HEALTH TIPS

ಪೋಪ್ಯುಲರ್ ಫೈನಾನ್ಸ್ ನಿಗಮದ ಎಲ್ಲ ಶಾಖೆಗಳನ್ನೂ ಮುಚ್ಚುಗಡೆ ನಡೆಸುವಂತೆ ಜಿಲ್ಲಾಧಿಕಾರಿ ಆದೇಶ

        ಕಾಸರಗೋಡು: ಪೋಪ್ಯುಲರ್ ಫೈನಾನ್ಸ್ ನಿಗಮದ ಕಾಸರಗೋಡು ಜಿಲ್ಲೆಯ ಎಲ್ಲ ಶಾಖೆಗಳನ್ನೂ , ಅವುಗಳ ತತ್ಸಂಬಂಧಿ ಸಂಸ್ಥೆಗಳನ್ನೂ ಮುಚ್ಚುಗಡೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿರುವರು.

        ಈ ಸಂಸ್ಥೆಯ ಶಾಖೆಗಳ ಮತ್ತು ತತ್ಸಂಬಂಧಿ ಸಂಸ್ಥೆಗಳನ್ನು ಮುಚ್ಚುಗಡೆ ನಡೆಸಿ ಸೀಲ್ ಮಾಡಿ ಕೀಲಿಕೈಯನ್ನು ಜಿಲ್ಲಾಧಿಕಾರಿ ಅವರ ವಶಕ್ಕೆ ನೀಡುವಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗೆ ಆದೇಶ ನೀಡಲಾಗಿದೆ. ಮುಚ್ಚುಗಡೆ ನಡೆಸುವ ಸಂಸ್ಥೆಗಳಿಗೆ ಅಗತ್ಯದ ಸುರಕ್ಷೆ ಖಚಿತಪಡಿಸುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ. ಈ ಸಂಸ್ಥೆಗಳ ನಿರ್ಧೇಶಕರ, ಪಾಲುದಾರರ, ಏಜೆಂಟರ ಮಾಲೀಕತ್ವದ ಆಸ್ತಿಗಳ ಮಾರಾಟ ಇತ್ಯಾದಿ ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಜಿಲ್ಲಾ ನೋಂದಣಿ ಅಧಿಕಾರಿಗೂ ಆದೇಶ ನೀಡಲಾಗಿದೆ. ಈ ಸಂಸ್ಥೇಯ ಶಾಖೆಗಳ ಮತ್ತು ತತ್ಸಂಬಂಧಿ ಸಂಸ್ಥೆಗಳ ಎಲ್ಲ ಅಕೌಂಟ್ ಗಳನ್ನು ತಡೆಹಿಡಿಯುವಂತೆ ಜಿಲ್ಲೆಯ ಸಂಬಂಧಪಟ್ಟ ಹಣಕಾಸು ಸಂಸ್ಥೆಗಳಿಗೆ, ಜಿಲ್ಲಾ ಲೀಡ್ ಬ್ಯಾಂಕ್ ಪ್ರಬಂಧಕರಿಗೆ ಆದೇಶ ನೀಡಲಾಗಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries