ತಿರುವನಂತಪುರ: ಇಂಧನ ಬೆಲೆ ಏರಿಕೆ ವಿರೋಧಿಸಿ ಜಂಟಿ ವಾಹನ ಮುಷ್ಕರ ಸಮಿತಿ ನಾಳೆ ಕರೆನೀಡಿರು ವಾಹನ ಮುಷ್ಕರದ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ವಿವಿಧ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಎಸ್.ಎಸ್.ಎಲ್.ಸಿ, ಹೈಯರ್ ಸೆಕೆಂಡರಿ ಮತ್ತು ಪೊಕೇಶನಲ್ ಹೈಯರ್ ಸೆಕೆಂಡರಿ ಮಾದರಿ ಪರೀಕ್ಷೆಗಳನ್ನು ಎಂಟನೇ ದಿನಾಂಕಕ್ಕೆ ಮುಂದೂಡಲಾಗಿದೆ.
ಎಂ. ಜಿ. ವಿಶ್ವವಿದ್ಯಾಲಯ, ಕೇರಳ ವಿಶ್ವವಿದ್ಯಾಲಯ, ಎಪಿಜೆ ಅಬ್ದುಲ್ ಕಲಾಂ ಟೆಕ್ನಾಲಜಿ ವಿಶ್ವವಿದ್ಯಾಲಯ (ಕೆಟಿಯು) ಮತ್ತು ಕಾಲಡಿ ಸಂಸ್ಕøತ ವಿಶ್ವವಿದ್ಯಾಲಯವು ನಾಳೆ ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ.
ಮುಷ್ಕರ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಇರುತ್ತದೆ. ಬಿ.ಎಂ.ಎಸ್. ಹೊರತುಪಡಿಸಿ ಎಲ್ಲಾ ಕಾರ್ಮಿಕ ಸಂಘಗಳು ಮುಷ್ಕರದಲ್ಲಿ ಭಾಗವಹಿಸುತ್ತವೆ. ಕೆ.ಎಸ್.ಆರ್.ಟಿ.ಸಿ. ಸಂಘಗಳು ಮತ್ತು ಖಾಸಗಿ ಬಸ್ ಸಂಸ್ಥೆಗಳು ಸಹಕರಿಸುತ್ತವೆ ಎಂದು ಮುಷ್ಕರ ಸಮಿತಿ ಮುಖಂಡರು ತಿಳಿಸಿದ್ದಾರೆ. ವಾಹನ ಮುಷ್ಕರ ಸಂಪೂರ್ಣ ಹರತಾಳವಾಗುವ ನಿರೀಕ್ಷೆಯಿದೆ.