ಬೆಂಗಳೂರು: ಭಾರತ ಈಗಾಗಲೇ ಕೋವಿಡ್-19ರ ವಿರುದ್ಧ ಎರಡು ಲಸಿಕೆಗಳನ್ನು ಯಶಸ್ವಿಯಾಗಿ ಸಂಶೋಧನೆ ನಡೆಸಿ ಪ್ರಪಂಚದ ಅನೇಕ ದೇಶಗಳಿಗೆ ಉಚಿತವಾಗಿ ವಿತರಿಸಿದೆ. ಇದೀಗ ಮೂರನೇ ಲಸಿಕೆ ಸಿದ್ಧತೆ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ಆರ್ಎಸ್ಎಸ್ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ಐಸಿಎಂಆರ್ನಿಂದ ಮೂರನೇ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಕ್ಲಿನಿಕಲ್ ಟ್ರಯಲ್ನಲ್ಲಿರುವ ಈ ಲಸಿಕೆಯನ್ನು ದೇಶದ ಪ್ರಮುಖ ವ್ಯಕ್ತಿಗಳಿಗೆ ನೀಡಲಾಗುತ್ತಿದೆ. ಕಳೆದ ತಿಂಗಳು ಎಡಗೈಗೆ ಮೊದಲನೆ ಹಾಗೂ ಇತ್ತೀಚೆಗೆ ಬಲಗೈಗೆ ಎರಡನೇ ಲಸಿಕೆ ಪಡೆದುಕೊಂಡಿದ್ದೇನೆ. ಏನೂ ತೊಂದರೆಯಾಗಿಲ್ಲ. ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ, ಆದರೆ ಯಾವ ಹೆಸರಿಡುತ್ತಾರೆ ತಿಳಿದಿಲ್ಲ ಎಂದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾರತ-ಟಿಬೆಟ್ ಸಹಯೋಗ ಮಂಚ್ ಆಯೋಜಿಸಿದ್ದ ದಕ್ಷಿಣ ಭಾರತ ಸಮ್ಮೇಳನ-2021ರಲ್ಲಿ ಅವರು ಮಾತನಾಡಿದರು.