HEALTH TIPS

ಜಮ್ಮು-ಕಾಶ್ಮೀರದ ನಂತರ, ಈಗ ಲಡಾಖ್, ಕಾರ್ಗಿಲ್ ಪಕ್ಷಗಳನ್ನು ಜು.1 ರಂದು ಮಾತುಕತೆಗೆ ಆಹ್ವಾನಿಸಿದ ಕೇಂದ್ರ!

            ನವದೆಹಲಿ: ಜಮ್ಮು-ಕಾಶ್ಮೀರದ ನಾಯಕರೊಂದಿಗೆ ಜೂ.24 ರಂದು ಸಭೆ ನಡೆಸಿದ ಬಳಿಕ ಈಗ ಕೇಂದ್ರ ಸರ್ಕಾರ ಲಡಾಖ್ ಮತ್ತು ಕಾರ್ಗಿಲ್ ಗಳ ನಾಯಕರೊಂದಿಗೆ ಜುಲೈ 1 ರಂದು ಸಭೆ ನಡೆಸಲು ಮುಂದಾಗಿದೆ.

        ಮಾಜಿ ಸಂಸದರು ಹಾಗೂ ಸಿವಿಲ್ ಸೊಸೈಟಿಯ ಸದಸ್ಯರನ್ನು ಮಾತುಕತೆಯ ಸಭೆಗೆ ಆಹ್ವಾನಿಸಲಾಗಿದ್ದು, ಜುಲೈ.1 ರಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆಯಲಿದೆ.

          ಜಮ್ಮು-ಕಾಶ್ಮೀರದ ನಾಲ್ವರು ಮಾಜಿ ಮುಖ್ಯಮಂತ್ರಿಗಳೂ ಸೇರಿದಂತೆ 14 ರಾಜಕೀಯ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರದಂದು ಮೂರುವರೆ ಗಂಟೆಗಳ ಕಾಲ ಸಭೆ ನಡೆಸಿದ್ದರು.

         ಜಮ್ಮು-ಕಾಶ್ಮೀರದಲ್ಲಿ ಡೀಲಿಮಿಟೇಷನ್, ಯಶಸ್ವಿ ಚುನಾವಣೆಗಳು ಹಾಗೂ ಪ್ರದೇಶದಲ್ಲಿ ಪ್ರಜಾಪ್ರಭುತ್ವದ ಪುನರ್ಸ್ಥಾಪನೆ ಮುಂತಾದ ವಿಷಯಗಳು ಚರ್ಚೆಯಾಗಿದ್ದವು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries