಿ ಕೋಟಿ ರೂಪಾಯಿಗಳನ್ನು ಲಂಚ ಸ್ವೀಕರಿಸುವ ಉದ್ಯಮವನ್ನು ಪ್ರಾರಂಭಿಸಿದೆ ಮತ್ತು ಜಾರಿಗೆ ತಂದಿದೆ. ಮುಖ್ಯಮಂತ್ರಿ ಅದರ ನಾಯಕ. ಪಿಣರಾಯಿಯು ಈಗ ಲಾವ್ಲಿನ್ ಪ್ರಕರಣದಂತೆಯೇ ಅದೇ ತಂತ್ರವನ್ನು ಬಳಸುತ್ತಿದ್ದಾರೆ. ಸ್ವಯಂ-ವಿನಾಶ ಮತ್ತು ಮೋಸದತ್ತ ಸಾಗಿದೆ. ತಪ್ಪಿಸಿಕೊಳ್ಳಲು ಪಕ್ಷ ಮತ್ತು ಎಲ್ಡಿಎಫ್ ನ್ನು ಸಜ್ಜುಗೊಳಿಸಿದೆ. ರಾಜಕೀಯ ಗುರಾಣಿಗಳನ್ನು ಬಳಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಪಿಣರಾಯಿ ವಿಜಯನ್ ಅರ್ಥಮಾಡಿಕೊಳ್ಳಬೇಕು ' ಎಂದು ಚೆನ್ನಿತ್ತಲ ಎಚ್ಚರಿಕೆ ನೀಡಿರುವರು. 

        ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರು ಮುಖ್ಯಮಂತ್ರಿಯನ್ನು ಬಚವಾಗಿಸಲು ಬೆಂಬಲಿಸುವುದು ಅನಿವಾರ್ಯವಾಗಿತ್ತು. ಚೇಟ್ಟನ್ ಬಾವಾ ಮತ್ತು ಅನಿಯನ್ ಬಾವಾ ವ್ಯವಸ್ಥೆ ಕೇರಳದಲ್ಲಿ ಕೊನೆಗೊಳ್ಳಲಿದೆ ಎಂದು ಪ್ರತಿಪಕ್ಷದ ನಾಯಕ ಹೇಳಿರುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries