HEALTH TIPS

ಟ್ವೆಂಟಿ-20 ಆಲ್ ಔಟ್ ಗೊಳಿಸಲು ಯತ್ನ-ಬೆರಗುಗೊಂಡ ನಟ ಶ್ರೀನಿವಾಸನ್-ಶ್ರೀನಿವಾಸನ್ ಕಲಿಕೆಯ ವೇಳೆ ಎಬಿವಿಪಿ ಕಾರ್ಯಕರ್ತರಾಗಿದ್ದರು-ಪಿ.ಜಯರಾಜನ್ ಹೇಳಿಕೆ

        

         ಕಣ್ಣೂರು: ಸಿಪಿಎಂ ನಾಯಕ ಪಿ.ಜಯರಾಜನ್ ಟ್ವೆಂಟಿ -20 ಗೆ ಸೇರಿದ ನಟ ಶ್ರೀನಿವಾಸನ್ ಅವರನ್ನು ಅಪಹಾಸ್ಯ ಮಾಡಿದ್ದಾರೆ. ಶ್ರೀನಿವಾಸನ್ ರಾಜಕೀಯ ಪಕ್ಷವೊಂದಕ್ಕೆ ಸೇರಿದ ವ್ಯಕ್ತಿ ಮತ್ತು ಅವರು ರಾಜಕೀಯವನ್ನು ಸರಿಯಾಗಿ ಅರ್ಥಮಾಡಿಕೊಂಡ ವ್ಯಕ್ತಿಯಲ್ಲ ಎಂದು ಜಯರಾಜನ್ ಹೇಳಿದ್ದಾರೆ.

        ಶ್ರೀನಿವಾಸನ್ ತಮ್ಮ ಅಧ್ಯಯನದ ಸಮಯದಲ್ಲಿ ಎಬಿವಿಪಿ ಕಾರ್ಯಕರ್ತರಾಗಿದ್ದರು. ಬಳಿಕ ಎಡಪಂಥೀಯ ರಾಜಕಾರಣದೊಂದಿಗೆ ಸಹಕರಿಸಿದ್ದರು ಎಂದು ಜಯರಾಜನ್ ಹೇಳಿದರು.ಶ್ರೀನಿವಾಸನ್ ಅವರ ನಟನೆ ಬಗ್ಗೆ ತಮಗೆ ಗೌರವವಿದೆ ಎಂದು ಜಯರಾಜನ್ ಹೇಳಿದ್ದಾರೆ.

         ಅಂಬಾನಿ ಅದಾನಿಗಳು ಟ್ವೆಂಟಿ -20 ಯಂತಹ ಪರ್ಯಾಯ ಸಂಘಟನೆ ರೂಪಿಸಿ ವಿಕಾಸಗೊಳ್ಳುತ್ತಿರುವ ಆವೃತ್ತಿಯಾಗಿದ್ದು, ಜನರನ್ನು ವಶದಲ್ಲಿರಿಸಿಕೊಳ್ಳುವುದು ಇದರ ಹಿಂದಿರುವ ಏಕ ಉದ್ದೇಶವಾಗಿದೆ ಎಂದು ಜಯರಾಜನ್ ಹೇಳಿದರು.

          ಇನ್ನೊಂದೆಡೆ ಸೋಮವಾರ ನಡೆದ ಟ್ವಿಂಟಿ-20 ಚುನಾವಣಾ ಸಭೆಯಲ್ಲಿ ಭಾಗವಹಿಸಿದ  ಶ್ರೀನಿವಾಸನ್ ಅವರು ಜಾತ್ಯತೀತತೆ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ವಾದಗಳು ಮೋಸದ ಸಂಗತಿಯಾಗಿದೆ ಮತ್ತು ಪುನರುಜ್ಜೀವನ ಏನೆಂದು ತನಗೆ ತಿಳಿದಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಜಯರಾಜನ್ ಹೇಳಿಕೆ ನೀಡಿದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries