HEALTH TIPS

ಶಿಗೆಲ್ಲಾ ರೋಗ: ಆರೋಗ್ಯ ಸಚಿವೆಯಿಂದ ಹೆಚ್ಚು ಜಾಗರೂಕಲಾಗಲು ಸೂಚನೆ


      ತಿರುವನಂತಪುರ: ಕೇರಳದಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಇರುವುದು ಖಚಿತವಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ. ಫೇಸ್‍ಬುಕ್ ಮೂಲಕ ರೋಗದ ವಿರುದ್ಧ ಮುನ್ನೆಚ್ಚರಿಕೆ ವಹಿಸುವಂತೆ ಸಚಿವರು ಜನತೆಗೆ ಕರೆ ನೀಡಿದ್ದಾರೆ. ಕುದಿಸಿದ ನೀರನ್ನು ಮಾತ್ರ ಕುಡಿಯಬೇಕು ಎಂದು ಸಚಿವರು ಹೇಳಿದರು.

       ಶಿಗೆಲ್ಲಾ ರೋಗನಿರ್ಣಯ ಖಚಿತವಾದ ತಕ್ಷಣ ಆರೋಗ್ಯ ಇಲಾಖೆ ಮುಂಜಾಗ್ರತ ಕ್ರಮಕ್ಕೆ ಮುಂದಾಗಿದೆ. ವೈದ್ಯಕೀಯ ಶಿಬಿರಗಳನ್ನು ನಡೆಸಲಾಗಿದ್ದು, ಜನರು ಸಂವೇದನಾಶೀಲರಾಗಿದ್ದಾರೆ. ಈ ಬ್ಯಾಕ್ಟೀರಿಯಾದ ಸೋಂಕು ಹೇಗೆ ಹರಡುತ್ತದೆ ಎಂಬುದರ ಬಗ್ಗೆ ಜನರಿಗೆ ಚೆನ್ನಾಗಿ ತಿಳಿದಿದೆ. ಆರೋಗ್ಯ ಇಲಾಖೆ ನೀಡಿರುವ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೋರುತ್ತಿದ್ದೇವೆ ಎಂದು ಸಚಿವರು ಹೇಳಿದರು.

      11 ವರ್ಷದ ಮಗು ಮೃತಪಟ್ಟಿರುವುದರೊಂದಿಗೆ ಸೋಂಕು ದೃಢಪಟ್ಟಿದೆ. ಇದು ಹೆಚ್ಚು ಜನರಿಗೆ ಹರಡಿರುವುದು ನಿಜ. ಆದರೆ ಸಮಯೋಚಿತ ಕಾರ್ಯಚಟುವಟಿಕೆಗಳಿಂದ  ಹೆಚ್ಚಿನ ಜನರು ಸಾಯುವುದನ್ನು ತಡೆಯಲು ನಮಗೆ ಸಾಧ್ಯವಾಯಿತು. ಪರೀಕ್ಷಿಸಿದ 50 ಕ್ಕಿಂತ ಕಡಿಮೆ ಜನರಲ್ಲಿ ಆರು ಜನರಿಗೆ ರೋಗ ಪತ್ತೆಯಾಗಿದೆ ಎಂದು ಸಚಿವರು ಹೇಳಿದರು.

      ಮುಂಜಾಗ್ರತೆಗೆ ಹೆಚ್ಚು ಗಮನ ಕೊಡಿ. ಕೈಗಳನ್ನು ಚೆನ್ನಾಗಿ ತೊಳೆಯಬೇಕು, ನೀರನ್ನು ಚೆನ್ನಾಗಿ ಕುದಿಸಿ ಕುಡಿಯಬೇಕು. ಬಾವಿಗಳನ್ನು ಸೂಪರ್ ಕ್ಲೋರಿನೇಟ್ ಮಾಡಲು ಕೂಡಲೇ ಆಸಕ್ತರಾಗಬೇಕು ಎಂದು ಅವರು ಹೇಳಿದರು. ಕುಡಿಯುವ ನೀರು ಕಲುಷಿತವಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.

        ಶಿಬೆಲ್ಲಾ ನೀರಿನ ಮೂಲಕ ಹರಡಿರುವುದು ಪ್ರಾಥಮಿಕ ಅಧ್ಯಯನಗಳಿಂದ ಖಚಿತಗೊಂಡಿದೆ. ಪ್ರಾಥಮಿಕ ವರದಿಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಸಮುದಾಯ ಔಷಧ ವಿಭಾಗವು ಸಲ್ಲಿಸಿದೆ. ರೋಗಕಾರಕ ಬ್ಯಾಕ್ಟೀರಿಯಾವನ್ನು ಮಾನವ ಮಲವಿಸರ್ಜನೆಯಿಂದ ನೀರಿಗೆ ಹರಡಲ್ಪಡುತ್ತದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries