HEALTH TIPS

ನಾಳೆ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ-ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

           ತಿರುವನಂತಪುರ: ರಾಜ್ಯದ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಸಿದೆ. ಗುರುವಾರ ಮಧ್ಯಾಹ್ನ 2 ರಿಂದ ರಾತ್ರಿ 10 ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ತಡರಾತ್ರಿಯವರೆಗೂ ಸುರಿಯಬಹುದು ಎಂದಿದೆ. ಗುಡ್ಡಗಾಡು ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ತಿಳಿಸಿದೆ.


        ಈಗ ಬೀಳುವ ಮಳೆಯ ವೇಳೆ ಉಂಟಾಗುವ ಮಿಂಚು ಅಪಾಯಕಾರಿ. ಅವು ಮಾನವನ ಜೀವನಕ್ಕೆ ಮತ್ತು ವಿದ್ಯುತ್ ವಾಹಕಗಳಿಗೆ ಸಂಪರ್ಕ ಹೊಂದಿದ ಉಪಕರಣಗಳಿಗೆ ಹೆಚ್ಚಿನ ಹಾನಿ ಉಂಟುಮಾಡಬಹುದು. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಿಂಚನ್ನು ರಾಜ್ಯ ವಿಶೇಷ ವಿಪತ್ತು ಎಂದು ಘೋಷಿಸಿದೆ. ಆದ್ದರಿಂದ, ಸಾರ್ವಜನಿಕರು ಮೋಡವನ್ನು ಕಂಡ  ಕ್ಷಣದಿಂದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಮೋಡ ಕವಿದ ವಾತಾವರಣ ಕಂಡಲ್ಲಿ ಮಕ್ಕಳು ತೆರೆದ ಗಾಳಿಯಲ್ಲಿ ಅಥವಾ ಟೆರೇಸ್‍ನಲ್ಲಿ ಆಟವಾಡದಂತೆ ಗಮನಿಸಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries