ತಿರುವನಂತಪುರ: ಕೇರಳದಲ್ಲಿ ಇಂದು ಭರವಸೆ ಮೂಡಿಸುವ ರೀತಿಯಲ್ಲಿ ಏರುಗತಿಯಲ್ಲಿದ್ದ ಕೋವಿಡ್ ಸೋಂಕು ಭಾರೀ ಇಳಿಕೆ ಕಂಡಿದೆ. ಇಂದು ರಾಜ್ಯಾದ್ಯಂತ 21,402 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಮಲಪ್ಪುರಂ 2941, ತಿರುವನಂತಪುರ 2364, ಎರ್ನಾಕುಳಂ 2315, ತ್ರಿಶೂರ್ 2045, ಕೊಲ್ಲಂ 1946, ಪಾಲಕ್ಕಾಡ್ 1871, ಆಲಪ್ಪುಳ 1679, ಕಣ್ಣೂರು 1641, ಕೋಝಿಕೋಡ್ 1492, ಕೊಟ್ಟಾಯಂ 1349, ಕಾಸರಗೋಡು 597, ಪತ್ತನಂತಿಟ್ಟು 490, ಇಡುಕ್ಕಿ 461, ವಯನಾಡ್ 211 ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 86,505 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.24.74 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,80,14,842 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಸೋಂಕು ಖಚಿತಪಡಿಸಿಲ್ಲ. ಯುಕೆ (115), ದಕ್ಷಿಣ ಆಫ್ರಿಕಾ (9) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 125 ಮಂದಿಗೆ ಈವರೆಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 124 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 87 ಮಂದಿ ಕೋವಿಡ್ ಬಾಧಿತರು ಉಲ್ಬಣಗೊಂಡು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 6515 ಕ್ಕೆ ಏರಿಕೆಯಾಗಿದೆ.
ಇಂದು, ಈ ರೋಗನಿರ್ಣಯ ಮಾಡಿದವರಲ್ಲಿ 100 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 19,612 ಮಂದಿ ಜನರಿಗೆ ಸೋಂಕು ತಗುಲಿತು. 1610 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 2858, ತಿರುವನಂತಪುರ 2122, ಎರ್ನಾಕುಳಂ 2244, ತ್ರಿಶೂರ್ 2030, ಕೊಲ್ಲಂ 1938, ಪಾಲಕ್ಕಾಡ್ 986, ಆಲಪ್ಪುಳ 1675, ಕಣ್ಣೂರು 1507, ಕೋಝಿಕೋಡ್ 1452, ಕೊಟ್ಟಾಯಂ 1103, ಕಾಸರಗೋಡು 586, ಪತ್ತನಂತಿಟ್ಟು 469, ಇಡುಕ್ಕಿ 442, ವಯನಾಡ್ 200 ಎಂಬಂತೆ ಸಂಪರ್ಕದಿಂದ ಕೋವಿಡ್ ಬಾಧಿಸಿದೆ.
ಇಂದು 80 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಕಣ್ಣೂರು 24, ತಿರುವನಂತಪುರ 12, ಎರ್ನಾಕುಳಂ, ಪಾಲಕ್ಕಾಡ್ 7, ಕಾಸರಗೋಡು 6, ಕೊಲ್ಲಂ, ಪತ್ತನಂತಿಟ್ಟು, ತ್ರಿಶೂರ್, ಕೋಝಿಕೋಡ್ 5, ವಯನಾಡ್ 3 ಮತ್ತು ಕೊಟ್ಟಾಯಂ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 99,651 ಮಂದಿ ಜನರಿಗೆ ಸೋಂಕಿನಿಂದ ಮುಕ್ತಿ ನೀಡಲಾಗಿದೆ. ತಿರುವನಂತಪುರ 16,100, ಕೊಲ್ಲಂ 3899, ಪತ್ತನಂತಿಟ್ಟು 349, ಆಲಪ್ಪುಳ 6947, ಕೊಟ್ಟಾಯಂ 3004, ಇಡುಕ್ಕಿ 7005, ಎರ್ನಾಕುಳಂ 14,900, ತ್ರಿಶೂರ್ 17,884, ಪಾಲಕ್ಕಾಡ್ 1257, ಮಲಪ್ಪುರಂ 4050, ಕೊಝಿಕ್ಕೋಡ್ 5724, ವಯನಾಡ್ 6907, ಕಣ್ಣೂರು 5722, ಕಾಸರಗೋಡು 5903 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 3,62,315 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 18,00,179 ಮಂದಿ ಜನರನ್ನು ಕೋವಿಡ್ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 10,19,085 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 9,81,370 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 37,715 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 3630 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಹೊಸ ಹಾಟ್ಸ್ಪಾಟ್ ಇಲ್ಲ. ಯಾವುದೇ ಪ್ರದೇಶವನ್ನು ಹಾಟ್ಸ್ಪಾಟ್ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 853 ಹಾಟ್ಸ್ಪಾಟ್ಗಳಿವೆ.



