HEALTH TIPS

ಮತ್ತೆ ಏರುಗತಿಯೇ?-ಒಂದೆಡೆ ನಿಬಂಧನೆಗಳಿಗೆ ಕೊಕ್, ಇನ್ನೊಂದೆಡೆ ಹೆಚ್ಚಳಗೊಳ್ಳುವ ಸೋಂಕು!-ರಾಜ್ಯದಲ್ಲಿ ಇಂದು 6268 ಮಂದಿಗೆ ಕೋವಿಡ್-ಸಂಪರ್ಕದ ಮೂಲಕ 5652 ಮಂದಿಗೆ ಸೋಂಕು-ಕಾಸರಗೋಡು-75 ಮಂದಿಗಳಿಗೆ ಕೋವಿಡ್ ದೃಢ

          

       ತಿರುವನಂತಪುರ: ಕೇರಳದಲ್ಲಿ ಇಂದು ಮತ್ತೆ ಕೋವಿಡ್ ಏರಿಕೆ ಕಂಡುಬಂದಿದ್ದು ರಾಜ್ಯಾದ್ಯಂತ 6268 ಜನರಿಗೆ ಕೋವಿಡ್ ಖಚಿತವಾಗಿದೆ. ಎರ್ನಾಕುಳಂ 1006, ಪತ್ತನಂತಿಟ್ಟು 714, ಕೋಝಿಕ್ಕೋಡ್ 638, ಕೊಲ್ಲಂ 602, ಕೊಟ್ಟಾಯಂ 542, ಆಲಪ್ಪುಳ 463, ತ್ರಿಶೂರ್ 450, ಮಲಪ್ಪುರಂ 407, ಪಾಲಕ್ಕಾಡ್ 338, ತಿರುವನಂತಪುರ 320, ವಯನಾಡ್ 267, ಕಣ್ಣೂರು 242, ಇಡುಕ್ಕಿ 204, ಕಾಸರಗೋಡು 75 ಎಂಬಂತೆ ಸೋಂಕು ಬಾಧಿಸಿದೆ.  

    ಅಲ್ಲದೆ ಇತ್ತೀಚೆಗೆ ಯುಕೆಯಿಂದ ಬಂದ 29 ಜನರಲ್ಲೂ ಜೆನೆಟಿಕ್ ಮಾರ್ಪಟ್ಟ ಹೊಸ ನಮೂನೆಯ ವೈರಸ್ ಖಚಿತಪಟ್ಟಿದೆ. ಅವರ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಎನ್‍ಐವಿ ಪುಣೆಗೆ ಕಳುಹಿಸಲಾಗಿದೆ.

      ಕಳೆದ 24 ಗಂಟೆಗಳಲ್ಲಿ 63,887 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ಪ್ರಮಾಣ ಶೇ.9.81 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್ ಎ ಎಂ ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 78,53,651 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.

     ಕಳೆದ 24 ಗಂಟೆಗಳಲ್ಲಿ 28 ಮಂದಿ ಕೋವಿಡ್ ಕಾರಣ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ  3,042 ಕ್ಕೆ ಏರಿಕೆಯಾಗಿದೆ. 

     ಇಂದು, ಸೋಂಕು ಪತ್ತೆಯಾದವರಲ್ಲಿ 102 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 5652 ಜನರಿಗೆ ಸೋಂಕು ತಗುಲಿತು. 460 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 919, ಪತ್ತನಂತಿಟ್ಟು 612, ಕೋಝಿಕ್ಕೋಡ್ 611, ಕೊಲ್ಲಂ 593, ಕೊಟ್ಟಾಯಂ 502, ಆಲಪ್ಪುಳ 454, ತ್ರಿಶೂರ್ 433, ಮಲಪ್ಪುರಂ 394, ಪಾಲಕ್ಕಾಡ್ 222, ತಿರುವನಂತಪುರ 207, ವಯನಾಡ್ 253, ಕಣ್ಣೂರು 195, ಇಡುಕ್ಕಿ 190, ಕಾಸರಗೋಡು 67 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದವರಾಗಿದ್ದಾರೆ. 

      54 ಮಂದಿ ಆರೋಗ್ಯ ಕಾರ್ಯಕರ್ತರಿಗೂ ಸೋಂಕು ದೃಢಪಡಿಸಲಾಗಿದೆ. ಎರ್ನಾಕುಳಂ 12, ಕಣ್ಣೂರು 10, ಪತ್ತನಂತಿಟ್ಟು 8, ತಿರುವನಂತಪುರ 7, ಕೋಝಿಕ್ಕೋಡ್ 5, ಕಾಸರಗೋಡು 4, ಪಾಲಕ್ಕಾಡ್ 3, ತ್ರಿಶೂರ್, ವಯನಾಡ್ 2 ಮತ್ತು ಇಡುಕಿ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. 

     ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 5707 ಜನರ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವಾಗಿವೆ. ತಿರುವನಂತಪುರ 392, ಕೊಲ್ಲಂ 389, ಪತ್ತನಂತಿಟ್ಟು 243, ಆಲಪ್ಪುಳ 479, ಕೊಟ್ಟಾಯಂ 517, ಇಡುಕ್ಕಿ 222, ಎರ್ನಾಕುಳಂ 780, ತ್ರಿಶೂರ್ 451, ಪಾಲಕ್ಕಾಡ್ 333, ಮಲಪ್ಪುರಂ 609, ಕೊಝಿಕ್ಕೋಡ್ 718, ವಯನಾಡ್ 217, ಕಣ್ಣೂರು 201, ಕಾಸರಗೋಡು 156 ಎಂಬಂತೆ ನೆಗೆಟಿವ್ ಆಗಿದೆ.  ಇದರೊಂದಿಗೆ 65,394 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 6,87,104 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

      ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,47,725 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,35,609 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 12,116 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1426 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

      ಇಂದು 4 ಹೊಸ ಹಾಟ್‍ಸ್ಪಾಟ್‍ಗಳಿವೆ. ಹೊಸ ಹಾಟ್‍ಸ್ಪಾಟ್‍ಗಳು ತ್ರಿಶೂರ್ ಜಿಲ್ಲೆಯ ಪುತೂರ್ (ಕಂಟೋನ್ಮೆಂಟ್ ವಲಯ ವಾರ್ಡ್ 19), ಚಿತ್ತೌರ್ (ಸಬ್ ವಾರ್ಡ್ 1), ಕೊಝಿಂಚೆರ್ರಿ (ಸಬ್ ವಾರ್ಡ್ 1) ಮತ್ತು ಪತ್ತನಂತಿಟ್ಟು ಜಿಲ್ಲೆಯ ಸೀತತೋಡು (13). ಇಂದು 7 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಇದರೊಂದಿಗೆ, ಪ್ರಸ್ತುತ ಒಟ್ಟು 460 ಹಾಟ್‍ಸ್ಪಾಟ್‍ಗಳಿವೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries