HEALTH TIPS

ಜಾಗ್ರತ ಪೋರ್ಟಲ್‌ನಲ್ಲಿಲ್ಲದವರಿಗೆ ಕೇರಳಕ್ಕೆ ಪ್ರವೇಶವಿರುವುದಿಲ್ಲ; ನಾಳೆಯಿಂದ ಗಡಿಗಳಲ್ಲಿ ಪರಿಶೀಲನೆ



 
       ತಿರುವನಂತಪುರ: ಅಂತರ್ ರಾಜ್ಯ ಪ್ರಯಾಣದ ಮೇಲೆ ಕೇರಳ ಕೂಡ ತನ್ನ ನಿಯಂತ್ರಣ ಬಿಗಿಗೊಳಿಸುತ್ತಿದೆ.  ವಾಳಯಾರ್ ಗಡಿಯ ಮೂಲಕ ಕೇರಳಕ್ಕೆ ಪ್ರವೇಶಿಸಲು ವಿಜಿಲೆನ್ಸ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಮತ್ತು ಪೊಲೀಸರು ತಿಳಿಸಿದ್ದಾರೆ.  ನಾಳೆಯಿಂದ ತಪಾಸಣೆ ಬಿಗಿಗೊಳಿಸಲಾಗುವುದು.  ನೋಂದಣಿ ಇಲ್ಲದೆ ಗಡಿಗೆ ಬರಬೇಕಾಗಿಲ್ಲ , ಆದ್ದರಿಂದ ನೋಂದಣಿ ನಂತರವಷ್ಟೇ  ಗಡಿದಾಟಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
     ರಾಜ್ಯದ ಹೊರಗಿನಿಂದ ಮತ್ತು ಇತರ ರಾಜ್ಯಗಳಿಂದ ಬರುವವರಿಗೆ ಕೊರೋನಾ ನೆಗೆಟಿವ್ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಾಗಿದ್ದು ಈ ಎಚ್ಚರಿಕೆ ನೀಡಲಾಗಿದೆ.  ಇತರ ರಾಜ್ಯಗಳಿಂದ ಬರುವವರು ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಪೂರ್ಣಗೊಳಿಸಬೇಕು.  ಆಗಮಿಸುವ 48 ಗಂಟೆಗಳ ಮೊದಲು ಮಾಡಿರುವ ವರದಿ ಅಥವಾ ತಕ್ಷಣ ಪರಿಶೀಲಿಸಿದ ವರದಿ ಹಾಜರುಪಡಿಸಬೇಕು.ತಕ್ಷಣ ಮಾಡಿದ ಪರೀಕ್ಷಾ ವರದಿಯಾದರೆ  ಫಲಿತಾಂಶ ಬರುವವರೆಗೆ ಕ್ವಾರಂಟ್ಯೆನ್ ಗೆ ಒಳಗಾಗಬೇಕು.  ಲಸಿಕೆ ಹಾಕಿದವರಿಗೂ ಈ ನಿಯಮ ಅನ್ವಯಿಸುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
      ಕಾಸರಗೋಡಿನ ಅಂತರ್ ರಾಜ್ಯ ಗಡಿಗಳಿಗೂ ಈ ನಿಯಮಗಳು ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries