ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ( ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿಂದು ಅಂಗೀಕಾರಗೊಂಡಿತು.
ರಾಜ್ಯಸಭೆಯಲ್ಲಿ ಈಗಾಗಲೇ ಅಂಗೀಕಾರಗೊಂಡಿರುವ ಜಮ್ಮು ಮತ್ತು ಕಾಶ್ಮೀರ ಕೇಡರ್ ನ ನಾಗರಿಕ ಸೇವಾ ಅಧಿಕಾರಿಗಳನ್ನು ಅರುಣಾಚಾಲ ಪ್ರದೇಶ, ಗೋವಾ, ಮೀಜೋರಾಂ ಕೇಂದ್ರಾಡಳಿತ ಪ್ರದೇಶ (ಎಜಿಎಂಯುಟಿ) ಕೇಡರ್ ನೊಂದಿಗೆ ವಿಲೀನಗೊಳಿಸುವ ಜಮ್ಮು- ಕಾಶ್ಮೀರ ಪುನರ್ ರಚನೆ ತಿದ್ದುಪಡಿ ಮಸೂದೆ 2021 ಲೋಕಸಭೆಯಲ್ಲಿಂದು ಧ್ವನಿಮತದಿಂದ ಅಂಗೀಕಾರಗೊಂಡಿತು.
ಮಸೂದೆಯನ್ನು ಬದಲಿಸಿದ ಸುಗ್ರೀವಾಜ್ಞೆಯನ್ನು ವಿರೋಧಿಸುವ ಶಾಸನಬದ್ಧ ನಿರ್ಣಯವನ್ನು ಸದನವು ತಿರಸ್ಕರಿಸಿತು. ಈ ತಿದ್ದುಪಡಿಯನ್ನು ಕೂಡಾ ಧ್ವನಿ ಮತದಿಂದ ಸೋಲಿಸಲಾಯಿತು.