HEALTH TIPS

ಎಲ್ಡಿಎಫ್ ಅನ್ಯಾಯವೆಸಗಿದೆ-ಮಾಣಿ ಸಿ ಕಾಪ್ಪನ್ ಎಲ್ಡಿಎಫ್ ತೊರೆದು ಯುಡಿಎಫ್ ತೆಕ್ಕೆಗೆ

       ಕೊಟ್ಟಾಯಂ: ಎನ್.ಸಿ.ಪಿ.ಶಾಸಕ ಮಾಣಿ ಸಿ ಕಾಪ್ಪನ್ ಎಲ್ಡಿಎಫ್ ತೊರೆದಿದ್ದಾರೆ. ಅವರು ಯುಡಿಎಫ್‍ನಲ್ಲಿ ಘಟಕ ಪಕ್ಷವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿರುವರು. ಐಶ್ವರ್ಯ ಕೇರಳ ಯಾತ್ರೆಯಲ್ಲಿ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಸಮಕ್ಷಮ ಇಂದು ಯುಡಿಎಫ್ ಗೆ ಅಧಿಕೃತವಾಗಿ ಕಾಪ್ಪನ್ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. 

          ಏಳು ಜಿಲ್ಲಾಧ್ಯಕ್ಷರು ಮತ್ತು 18 ರಾಜ್ಯ ಪದಾಧಿಕಾರಿಗಳಲ್ಲಿ ಒಂಬತ್ತು ಮಂದಿ ಯುಡಿಎಫ್ ಗೆ ಮಾಣಿ ಸಿ.ಕಾಪ್ಪನ್ ಅವರೊಂದಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಪಾಲಾದಲ್ಲಿ ಯುಡಿಎಫ್ ಕಾರ್ಯಕರ್ತರ ಬೆಂಬಲ ಅವರಿಗಿದೆ. ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್ ಜೊತೆ ಈ ಬಗ್ಗೆ ಚರ್ಚಿಸಲಿಲ್ಲ ಎನ್ನಲಾಗಿದ್ದು, ಚರ್ಚೆ ನಡೆದಿಲ್ಲ. ಎನ್.ಸಿ.ಪಿ ಕೇಂದ್ರ ನಾಯಕತ್ವ ವಿರೋಧ ವ್ಯಕ್ತಪಡಿಸದು ಎಂದು ಕಾಪ್ಪನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

          ಇದೀಗ ಹೊಸ ಪಕ್ಷದ ಬಗ್ಗೆ ಯೋಚಿಸುತ್ತಿಲ್ಲ. ಪಾಲಾ ಜನರಿಗೆ ಅದು ತಿಳಿದಿದೆ. ಮಾಣಿ ಸಿ ಕಾಪ್ಪನ್ ಅವರು ಪಾಲಾದಲ್ಲಿ ಮತ್ತೆ ದೊಡ್ಡ ಬಹುಮತದೊಂದಿಗೆ ಗೆಲ್ಲುತ್ತಾರೆ ಎಂಬ ಭರವಸೆಯನ್ನು ಹಂಚಿಕೊಂಡರು. ಪಾಲಾ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡದೆ ಎಡಪಂಥೀಯರು ಅನ್ಯಾಯವಾಗಿ ವರ್ತಿಸುತ್ತಿದ್ದಾರೆ ಎಂದು ಎನ್.ಸಿ.ಪಿ. ಮುಖಂಡ ಮಾಣಿ ಸಿ ಕಾಪ್ಪನ್ ಈ ಹಿಂದೆ ಹೇಳಿದ್ದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries