HEALTH TIPS

ಆಡಳಿತ ಮುಂದುವರಿಕೆ ಲಕ್ಷ್ಯವಿರಿಸಿ ಬಜೆಟ್ ಮಂಡನೆ: ದೊಡ್ಡ ಯೋಜನೆಗಳು; ಪರಿಸರ ಸ್ನೇಹಿ ಆಟೋಗಳನ್ನು ಖರೀದಿಸಲು 40,000 ರೂ., 10 ವರ್ಷಗಳವರೆಗಿನ ಮಕ್ಕಳಿಗೆ ಅಪಘಾತ ವಿಮೆ

ತಿರುವನಂತಪುರಂ: ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲನ್  ಎರಡನೇ ಪಿಣರಾಯಿ ಸರ್ಕಾರದ ಕೊನೆಯ ಬಜೆಟ್ ನ್ನು ಮಂಡಿಸಿದ್ದು, ಎಡರಂಗದ ನಿರಂತರ ಆಡಳಿತವನ್ನು ಗುರಿಯಾಗಿಟ್ಟುಕೊಂಡು ದೊಡ್ಡ ಯೋಜನೆಗಳನ್ನು ಘೋಷಿಸಿದಂತಿದೆ. ಬಜೆಟ್ ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರ ಗೌರವಧನವನ್ನು ಹೆಚ್ಚಿಸಿದ್ದು, ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸಾಮಾನ್ಯ ಉದ್ದೇಶದ ನಿಧಿಯಾಗಿ 3236.76 ಕೋಟಿ ರೂ.ಗಳನ್ನು ನಿಗದಿಪಡಿಸಿದೆ.

ಮನೆಯ ಬಳಿ ಕೆಲಸ ಯೋಜನೆಯನ್ನು 200 ಕೇಂದ್ರಗಳಿಗೆ ವಿಸ್ತರಿಸಲಾಗುವುದು. ಪಂಚಾಯತ್‌ಗಳಲ್ಲಿ ಮಹಿಳೆಯರ ಉದ್ಯೋಗ ತರಬೇತಿಗಾಗಿ ಕೌಶಲ್ಯ ಕೇಂದ್ರಗಳನ್ನು ಪ್ರಾರಂಭಿಸಲು 20 ಕೋಟಿ ರೂ.ಮೀಸಲಿರಿಸಲಾಗಿದೆ.

ಸೌರಶಕ್ತಿಯನ್ನು ಸಂಗ್ರಹಿಸಿ ವಿತರಿಸಲು ಪಂಚಾಯತ್‌ಗಳಲ್ಲಿ ವಿಶೇಷ ಯೋಜನೆಯನ್ನು ಕೂಡಾ ಘೋಷಿಸಲಾಯಿತು. ಬ್ಲೂ ಎಕಾನಮಿಯ ಆರಂಭಿಕ ಕೆಲಸಕ್ಕೆ 10 ಕೋಟಿ ರೂ., ನಗರಗಳಲ್ಲಿ ಕೇರಳ ಕಲಾ ಕೇಂದ್ರಗಳನ್ನು ಸ್ಥಾಪಿಸಲು 10 ಕೋಟಿ ರೂ., ಮಹಿಳಾ ಕಾರ್ಮಿಕರಿಗೆ ವಿಶ್ರಾಂತಿ ಕೇಂದ್ರಗಳು ಮತ್ತು ಆಟೋ ಕಾರ್ಮಿಕರಿಗೆ ಪರಿಸರ ಸ್ನೇಹಿ ಆಟೋಗಳನ್ನು ಖರೀದಿಸಲು 40,000 ರೂ.ಗಳನ್ನು ಬಜೆಟ್ ಘೋಷಿಸಿದೆ.

ಎಂಸಿ ರಸ್ತೆ ಅಭಿವೃದ್ಧಿಗೆ ಕೆಐಐಎಫ್‌ಬಿಯಿಂದ 5317 ಕೋಟಿ ರೂ., ಹಸಿರು ಕ್ರಿಯಾ ಸೇನೆಗೆ ಗುಂಪು ವಿಮೆ, ಕ್ಯಾನ್ಸರ್ ಮತ್ತು ಕುಷ್ಠರೋಗದಂತಹ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಪಿಂಚಣಿ ರೂ. 2,000 ಕ್ಕೆ ಏರಿಕೆ, ಆಟೋ ಟ್ಯಾಕ್ಸಿ ಕಾರ್ಮಿಕರಿಗೆ ವಿಮೆ ಮತ್ತು ಒಂದು ವರ್ಷದಿಂದ 10 ವರ್ಷದೊಳಗಿನ ಮಕ್ಕಳಿಗೆ ಅಪಘಾತ ವಿಮೆಯನ್ನು ಸಹ ಘೋಷಿಸಲಾಯಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries