ತಿರುವನಂತಪುರ: ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಅವರ ಸಹಾಯಕ ಖಾಸಗಿ ಕಾರ್ಯದರ್ಶಿ ಕೆ ಅಯ್ಯಪ್ಪನ್ ಇಂದು ಕಸ್ಟಮ್ಸ್ ವಿಚಾರಣೆಗೆ ಹಾಜರಾಗಲಿದ್ದಾರೆ. ಡಾಲರ್ ಕಳ್ಳಸಾಗಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಕಸ್ಟಮ್ಸ್ ನೋಟಿಸ್ ನೀಡಿತ್ತು. ಇದನ್ನು ಅನುಸರಿಸಿ ಕೆ.ಯ್ಯಪ್ಪನ್ ವಿಚಾರಣೆಗೊಳಗಾಗಲಿದ್ದಾರೆ.
ಈ ಪ್ರಕರಣದಲ್ಲಿ ಹಾಜರಾಗುವಂತೆ ಅಯ್ಯಪ್ಪನ್ಗೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ ಸ್ಪೀಕರ್ ಕಚೇರಿಯು ಎರಡೂ ಬಾರಿ ಕೆ. ಅಯಪ್ಪನ್ ಅವರಿಗೆ ಈಗ ಹಾಜರಾಗಲು ಸಾಧ್ಯವಿಲ್ಲ ಎಂದಿತ್ತು. ವಿಧಾನಸಭೆ ಅಧಿವೇಶನ ನಡೆಸಲು ನಿರ್ಧರಿಸಿದ್ದರಿಂದ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ಸ್ಪೀಕರ್ ಕಚೇರಿ ಮತ್ತು ಸಿಬ್ಬಂದಿಗೆ ಕಾನೂನು ರಕ್ಷಣೆ ಇದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ಆದರೆ ಸ್ಪೀಕರ್ ಅವರ ಖಾಸಗೀ ಸಹಾಯಕ ಕಾರ್ಯದರ್ಶಿಗೆ ಅಸೆಂಬ್ಲಿ ರೂಲ್ 165 ರ ಅಡಿಯಲ್ಲಿ ರಕ್ಷಣೆಯ ಅವಕಾಶ ಇದೆಯೆಂದು ಕಸ್ಟಮ್ಸ್ ಪತ್ರವನ್ನು ತಿರಸ್ಕರಿಸಲಾಗಿತ್ತು. ಬಳಿಕ ಕಠಿಣ ನಿಲುವುಗಳ ಭಾಷೆ ಬಳಸಿ ಕಾರ್ಯದರ್ಶಿಗೆ ಕಸ್ಟಮ್ಸ್ ನ ಉತ್ತರ ಬಂದಿದ್ದು ಕಸ್ಟಮ್ಸ್ ಪತ್ರದಲ್ಲಿ ಅಪರಾಧಿಗಳನ್ನು ರಕ್ಷಿಸುವುದಲ್ಲ, ಶಾಸಕಾಂಗ ನಿಯಮಗಳ 165 ನೇ ನಿಯಮವನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಲಾಗಿತ್ತು.