HEALTH TIPS

ಅಯ್ಯಪ್ಪಾ....ಕಾಪಾಡು-ಶಬರಿಮಲೆ ಆದಾಯ ಕುಸಿತ-ದೇವಸ್ವಂ ಸಚಿವರಿಂದ ಸಹಾಯಕ್ಕಾಗಿ ಭಕ್ತರಿಗೆ ಮನವಿ!!

                  

        ಶಬರಿಮಲೆ: ದೇವಸ್ವಂ ಮಂಡಳಿಗೆ ಸಹಾಯ ಮಾಡಲು ಭಕ್ತರು ಮುಂದೆ ಬರಬೇಕು ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ. ಮಂಡಳಿಗೆ ಸರ್ಕಾರ ನೆರವು ನೀಡುತ್ತಿದೆ. ದೇವಾಲಯದ ಸಿಬ್ಬಂದಿ ಸೇರಿದಂತೆ ಕೋವಿಡ್ ಪರಿಸ್ಥಿತಿಯನ್ನು ಸರ್ಕಾರ ರಕ್ಷಿಸಿದೆ ಎಂದು ಸಚಿವರು ಹೇಳಿದರು. ಮಕರ ಬೆಳಕಿಗೆ ಸಂಬಂಧಿಸಿದಂತೆ ಸನ್ನಿಧಿಗೆ ನಿನ್ನೆ ಭೇಟಿ ನೀಡಿದ ನಂತರ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

          ಈ ವರ್ಷ ಇಲ್ಲಿಯವರೆಗೆ ಶಬರಿಮಲೆಯಲ್ಲಿ ಕೇವಲ 15 ಕೋಟಿ ರೂ.ಗಳಷ್ಟೇ ಆದಾಯ ಬಂದಿದೆ. ಆದಾಯದ ಕುಸಿತವು ಮಂಡಳಿಯ ದೇವಾಲಯಗಳ ಕಾರ್ಯನಿರ್ವಹಣೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಆದಾಯವಿಲ್ಲದ ಸಣ್ಣ ದೇವಾಲಯಗಳನ್ನು ಶಬರಿಮಲೆಯಿಂದ ಬರುವ ಆದಾಯವನ್ನು ಬಳಸಿ ನಡೆಸಲಾಗುತ್ತದೆ. ಆದಾಯದ ನಷ್ಟವನ್ನು ಸರಿದೂಗಿಸಲು ಮಾಸಿಕ ಪೂಜೆಯ ಸಮಯದಲ್ಲಿ ಹೆಚ್ಚಿನ ದಿನಗಳವರೆಗೆ ಬಾಗಿಲು ತೆರೆಯುವ ಯೋಜನೆ ಇದೆ. ಈ ಮೂಲಕ ಹೆಚ್ಚಿನ ಜನರು ಭೇಟಿ ನೀಡಲು ಸಾಧ್ಯವಾಗುವ ನಿರೀಕ್ಷೆ ಇರಿಸಲಾಗಿದೆ ಎಂದು ಅವರು ಆಶಿಸಿದ್ದಾರೆ.

         ಕೋವಿಡ್ ಹಿನ್ನೆಲೆಯಲ್ಲಿ ದೇವಸ್ವಂ ಮಂಡಳಿಯು ಈಗ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಯಾತ್ರಿಕರ ಸಂಖ್ಯೆಯಲ್ಲಿ ಇಳಿಕೆ ಮತ್ತು ಆದಾಯ ಕುಸಿತ ದೊಡ್ಡ ಮಟ್ಟದಲ್ಲಿದೆ. ಕಳೆದ ವರ್ಷ 200 ಕೋಟಿ ರೂ.ಗಳಿಗೆ ಹೋಲಿಸಿದರೆ ಈ ಬಾರಿ ಅದು ಕೇವಲ 15 ಕೋಟಿ ರೂ. ಆದ್ದರಿಂದ ಭಕ್ತರ ಸಹಾಯ ಮತ್ತು ಸಹಕಾರದಿಂದ ಮಾತ್ರ ಮುಂದೆ ಸಾಗಲು ಸಾಧ್ಯವಿದೆ ಎಂದು ಸುರೇಂದ್ರನ್ ಹೇಳಿದರು.

     ಶಬರೀಶನ ದರ್ಶನದ ನಂತರ ಸಚಿವರು ದೇವಸ್ವಂ ಕಚೇರಿಗೆ ಭೇಟಿ ನೀಡಿ ಮಕರ ಬೆಳಕಿಗೆ ಸಂಬಂಧಿಸಿದಂತೆ ಅಂತಿಮ ಸಿದ್ಧತೆಗಳನ್ನು ನಿರ್ಣಯಿಸಿದರು. ತಂತ್ರಿವರ್ಯ ಕಂಠಾರರ್ ರಾಜೀವರರು ಮತ್ತು ಮೆಲ್ಶಾಂತಿ ವಿ.ಕೆ.ಜಯರಾಜ್ ಪೋತ್ತಿ ಅವರನ್ನು ಭೇಟಿಯಾದರು. ತಿರುವಾಭರಣ ಸಂದರ್ಭ ಪ್ರಸ್ತುತಪಡಿಸಿದ ಅಭಿಷೇಕದ ತುಪ್ಪ ಮತ್ತು ಮೆಲ್ಶಾಂತಿ ಪ್ರಸಾದವನ್ನು ಸಚಿವರಿಗೆ ಹಸ್ತಾಂತರಿಸಿದರು. ಇದರ ನಂತರವೇ ಸಚಿವರು ಮೆಟ್ಟಿಲುಗಳಿಂದ ಹಿಂತಿರುಗಿದರು. ನಂತರ ಸಚಿವರು ವಾವರ ಮಸೀದಿಗೂ ಭೇಟಿ ನೀಡಿದರು. ಇಲ್ಲಿಯೂ ಪ್ರಸಾದವನ್ನು ಸ್ವೀಕರಿಸಿದರು. 

       ಸಚಿವರೊಂದಿಗೆ ಶಾಸಕ ರಾಜು ಅಬ್ರಹಾಂ, ದೇವಸ್ವಂ ಮಂಡಳಿಯ ಅಧ್ಯಕ್ಷ ನ್ಯಾಯವಾದಿ ಎನ್ ವಾಸು ಮತ್ತು ದೇವಸ್ವಂ ಮಂಡಳಿಯ ಸದಸ್ಯರು ನ್ಯಾಯವಾದಿ. ಕೆ.ಎಸ್.ರವಿ, ಪಿ.ಎಂ.ತಂಗಪ್ಪನ್,  ದೇವಸ್ವಂ ವಿಭಾಗದ ಪ್ರಧಾನ ಕಾರ್ಯದರ್ಶಿಕೆ.ಆರ್.ಜೋತಿಲಾಲ್, ಶಬರಿಮಲೆ ಸ್ಪೆಶಲ್ ಕಮಿಷನರ್ ಎಂ.ಮನೋಜ್, ತಿರುವಾಂಕೂರ್ ದೇವಸ್ವಂ ಬೋರ್ಡ್ ಕಮಿಷನರ್ ಬಿ.ಎಸ್.ತಿರುಮೇನಿ ಮೊದಲಾದವರಿದ್ದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries