HEALTH TIPS

ಭಾರತದ ದೀರ್ಘಾವಧಿಯ ಬೆಳವಣಿಗೆಗೆ ಸುಧಾರಣಾ ಕ್ರಮ ತೆಗೆದುಕೊಳ್ಳಲು ಕೋವಿಡ್-19 ಅಡ್ಡಿಯಾಗಲಿಲ್ಲ: ನಿರ್ಮಲಾ ಸೀತಾರಾಮನ್

       ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಂತಹ ಕಠಿಣ ಸವಾಲುಗಳು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುವುದರಿಂದ ಸರ್ಕಾರವನ್ನು ಹಿಂದೆ ಸರಿಯುವಂತೆ ಮಾಡಿಲ್ಲ. ದೇಶ ದೀರ್ಘಾವಧಿಯವರೆಗೆ ಉಳಿದು ಬೆಳೆಯಲು ಅಗತ್ಯ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಆ ಕೆಲಸವನ್ನು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.


      ತಿಂಗಳ ಆರಂಭದಲ್ಲಿ ಮಂಡಿಸಿದ್ದ ಕೇಂದ್ರ ಬಜೆಟ್ ನ ಮೇಲಿನ ಚರ್ಚೆಗೆ ಇಂದು ಲೋಕಸಭೆಯಲ್ಲಿ ಉತ್ತರಿಸಿದ ಸಚಿವೆ, ಸರ್ಕಾರದ ಸುಧಾರಣಾ ಕ್ರಮಗಳಿಂದ ಮುಂದಿನ ದಶಕಗಳಲ್ಲಿ ಭಾರತ ದೇಶ ವಿಶ್ವದಲ್ಲಿಯೇ ಉನ್ನತ ಆರ್ಥಿಕ ರಾಷ್ಟ್ರದ ಸ್ಥಾನದಲ್ಲಿ ನಿಲ್ಲಿಸಲು ದಾರಿ ಮಾಡಿಕೊಡಲಿದೆ ಎಂದರು.

ಸರ್ಕಾರ ಪ್ರೋತ್ಸಾಹಕ ಪೂರ್ವ ಸುಧಾರಣೆಗಳನ್ನು ಮಾಡುತ್ತಿದೆ. ದೀರ್ಘಕಾಲದವರೆಗೆ    ಬೆಳವಣಿಗೆಯನ್ನು ಕಾಪಾಡಲು ಕೋವಿಡ್-19ನಂತಹ ಸಾಂಕ್ರಾಮಿಕ ಸಮಸ್ಯೆಗಳು ನಮ್ಮನ್ನು ದೃತಿಗೆಡಿಸಿಲ್ಲ. ನಾವು ತೆಗೆದುಕೊಂಡಿರುವ ಸುಧಾರಣಾ ಕ್ರಮಗಳು ಸದ್ಯದ ಮಟ್ಟಿಗೆ ಮಾತ್ರವಲ್ಲ ಮತ್ತು ಒಂದೆರಡಲ್ಲ. ನೀತಿಗಳ ಆಧಾರದಲ್ಲಿ ತೆಗೆದುಕೊಂಡಿರುವ ಸುಧಾರಣೆಗಳು ದೇಶದ ಜನತೆಗೆ ಚೆನ್ನಾಗಿ ಅರ್ಥವಾಗುವ ರೀತಿಯಲ್ಲಿದೆ, ಇದರಿಂದ ಮುಂದಿನ ದಶಕಗಳಲ್ಲಿ ಭಾರತದ ಆರ್ಥಿಕತೆ ಇನ್ನಷ್ಟು ಎತ್ತರಕ್ಕೆ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

        ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಭಾರತ ಆರಂಭದಿಂದಲೇ ಕೈಗೊಂಡ ಕ್ರಮಗಳಿಂದಾಗಿ ವಿಶ್ವದಲ್ಲಿಯೇ ಸಾವಿನ ಪ್ರಮಾಣ ಭಾರತದಲ್ಲಿ ಕಡಿಮೆಯಿದೆ. ಸಕ್ರಿಯ ಕೇಸುಗಳು ಸಹ ಇಳಿಮುಖವಾಗುತ್ತಿವೆ. ಭಾರತೀಯ ಉದ್ಯಮಶೀಲ ಕೌಶಲ್ಯಗಳು, ಭಾರತೀಯ ವ್ಯವಸ್ಥಾಪಕ ಕೌಶಲ್ಯಗಳು, ಭಾರತೀಯ ವ್ಯಾಪಾರ ಕೌಶಲ್ಯಗಳು, ಭಾರತೀಯ ವ್ಯಾಪಾರ ಕೌಶಲ್ಯಗಳು, ಭಾರತೀಯ ಯುವಕರು, ಜನ ಸಂಘವನ್ನು ಗೌರವಿಸಿದ ಬಿಜೆಪಿ ಭಾರತದಲ್ಲಿ ಸತತವಾಗಿ ನಂಬಿಕೆ ಇಟ್ಟಿದೆ.ನಾವು ಎಲ್ಲಿಂದಲೋ ಎರವಲು ಪಡೆದು ಹೈಬ್ರಿಡ್ ನ್ನು ದೇಶದ ಜನತೆಗೆ ನೀಡಲಿಲ್ಲ ಎಂದರು.

ದೇಶದ ಆರೋಗ್ಯ ವಲಯದಲ್ಲಿ ಸರ್ಕಾರದ ಅನುದಾನ ಮತ್ತು ಹೂಡಿಕೆ ಹೆಚ್ಚಾಗಿದೆ. ಬಜೆಟ್ ನಲ್ಲಿ ಸರ್ಕಾರ ಆರೋಗ್ಯ ವಲಯದಲ್ಲಿ ಸಮಗ್ರ ವಿಧಾನವನ್ನು ಪರಿಗಣಿಸಿ ಅದರಂತೆ ನಡೆದುಕೊಳ್ಳುತ್ತದೆ ಎಂದು ಹೇಳಿದ್ದೆ. ತಡೆಗಟ್ಟುವ ಆರೋಗ್ಯ, ಗುಣಪಡಿಸುವ ಆರೋಗ್ಯ ಮತ್ತು ಎಲ್ಲರ ಒಳಿತಿಗಾಗಿ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸುತ್ತದೆ.

      ಈ ಬಾರಿಯ ಬಜೆಟ್ ನ್ನು ಪ್ರಧಾನ ಮಂತ್ರಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಗಳಿಸಿದ ಅನುಭಗಳಿಂದ ಪಡೆಯಲಾಗಿದೆ. 1991ರ ಉತ್ತರ ಭಾಗದಲ್ಲಿ ಪಂಚಾಯತ್ ರಾಜ್ ಕೋಟಾಗೆ ಅನುಮತಿ ನೀಡಿದ್ದ ಸಮಯದಲ್ಲಿ ಅನೇಕ ಪುನಶ್ಚೇತನಗಳು ನಡೆದವು. ಅಲ್ಲಿನ ಅನುಭವಗಳನ್ನು, ಸುಧಾರಣೆಗೆ ಬೇಕಾದ ಬದ್ಧತೆಯನ್ನು ಈ ಬಜೆಟ್ ನಲ್ಲಿ ಬೆರೆಸಲಾಗಿದೆ ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries