HEALTH TIPS

ರಾಜ್ಯದಲ್ಲಿ ಇಂದು 5266 ಮಂದಿಗೆ ಕೋವಿಡ್ ದೃಢ-ಸಂಪರ್ಕದ ಮೂಲಕ 4746 ಜನರಿಗೆ ಸೋಂಕು-ಕಾಸರಗೋಡು-70 ಮಂದಿಗೆ ಸೋಂಕು

                     

          ತಿರುವನಂತಪುರ: ರಾಜ್ಯದಲ್ಲಿ ಇಂದು 5266 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಎರ್ನಾಕುಳಂ 743, ಕೋಝಿಕ್ಕೋಡ್  650, ಕೊಟ್ಟಾಯಂ 511, ಪತ್ತನಂತಿಟ್ಟು 496, ಕೊಲ್ಲಂ 484, ಮಲಪ್ಪುರಂ 482, ತ್ರಿಶೂರ್ 378, ಆಲಪ್ಪುಳ 371, ತಿರುವನಂತಪುರ 300, ಕಣ್ಣೂರು 230, ಪಾಲಕ್ಕಾಡ್ 211, ಇಡುಕ್ಕಿ 187, ವಯನಾಡ್ 153, ಕಾಸರಗೋಡು 70 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 

      ಕಳೆದ 24 ಗಂಟೆಗಳಲ್ಲಿ ಯುಕೆಯಿಂದ ಆಗಮಿಸಿದ ವ್ಯಕ್ತಿಯೊಬ್ಬರಿಗೆ ಕೋವಿಡ್ ದೃಢ ಪಡಿಸಲಾಗಿದೆ. ಈವರೆಗೆ ಯುಕೆಯಿಂದ ಆಗಮಿಸಿದ 77 ಜನರಿಗೆ ಕೋವಿಡ್ ಖಚಿತಪಡಿಸಲಾÀಗಿದೆ. ಈ ಪೈಕಿ 56 ಜನರಿಗೆ ನೆಗೆಟಿವ್ ಆಗಿದೆ. ಒಟ್ಟು 10 ಜನರಿಗೆ ರೂಪಾಂತರಿ ವೈರಸ್ ಇರುವುದು ಪತ್ತೆಯಾಗಿದೆ.

     ಕಳೆದ 24 ಗಂಟೆಗಳಲ್ಲಿ 48,118 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.10.94 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್ ಎ ಎಂ ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 96,25,913 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

       ಕಳೆದ 24 ಗಂಟೆಗಳಲ್ಲಿ 21 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 3743 ಕ್ಕೆ ಏರಿಕೆಯಾಗಿದೆ. 

      ಇಂದು, ಸೋಂಕು ಪತ್ತೆಯಾದವರಲ್ಲಿ 71 ಮಂದಿ ರಾಜ್ಯದ ಹೊರಗಿನಿಂದ ಬಂದವರು.  ಸಂಪರ್ಕದ ಮೂಲಕ 4746 ಜನರಿಗೆ ಸೋಂಕು ತಗುಲಿತು. 407 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 688, ಕೋಝಿಕ್ಕೋಡ್ 634, ಕೊಟ್ಟಾಯಂ 457, ಪತ್ತನಂತಿಟ್ಟು 454, ಕೊಲ್ಲಂ 480, ಮಲಪ್ಪುರಂ 474, ತ್ರಿಶೂರ್ 372, ಆಲಪ್ಪುಳ 365, ತಿರುವನಂತಪುರ 201, ಕಣ್ಣೂರು 159, ಪಾಲಕ್ಕಾಡ್ 80, ಇಡಕ್ಕಿ 179, ವಯನಾಡ್ 149,ಕಾಸರಗೋಡು 59 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

       42 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕಿರುವುದು ಪತ್ತೆಯಾಗಿದೆ. ಕಣ್ಣೂರು 9, ಕೋಝಿಕ್ಕೋಡ್ 7, ತಿರುವನಂತಪುರ, ಎರ್ನಾಕುಳಂ 5, ಪಾಲಕ್ಕಾಡ್ 4, ಕೊಲ್ಲಂ, ಪತ್ತನಂತಿಟ್ಟು, ಕೊಟ್ಟಾಯಂ, ತ್ರಿಶೂರ್, ವಯನಾಡ್ ಮತ್ತು ಕಾಸರಗೋಡು 2 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. 

       ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 5730 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 382, ಕೊಲ್ಲಂ 306, ಪತ್ತನಂತಿಟ್ಟು 402, ಆಲಪ್ಪುಳ 471, ಕೊಟ್ಟಾಯಂ 424, ಇಡುಕ್ಕಿ 354, ಎರ್ನಾಕುಳಂ 725, ತ್ರಿಶೂರ್ 484, ಪಾಲಕ್ಕಾಡ್ 429, ಮಲಪ್ಪುರಂ 387, ಕೋಝಿಕ್ಕೋಡ್  790, ವಯನಾಡ್ 187,ಕಣ್ಣೂರು 197, ಕಾಸರಗೋಡು 92 ಎಂಬಂತೆ ನೆಗೆಟಿವ್ ಆಗಿದೆ.   ಇದರೊಂದಿಗೆ 70,983 ಜನರಿಗೆ ಸೋಂಕು  ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 8,54,206 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

       ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,18,874 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,07,392 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 11,482 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1330 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

      ಇಂದು ಹೊಸ ಹಾಟ್ ಸ್ಪಾಟ್ ಇದೆ. ಹೊಸ ಹಾಟ್‍ಸ್ಪಾಟ್ ಇಡುಕ್ಕಿ ಜಿಲ್ಲೆಯ ಪಂಪದುಂಪಾರ (ಕಂಟೈನ್‍ಮೆಂಟ್ ಉಪ-ವಾರ್ಡ್‍ಗಳು 10, 11).

      22 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 375 ಹಾಟ್‍ಸ್ಪಾಟ್‍ಗಳಿವೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries