HEALTH TIPS

ರಾಜ್ಯದಲ್ಲಿ ಇಂದು 5051 ಮಂದಿಗೆ ಸೋಂಕು-ಸಂಪರ್ಕದ ಮೂಲಕ 4489 ಮಂದಿಗೆ ಹರಡುವಿಕೆ-ಕಾಸರಗೋಡು-86 ಮಂದಿಗೆ ಕೋವಿಡ್

                             

      ತಿರುವನಂತಪುರ: ರಾಜ್ಯದಲ್ಲಿ ಇಂದು 5051 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ.  ಎರ್ನಾಕುಳಂ 663, ಕೊಟ್ಟಾಯಂ 515, ಪತ್ತನಂತಿಟ್ಟು 514, ಕೋಝಿಕ್ಕೋಡ್ 480, ಮಲಪ್ಪುರಂ 435, ಆಲಪ್ಪುಳ 432, ತ್ರಿಶೂರ್ 432, ಕೊಲ್ಲಂ 293, ತಿರುವನಂತಪುರ 284, ಇಡುಕಿ 283, ವಯನಾಡ್ 244, ಪಾಲಕ್ಕಾಡ್ 239, ಕಣ್ಣೂರು 151, ಕಾಸರಗೋಡು 86 ಎಂಬಂತೆ ಸೋಂಕು ದೃಢಪಟ್ಟಿದೆ. 

    ಕೋವಿಡ್ ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ ಆಗಮಿಸಿದ 4 ಜನರಲ್ಲಿ ದೃಢಪಡಿಸಲಾಗಿದೆ. ಇದರೊಂದಿಗೆ, ಇತ್ತೀಚೆಗೆ ಯುಕೆ ಯಿಂದ ಬಂದ 47 ಜನರಿಗೆ ಕೋವಿಡ್ ನಿಖರಗೊಂಡಿದೆ. ಒಟ್ಟು 6 ಜನರಿಗೆ ರೂಪಾಂತರಿತ  ವೈರಸ್ ಇರುವುದು ಪತ್ತೆಯಾಗಿದೆ.

     ಕಳೆದ 24 ಗಂಟೆಗಳಲ್ಲಿ 60,613 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.8.83 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್‍ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 82,85,394 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.

      ಕಳೆದ 24 ಗಂಟೆಗಳಲ್ಲಿ 25 ಮಂದಿ ಕಡ್ ಬಾಧಿಸಿ ಮೃತಪಟ್ಟಿರುವರು. ಒಟ್ಟು ಸಾವಿನ ಸಂಖ್ಯೆ 3234 ಕ್ಕೆ ಏರಿಕೆಯಾಗಿದೆ. 

     ಇಂದು, ಸೋಂಕು ಪತ್ತೆಯಾದವರಲ್ಲಿ 78 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4489 ಜನರಿಗೆ ಸೋಂಕು ತಗುಲಿತು. 448 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 596, ಕೊಟ್ಟಾಯಂ 480, ಪತ್ತನಂತಿಟ್ಟು 471, ಕೋಝಿಕ್ಕೋಡ್  450, ಮಲಪ್ಪುರಂ 417, ಆಲಪ್ಪುಳ 425, ತ್ರಿಶೂರ್ 418, ಕೊಲ್ಲಂ 284, ತಿರುವನಂತಪುರ 176, ಇಡುಕಿ 263, ವಯನಾಡ್ 232, ಪಾಲಕ್ಕಾಡ್ 82, ಕಣ್ಣೂರು 111, ಕಾಸರಗೋಡು 84 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. 

     ಮೂವತ್ತಾರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢೀಕರಿಸಲ್ಪಟ್ಟಿದೆ. ಎರ್ನಾಕುಳಂ 7, ಕೋಝಿಕ್ಕೋಡ್  6, ಕಣ್ಣೂರು 5, ಕೊಲ್ಲಂ, ತ್ರಿಶೂರ್ ತಲಾ 4, ತಿರುವನಂತಪುರ 3, ಪತ್ತನಂತಿಟ್ಟು, ವಯನಾಡ್ ತಲಾ 2, ಇಡುಕಿ, ಪಾಲಕ್ಕಾಡ್ ಮತ್ತು ಕಾಸರಗೋಡು ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಂಟಾಗಿದೆ.

  ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 5638 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 340, ಕೊಲ್ಲಂ 270, ಪತ್ತನಂತಿಟ್ಟು 545, ಆಲಪ್ಪುಳ 485, ಕೊಟ್ಟಾಯಂ 349, ಇಡುಕ್ಕಿ 65, ಎರ್ನಾಕುಳಂ 1102, ತ್ರಿಶೂರ್ 395, ಪಾಲಕ್ಕಾಡ್ 210, ಮಲಪ್ಪುರಂ 545, ಕೋಝಿಕ್ಕೋಡ್ 517, ವಯನಾಡ್ 258, ಕಣ್ಣೂರು 458, ಕಾಸರಗೋಡು 11 ಮಂದಿಗೆ ನೆಗೆಟಿವ್ ಆಗಿದೆ. ಇದರೊಂದಿಗೆ 64,445 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 7,28,060 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

     ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,93,370 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,81,935 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 11,435 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1379 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

      ಇಂದು 3 ಹೊಸ ಹಾಟ್‍ಸ್ಪಾಟ್‍ಗಳಿವೆ. ಹೊಸ ಹಾಟ್‍ಸ್ಪಾಟ್‍ಗಳೆಂದರೆ ಪತ್ತನಂತಿಟ್ಟು ಜಿಲ್ಲೆಯ ಪಂಡಲಂ ಪುರಸಭೆ (ಕಂಟೋನ್ಮೆಂಟ್ ವಲಯ ಉಪ ವಾರ್ಡ್‍ಗಳು 31 ಮತ್ತು 32), ಒಟ್ಟಪಾಲಂ ಪುರಸಭೆ (27) ಮತ್ತು ಪಾಲಕ್ಕಾಡ್ ಜಿಲ್ಲೆಯ ಪುತ್ತುಪರಿಯಂ (11). ಇಂದು 3 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಇದರೊಂದಿಗೆ, ಪ್ರಸ್ತುತ ಒಟ್ಟು 446 ಹಾಟ್‍ಸ್ಪಾಟ್‍ಗಳಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries