ಪತ್ತನಂತಿಟ್ಟು: ಕೋವಿಡ್ ಮಾನದಂಡಗಳನ್ನು ಅನುಸರಿಸಿ ಶಬರಿಮಲೆ ಸನ್ನಿಧಿಯಲ್ಲಿ ಶನಿವಾರ ಮಂಡಲ ಪೂಜೆ ನಡೆಸಲಾಯಿತು. ಪೂಜೆಗೆ ತಂತ್ರಿವರ್ಯ ಕಂಠಾರರ್ ಮಹೇಶ್ವರರು ನೇತೃತ್ವ ವಹಿಸಿದ್ದರು.
ಸಮಾರಂಭಗಳ ಸಮಾರೋಪವು ಸಂಜೆ ದೀಪಪೂಜೆ ಹಾಗೂ ಶೋಭಾಯಾತ್ರೆಯೊಂದಿಗೆ ಈ ವರ್ಷದ ತೀರ್ಥಯಾತ್ರೆ ಕೊನೆಗೊಂಡಿತು. ಬೆಳಿಗ್ಗೆ 11 ಗಂಟೆಗೆ ಯಾತ್ರಿಕರನ್ನು ಪಂಪಾದಲ್ಲಿ ತಡೆಹಿಡಿಯಲಾಗಿತ್ತಾದರೂ,ಸನ್ನಿಧಿಯಲ್ಲಿ ಸೇರಿಕೊಂಡಿದ್ದ ನಿಯಮಿತ ಭಕ್ತರ ಸಮ್ಮುಖ ಭಕ್ತಿಯಿಂದ ಸಂಪನ್ನಗೊಂಡಿತು.
ಬೆಳಿಗ್ಗೆ 11.20 ರಿಂದ ಮಧ್ಯಾಹ್ನ 12.40 ರ ನಡುವೆ ತಂತ್ರಿವರ್ಯ ಕಂಠಾರರ್ ಮಹೇಶ್ವರರು ಮತ್ತು ಮೇಲ್ಶಾಂತಿ ಜಯರಾಜ್ ಪೆÇತ್ತಿ ಅವರು ಪೂಜೆಗಳನ್ನು ನೆರವೇರಿಸಿದರು. ಬೆಳಿಗ್ಗೆ 11.30 ಕ್ಕೆ ಕಲಶಾಭಿಷೇಕ ನಡೆಯಿತು. ಒಂದು ಗಂಟೆಗೆ ಪೂಜೆಯ ಬಳಿಕ ಚಿನ್ನದ ನಿಲುವಂಗಿಯೊಂದಿಗೆ ಮಂಡಲ ಪೂಜಾ ವಿಧಿಗಳು ನಡೆಯಿತು.
ಈ ವರ್ಷದ ಮಂಡಲ ಅವಧಿ ಸಂಜೆ 5 ಗಂಟೆಗೆ ದೇವಾಲಯ ತೆರೆಯುವುದರೊಂದಿಗೆ ಮತ್ತು ರಾತ್ರಿ 9 ಗಂಟೆಗೆ ಹರಿವರಾಸನಂ ಜಪಿಸಿ ಮುಕ್ತಾಯಗೊಂಡಿತು. ವಿಶೇಷವಾಗಿ ಪೂಜೆಗಳು ಮತ್ತು ದೀಪರಾಧನ ನಡೆಯಿತು.