HEALTH TIPS

ಆಕ್ಸಿಜನ್ ಕ್ಷಾಮ: ಕಾಸರಗೋಡಿಗೆ ಅಹಮದಾಬಾದ್‍ನಿಂದ ಆಮ್ಲಜನಕ ತರಿಸಲು ಪ್ರಯತ್ನ: ಸಚಿವ ಇ ಚಂದ್ರಶೇಖರನ್

 

                ಕಾಸರಗೋಡು: ಮಂಗಳೂರಿನಿಂದ ಸರಬರಾಜು ಕಡಿತದಿಂದಾಗಿ ಕಾಸರಗೋಡಿನಲ್ಲಿ ಆಮ್ಲಜನಕದ ಬಿಕ್ಕಟ್ಟು ಉಂಟಾಗಿದೆ ಎಂದು ಸಚಿವ ಇ ಚಂದ್ರಶೇಖರನ್ ಹೇಳಿದ್ದಾರೆ. ಆಕ್ಸಿಜನ್ ಚಾಲೆಂಜ್ ಮೂಲಕ ಸುಮಾರು 160 ಆಮ್ಲಜನಕ ಸಿಲಿಂಡರ್‍ಗಳನ್ನು ಪಡೆದಿದ್ದೇನೆ ಮತ್ತು ಅಹಮದಾಬಾದ್‍ನಿಂದ ಆಮ್ಲಜನಕವನ್ನು ಪಡೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ಸಚಿವರು ಹೇಳಿದರು. ಆಕ್ಸಿಜನ್ ಕೊರತೆಯ ಹಿನ್ನೆಲೆಯಲ್ಲಿ ಜನಸಾಮಾನ್ಯರು ಭಯಭೀತರಾಗದಂತೆ ಸಚಿವರು ತಿಳಿಸಿದ್ದಾರೆ. 


               ಆಮ್ಲಜನಕದ ಕೊರತೆಯನ್ನು ನಿಯಮಿತವಾಗಿ ಆರೋಗ್ಯ ಸಚಿವರು ಮತ್ತು ಮುಖ್ಯಮಂತ್ರಿಗೆ ವರದಿ ಮಾಡಲಾಗುತ್ತದೆ. ಕಳೆದ ಕೆಲವು ದಿನಗಳಿಂದ ತೀವ್ರ ಪ್ರಮಾಣದ ಆಕ್ಸಿಜನ್ ಕೊರತೆ ಮಧ್ಯೆ ಸವಾಲುಗಳನ್ನು ಎದುರಿಸಲಾಗಿದೆ ಎಂದು ಸಚಿವರು ತಿಳಿಸಿದರು.

              ಪ್ರಸ್ತುತ ಆಮ್ಲಜನಕ ಸಿಲಿಂಡರ್ ಬೇಡಿಕೆ ಕಡಿಮೆ ಇದೆ. ಆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೀಗಿರದು ಎಂದ ಸಚಿವರು ಸಿಲಿಂಡರ್ ಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದರು. ರೋಗಿಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಿದ್ದು, ಎಂದ ಸಚಿವರು ಜಿಲ್ಲೆಯ 13 ಲಕ್ಷ ಜನಸಂಖ್ಯೆಯಲ್ಲಿ ಮೂರು ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries