HEALTH TIPS

ಕುಂಬಳೆ ಟೋಲ್ ಪ್ಲಾಜಾದಲ್ಲಿ ನಾಟಕೀಯ ಘಟನೆ: ಕಾರಿನಿಂದ ವ್ಯಕ್ತಿಯನ್ನು ಹೊರಗೆಳೆದ ಪೋಲೀಸರು; ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವಿವಾದ ಸೃಷ್ಟಿ

ಕುಂಬಳೆ: ಅರಿಕ್ಕಾಡಿ ಟೋಲ್ ಪ್ಲಾಜಾದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೆÇಲೀಸರು ಕಾರು ಚಾಲಕನನ್ನು ಬಲವಂತವಾಗಿ ಹೊರಕ್ಕೆತ್ತಿ ಕರೆದೊಯ್ದ ಘಟನೆ ವಿವಾದಾಸ್ಪದವಾಗುತ್ತಿದೆ. ಕಾರು ಚಲಾಯಿಸುತ್ತಿದ್ದ ಬೋವಿಕ್ಕಾನ ಮೂಲದ ಮೊಹಮ್ಮದ್ ರಿಯಾಸ್ (33) ಎಂಬ ಚಾಲಕನನ್ನು ಕುಂಬಳೆ ಪೋಲೀಸ್ ಠಾಣೆಯ ಎಸ್‍ಎಚ್‍ಒ ಇನ್ಸ್‍ಪೆಕ್ಟರ್ ಮುಕುಂದನ್ ಟಿಕೆ ನೇತೃತ್ವದ ತಂಡ ವಾಹನದಿಂದ ಹೊರತೆಗೆದು ಕೊಂಡೊಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪೋಲೀಸರ ವಿರುದ್ಧ ಭಾರಿ ಪ್ರತಿಭಟನೆಗೆ ಕಾರಣವಾಗಿದೆ. 


ವಿವಾದದ ಆರಂಭ:

ಈ ಘಟನೆ ಬುಧವಾರ ಸಂಜೆ 5:30 ರ ಸುಮಾರಿಗೆ ನಡೆದಿದೆ. ರಿಯಾಸ್ ತನ್ನ ಚಿಕ್ಕಮ್ಮ, ಮಕ್ಕಳು ಮತ್ತು ಆರು ತಿಂಗಳ ಮಗುವಿನೊಂದಿಗೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದರು. ಫಾಸ್ಟ್‍ಟ್ಯಾಗ್ ಮೂಲಕ ಟೋಲ್ ಪಾವತಿಸಿ ತಡೆಬೇಲಿ(ತೂಣ!)  ಎತ್ತಿದ ನಂತರ, ಕಾರು ಮುಂದೆ ಚಲಿಸುವಾಗ ತಡೆಬೇಲಿ ಅನಿರೀಕ್ಷಿತವಾಗಿ ಕೆಳಗೆ ಬಿದ್ದು ಕಾರಿನ ಗಾಜಿಗೆ ಡಿಕ್ಕಿ ಹೊಡೆದಿದೆ. ಇದನ್ನು ಪ್ರಶ್ನಿಸಿದಾಗ ಟೋಲ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಯಿತು. ಹಿಂದಿ ಮಾತನಾಡುವ ಉದ್ಯೋಗಿಯೊಂದಿಗೆ ಸಂವಹನ ನಡೆಸುವುದು ಕಷ್ಟಕರವಾಗಿದ್ದರಿಂದ ಸಮಯ ವಿಸ್ತರಿಸಲ್ಪಟ್ಟಿತು. ಮತ್ತು ಟೋಲ್ ಲೈನ್‍ನಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. 

ಟ್ರಾಫಿಕ್ ಜಾಮ್ ತಪ್ಪಿಸಲು ಮಧ್ಯಪ್ರವೇಶಿಸಿದ ಪೋಲೀಸರು ರಿಯಾಜ್ ಅವರನ್ನು ತಮ್ಮ ವಾಹನವನ್ನು ಸ್ಥಳಾಂತರಿಸುವಂತೆ ಕೇಳಿಕೊಂಡರು. ಆದರೆ, ಪೋಲೀಸರು ತಮ್ಮ ದೂರನ್ನು ಕೇಳದೆ ಮಧ್ಯಪ್ರವೇಶಿಸಿದರು ಎಂದು ರಿಯಾಜ್ ಆರೋಪಿಸಿದ್ದಾರೆ. ಇನ್ಸ್‍ಪೆಕ್ಟರ್ ಮುಕುಂದನ್ ಟಿ.ಕೆ. ಅವರು 'ಇವರೇನು ರಾಜನಾ? ಅವರ ದೂರನ್ನು ಕೇಳುವುದಾಗಿ ಹೇಳಿದ ನಂತರವೂ ಅವರು ತಮ್ಮ ಕಾರನ್ನು ಲೇನ್‍ನಿಂದ ಸ್ಥಳಾಂತರಿಸುತ್ತಿಲ್ಲ' ಎಂದು ವೈರಲ್ ವೀಡಿಯೊದಲ್ಲಿ ಕೇಳುವುದನ್ನು ಕೇಳಿಸಬಹುದು. ಸ್ಟೀರಿಂಗ್ ವೀಲ್ ಹಿಡಿದು ಹಾರ್ನ್ ಮಾಡುವ ಮೂಲಕ ಪ್ರತಿಭಟಿಸಿದ ರಿಯಾಜ್ ಅವರನ್ನು ಪೋಲೀಸರು ಬಲವಂತವಾಗಿ ಹೊರಗೆಳೆದು ಠಾಣೆಗೆ ಕರೆದೊಯ್ದರು.

ರಿಯಾಜ್ ಅವರ ಆರೋಪಗಳು:

ತನ್ನನ್ನು ತಡೆಯಲು ಪ್ರಯತ್ನಿಸಿದ ತನ್ನ ಚಿಕ್ಕಮ್ಮ ಅವರನ್ನು, ಪೋಲೀಸರ ಬಲವಂತದ ತಳ್ಳಾಟದ ವೇಳೆ ಕೈಗೆ ಗಾಯವಾಯಿತು. ಶಸ್ತ್ರಚಿಕಿತ್ಸೆಯಾದ ಕೈಗೆ ಇದೀಗ ಮತ್ತೆ ಘಾಸಿಯಾಗಿದೆ ಎಂದು ರಿಯಾಜ್ ಹೇಳಿದರು. ಬಂಧಿಸಿ ಕರೆದುಕೊಂಡು ಹೋದ ಪೋಲೀಸರು ಮಹಿಳೆಯರು ಮತ್ತು ಆರು ತಿಂಗಳ ಮಗುವನ್ನು ಟೋಲ್ ಪ್ಲಾಜಾದಲ್ಲಿ ಒಂಟಿಯಾಗಿ ಬಿಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಹೊಸ ಕೆಲಸಕ್ಕಾಗಿ ಒಮಾನ್‍ಗೆ ಹೋಗಲಿರುವ ಕಾರಣ ಈ ಘಟನೆಯು ತನ್ನ ಕೆಲಸದ ನಿರೀಕ್ಷೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಳವಳವನ್ನು ಅವರು ಹಂಚಿಕೊಂಡಿದ್ದಾರೆ.

ಪೋಲೀಸ್ ವಿವರಣೆ:

ಇನ್‍ಸ್ಪೆಕ್ಟರ್ ಮುಕುಂದನ್ ಟಿ.ಕೆ. ಪ್ರತಿಕ್ರಿಯಿಸಿ, ಚಾಲಕ ತನ್ನ ವಾಹನವನ್ನು ಸ್ಥಳಾಂತರಿಸಲು ನಿರಾಕರಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಮಾಹಿತಿ ನೀಡಿದರು. ದೂರನ್ನು ಆಲಿಸುವುದಾಗಿ ತಿಳಿಸಿದ್ದರೂ ಸಹಕರಿಸದ ಕಾರಣ ಸ್ವಲ್ಪ ಬಲಪ್ರಯೋಗ ಮಾಡಬೇಕಾಯಿತು ಎಂದು ಅವರು ಸ್ಪಷ್ಟಪಡಿಸಿದರು. ಭಾರತೀಯ ನಾಗರಿಕ ಭದ್ರತಾ ಸಂಹಿತೆಯ (ಬಿ.ಎನ್.ಎಸ್.ಎಸ್.) ಸೆಕ್ಷನ್ 170 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾದ ಯುವಕನನ್ನು ನಂತರ ಬಿಡುಗಡೆ ಮಾಡಲಾಯಿತು.

ಘಟನೆಯಲ್ಲಿ ಪೋಲೀಸರ ವಿರುದ್ಧ ರಾಜ್ಯ ಪೋಲೀಸ್ ಮುಖ್ಯಸ್ಥರು ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಲು ರಿಯಾಜ್ ಯೋಜಿಸುತ್ತಿದ್ದಾರೆ. ಜನವರಿ 14 ರಂದು ಟೋಲ್ ಪ್ಲಾಜಾ ನೆಲಸಮವಾದ ನಂತರ ಎರಡು ವಾರಗಳ ಕಾಲ ಇಲ್ಲಿ ತಡೆಗೋಡೆಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಬೂಮ್ ತಡೆಗೋಡೆಗಳು ಮತ್ತೆ ಕಾರ್ಯನಿರ್ವಹಿಸಿದ ದಿನದಂದು ಈ ಅಹಿತಕರ ಘಟನೆಗಳು ನಡೆದಿವೆ. 


https://www.facebook.com/share/r/1DmSM2QVpC/





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries