ಕಾಸರಗೋಡು: ಪೋಪ್ಯುಲರ್ ಫೈನಾನ್ಸ್ ನಿಗಮದ ಕಾಸರಗೋಡು ಜಿಲ್ಲೆಯ ಎಲ್ಲ ಶಾಖೆಗಳನ್ನೂ , ಅವುಗಳ ತತ್ಸಂಬಂಧಿ ಸಂಸ್ಥೆಗಳನ್ನೂ ಮುಚ್ಚುಗಡೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿರುವರು.
ಈ ಸಂಸ್ಥೆಯ ಶಾಖೆಗಳ ಮತ್ತು ತತ್ಸಂಬಂಧಿ ಸಂಸ್ಥೆಗಳನ್ನು ಮುಚ್ಚುಗಡೆ ನಡೆಸಿ ಸೀಲ್ ಮಾಡಿ ಕೀಲಿಕೈಯನ್ನು ಜಿಲ್ಲಾಧಿಕಾರಿ ಅವರ ವಶಕ್ಕೆ ನೀಡುವಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗೆ ಆದೇಶ ನೀಡಲಾಗಿದೆ. ಮುಚ್ಚುಗಡೆ ನಡೆಸುವ ಸಂಸ್ಥೆಗಳಿಗೆ ಅಗತ್ಯದ ಸುರಕ್ಷೆ ಖಚಿತಪಡಿಸುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ. ಈ ಸಂಸ್ಥೆಗಳ ನಿರ್ಧೇಶಕರ, ಪಾಲುದಾರರ, ಏಜೆಂಟರ ಮಾಲೀಕತ್ವದ ಆಸ್ತಿಗಳ ಮಾರಾಟ ಇತ್ಯಾದಿ ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಜಿಲ್ಲಾ ನೋಂದಣಿ ಅಧಿಕಾರಿಗೂ ಆದೇಶ ನೀಡಲಾಗಿದೆ. ಈ ಸಂಸ್ಥೇಯ ಶಾಖೆಗಳ ಮತ್ತು ತತ್ಸಂಬಂಧಿ ಸಂಸ್ಥೆಗಳ ಎಲ್ಲ ಅಕೌಂಟ್ ಗಳನ್ನು ತಡೆಹಿಡಿಯುವಂತೆ ಜಿಲ್ಲೆಯ ಸಂಬಂಧಪಟ್ಟ ಹಣಕಾಸು ಸಂಸ್ಥೆಗಳಿಗೆ, ಜಿಲ್ಲಾ ಲೀಡ್ ಬ್ಯಾಂಕ್ ಪ್ರಬಂಧಕರಿಗೆ ಆದೇಶ ನೀಡಲಾಗಿದೆ.