HEALTH TIPS

ಯುಡಿಎಫ್ ನೊಂದಿಗೆ ಮೈತ್ರಿಯಲ್ಲಿಲ್ಲ; ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ-ವೆಲ್ಪೇರ್ ಪಕ್ಷ

                         

         ಕೋಝಿಕ್ಕೋಡ್: ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಜೊತೆ ಯಾವುದೇ ಮೈತ್ರಿ ಇಲ್ಲ ಎಂದು ವೆಲ್ಪೇರ್ ಪಕ್ಷ ಹೇಳಿದೆ. ವಿಧಾನಸಭಾ ಚುನಾವಣೆಯಲ್ಲಿ ವೆಲ್ಪೇರ್ ಪಕ್ಷ ಯಾರೊಡನೆಯೂ ಮೈತ್ರಿ ಮಾಡದೆ ಸ್ವತಂತ್ರವಾಗಿ ಸ್ಪರ್ಧಿಸುತ್ತದೆ ಎಂದು ಪಕ್ಷದ ರಾಜ್ಯ ಅಧ್ಯಕ್ಷ ಹಮೀದ್ ವನಿಯಂಬಲಂ ಹೇಳಿರುವರು.

          ಸ್ಥಳೀಯಾಡಳಿತ ಸಂಸ್ಥೆಗಳ  ಚುನಾವಣೆಯಲ್ಲಿ ಯುಡಿಎಫ್ ನೊಂದಿಗಿನ  ಮೈತ್ರಿಯನ್ನು ತೊರೆದಿತ್ತು ಎಂದು ಅವರು ಹೇಳಿದರು. ಇದೇ ಸಂದರ್ಭ ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಂಚಿತವಾಗಿ ಯುಡಿಎಫ್ ನಡೆಯ ಬಗ್ಗೆ ಚರ್ಚಿಸಿದವರು ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಎಂದು ಹಮೀದ್ ವನಿಯಂಬಲಂ ಸ್ಪಷ್ಟಪಡಿಸಿದರು.

      ನಮ್ಮದು ಪ್ರಾದೇಶಿಕ ನಡೆ ಎಂದು ಪಕ್ಷ ಆರಂಭದಿಂದಲೇ ಸ್ಪಷ್ಟಪಡಿಸಿತ್ತು. ಇದು ವಿಧಾನಸಭೆ ಅಥವಾ ಸಂಸದೀಯ ಚುನಾವಣೆಗಳಲ್ಲಿ ಯಾವುದೇ ಪಕ್ಷಗಳೊಂದಿಗೆ  ಸಹಕರಿಸುವುದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಗಾಗಿ ನಾವು ಯಾರನ್ನೂ ಸಂಪರ್ಕಿಸಿಲ್ಲ. ನಮಗೆ ನಮ್ಮದೇ ಆದ ರಾಜಕೀಯವಿದೆ. ವೆಲ್ಪೇರ್ ಪಕ್ಷವು ಯಾವುದೇ ಪ್ರಮುಖ ರಾಜಕೀಯ ಪಕ್ಷಗಳ ಭಾಗವಲ್ಲ. ಯಾರೊಂದಿಗೂ ಬೇಡಿಕೆ ಎತ್ತಿಲ್ಲ ಎಂದು ಅವರು ಹೇಳಿದರು.

        ಯುಡಿಎಫ್ ನಡೆಯನ್ನು ಮೊದಲು ಚರ್ಚಿಸಿದ್ದ ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್, ತನಗೆ ವೆಲ್ಪೇರ್ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇದನ್ನು ವಿವಾದವಾಗಿ ಮಾಡಲಾಯಿತೆಂದು ಹೇಳಿದ್ದರು. 

        ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯುಡಿಎಫ್ ನ ಸಾರ್ವಜನಿಕ ನಡೆ ವಿರುದ್ಧ ಸಿಪಿಎಂ ಕೋಮು ಆರೋಪಗಳನ್ನು ಹೊರಹಾಕಿತ್ತು. ಮಲಬಾರ್ ಪ್ರದೇಶದ ಕೆಲವು ಭಾಗಗಳಲ್ಲಿ ವೆಲ್ಪೇರ್ ಪಕ್ಷದೊಂದಿಗಿನ ಮೈತ್ರಿಯಿಂದ ಮುಸ್ಲಿಂ ಲೀಗ್ ಮತ್ತು ಯುಡಿಎಫ್ ಲಾಭ ಪಡೆದಿದ್ದರೂ, ಯುಡಿಎಫ್ ನ ರಾಜ್ಯವ್ಯಾಪಿ ವರ್ಚಸ್ಸಿಗೆ ವ್ಯಾಪಕವಾಗಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಸಮಸ್ತ ಮತ್ತು ಮುಸ್ಲಿಂ ಲೀಗ್‍ನ ಮತ ಬ್ಯಾಂಕ್ ಎಂದು ಕರೆಯಲ್ಪಡುವ ವೆಲ್ಪೇರ್ ಪಕ್ಷದ ಅಂಗಸಂಸ್ಥೆಯ ವಿರುದ್ಧ ಪ್ರತಿಭಟನೆಗಳು ನಡೆದವು. ಜಮಾತ್-ಎ-ಇಸ್ಲಾಮಿಯಿಂದ ಹುಟ್ಟಿದೆ ಎಂದು ಹೇಳಲಾಗುವ ಈ ಸಂಘಟನೆಯು ಕೋಮುವಾದಿ ಎಂದು ಸಮಸ್ತ ಆರೋಪಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries