ತಿರುವನಂತಪುರ: ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ, ಇಂದಿನಿಂದ ಎರಡು ವಾರಗಳವರೆಗೆ ರಾಜ್ಯದಲ್ಲಿ ರಾತ್ರಿ ಕಫ್ರ್ಯೂ ಘೋಷಿಸಲಾಗಿದೆ. ಕಫ್ರ್ಯೂ ರಾತ್ರಿ ಒಂಬತ್ತರಿಂದ ಬೆಳಿಗ್ಗೆ ಐದು ರವರೆಗೆ ಇರುತ್ತದೆ.
ರಾತ್ರಿ ಪಾಳಿಯಲ್ಲಿ ವೈದ್ಯಕೀಯ ಮಳಿಗೆಗಳು, ಪೆಟ್ರೋಲ್ ಪಂಪ್ಗಳು, ಪತ್ರಿಕೆಗಳು, ಹಾಲು ಮತ್ತು ಮಾಧ್ಯಮ ಕಾರ್ಯಕರ್ತರಿಗೆ ವಿನಾಯಿತಿ ನೀಡಲು ಸರ್ಕಾರ ಆದೇಶಿಸಿದೆ.
ಬೋಧನಾ ತರಗತಿಗಳನ್ನು ಅನುಮತಿಸಲಾಗುವುದಿಲ್ಲ. ಆನ್ಲೈನ್ ತರಗತಿಗಳನ್ನು ಮಾತ್ರ ಅನುಮತಿಸಲಾಗಿದೆ. ಪಿಎಸ್ಸಿ ಪರೀಕ್ಷೆಗಳನ್ನು ಮೇ ವರೆಗೆ ಅನುಮತಿಸಲಾಗುವುದಿಲ್ಲ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಸಾಧ್ಯವಾದಲ್ಲೆಲ್ಲಾ ಮನೆಯಿಂದಲೇ ಕೆಲಸ ನಿರ್ವಹಿಸುವ ವರ್ಕ್ ಪ್ರಂ ಹೋಂ ಕ್ರಮಗಳನ್ನು ಜಾರಿಗೆ ತರಬೇಕು. ಆರಾಧನಾಲಯಗಳಿಗೆ ಭೇಟಿ ನೀಡುವವರ ಸಂಖ್ಯೆಯನ್ನು ಕಡಿಮೆ ಮಾಡಬೇಕು. ಪೂಜಾ ಸೇವೆಗಳನ್ನು ಆನ್ಲೈನ್ನಲ್ಲಿ ಕಾಯ್ದಿರಿಸಬೇಕು ಎಂದು ಸೂಚಿಸಲಾಗಿದೆ.
ಚಿತ್ರಮಂದಿರಗಳು, ಮಾಲ್ಗಳು ಮತ್ತು ಮಲ್ಟಿಪ್ಲೆಕ್ಸ್ಗಳ ಸಮಯವನ್ನು ಸಂಜೆ 7: 30 ಕ್ಕೆ ಇಳಿಸಲಾಗಿದೆ. ಸಾರ್ವಜನಿಕ ಸಾರಿಗೆ ಮತ್ತು ಸರಕು ಸಾಗಣೆಗೆ ಯಾವುದೇ ನಿರ್ಬಂಧಗಳಿಲ್ಲ. ಜೊತೆಗೆ ಸೀಮಿತ ಸಂಖ್ಯೆಯ ಜನರು ಟ್ಯಾಕ್ಸಿಗಳಲ್ಲಿ ಪ್ರಯಾಣಿಸಲು ಅಡ್ಡಿಯಿಲ್ಲ.
ರಾತ್ರಿ 9 ಗಂಟೆಯ ಬಳಿಕ ಹೋಟೆಲ್ ಗಳಿಂದ ಪಾರ್ಸೆಲ್ಗಳನ್ನು ನೀಡಲಾಗುವುದಿಲ್ಲ. ಹೋಟೆಲ್ಗಳಲ್ಲಿ ಕುಳಿತು ಆಹಾರ ಸೇವಿಸುವವರ ಸಂಖ್ಯೆಯನ್ನು ಏಕಕಾಲದಲ್ಲಿ ಶೇ.50ಕ್ಕೆ ಇರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.