ಕುಂಬಳೆ: ಕುಂಬಳೆ ಸಮೀಪದ ಇಚ್ಲಂಗೋಡು ಅಣೆಕಟ್ಟಿನಲ್ಲಿ ಸ್ನಾನಕ್ಕೆಂದು ನೀರಿಗಿಳಿದ ಸಹೋದರರು ಮುಳುಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.
ಷರೀಫ್ ಅವರ ಪುತ್ರರಾದ ಶಹಾದಾದ್ (12) ಮತ್ತು ಶಾಸಿನ್ (8) ಬಂಬ್ರಾಣದ ಅಣೆಕಟ್ಟಲ್ಲಿ ಭಾನುವಾರ ಸಂಜೆ 6ರ ವೇಳೆಗೆ ಈಜಾಡಲು ತೆರಳಿದವರು ಆಳವಾದ ನೀರಿನ ಕೆಸರಲ್ಲಿ ಹೂತು ಮೇಲೇಳರಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿರುವಂತೆ ದೌಡಾಯಿಸಿ ಆಗಮಿಸಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದರು ಆದರೆ ಇಬ್ಬರು ಮಕ್ಕಳನ್ನೂ ರಕ್ಷಿಸಲಾಗಲಿಲ್ಲ. ಬಳಿಕ ಕುಂಬಳೆ ಪೋಲೀಸ್ ಎಸ್.ಐ. ಸಂತೋಷ್ ನೇತೃತ್ವದ ತಂಡ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿ ಶವಗಳನ್ನು ಕಾಸರಗೋಡು ತಾಲೂಕು ಆಸ್ಪತ್ರೆಗೆ ಕೊಂಡೊಯ್ದರು.