HEALTH TIPS

ರಾಜ್ಯದ ಅನೇಕ ಭಾಗಗಳಲ್ಲಿ ಲಸಿಕೆ ಕೊರತೆ; ಖಾಸಗಿ ಆಸ್ಪತ್ರೆಗಳಲ್ಲಿ ವಿತರಣೆ ನಿಲುಗಡೆ!

                           

        ತಿರುವನಂತಪುರ: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕೋವಿಡ್ ಲಸಿಕೆ ಕೊರತೆಯಾಗಿರುವುದು ವರದಿಯಾಗಿದೆ. ಲಸಿಕೆ ಪೂರೈಕೆಯ ಕೊರತೆಯಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವುದನ್ನು ಎರಡು ದಿನಗಳವರೆಗೆ ಸ್ಥಗಿತಗೊಳಿಸಲಾಗಿದೆ. ಅನರ್ಹರಿಗೆ ಲಸಿಕೆ ಹಾಕಲಾಗಿದೆ ಎಂದು ದೂರುಗಳೂ ಕೇಳಿಬಂದಿದೆ. 


          ಚುನಾವಣಾ ಕರ್ತವ್ಯಕ್ಕೆ ಹಾಜರಾಗುವವರ ನೆಪದಲ್ಲಿ ಅನರ್ಹರನ್ನು ರಾಜ್ಯದ ಮೆಗಾ ವ್ಯಾಕ್ಸಿನೇಷನ್ ಕ್ಯಾಂಪ್‍ಗಳಲ್ಲಿ ತುಂಬಿಸಲಾಯಿತು ಎಂದು ಆರೋಪಿಸಲಾಗಿದೆ. ಲಸಿಕೆ ಸ್ವೀಕರಿಸಲು ತಿರುವನಂತಪುರದ ಕೇಂದ್ರವೊಂದಕ್ಕೆ ಆಗಮಿಸಿದ ಅನೇಕ ಹಿರಿಯ ನಾಗರಿಕರಿಗೆ ನಿನ್ನೆ ಒಂದು ವಾರದ ನಂತರ ಆಗಮಿಸಲು ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

       ಪ್ರಸ್ತುತ ದೇಶದಲ್ಲಿ ಲಸಿಕೆಯ ಎರಡನೇ ಹಂತದ ವಿತರಣೆ ನಡೆಯುತ್ತಿದೆ.  ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಪ್ರಮುಖ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. ಎರಡನೇ ಹಂತದಲ್ಲಿ, ಲಸಿಕೆಯನ್ನು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಇತರ ರೋಗಿಗಳಿಗೆ ನೀಡಲಾಗುತ್ತಿದೆ. ಕೋವಿಡ್ ಈ ವರ್ಗದಲ್ಲಿ ಹೆಚ್ಚು ಪರಿಗಣಿಸಲಾಗುತ್ತಿದ್ದು, ಆರೋಗ್ಯ ನಿರ್ವಹಣೆಯಲ್ಲಿ ಏರುಪೇರಾಗಬಹುದೆಂಬ ನೆಲೆಯಲ್ಲಿ ಕೊಡಲಾಗುತ್ತಿದೆ. ಇದಲ್ಲದೆ, ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಲಸಿಕೆ ಹಾಕಲಾಗುತ್ತಿದೆ.

         ತಿರುವನಂತಪುರಂ ಜಿಲ್ಲೆಯಲ್ಲಿ ಲಸಿಕೆ ಕೊರತೆ ಹೆಚ್ಚು ಎಂದು ವರದಿಯಾಗಿದೆ. ಆನ್‍ಲೈನ್‍ನಲ್ಲಿ ನೋಂದಾಯಿಸಿ ಆಗಮಿಸಿದವರಿಗೆ ಒಂದು ವಾರದ ನಂತರ ಬರುವಂತೆ ಸೂಚನೆ ನೀಡಲಾಯಿತು. ಆದರೆ, ಪ್ರಸ್ತುತ ನಿರ್ಬಂಧವು ಎರಡು ದಿನಗಳವರೆಗೆ ಮಾತ್ರ ಮತ್ತು ಮಾರ್ಚ್ 9 ರೊಳಗೆ 21 ಲಕ್ಷ ಡೋಸ್ ಲಸಿಕೆ ಲಭ್ಯವಿರುತ್ತದೆ ಎಂದು ಸರ್ಕಾರ ಹೇಳಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries